ETV Bharat / state

ಭಾಲ್ಕಿ ಡಿವೈಎಸ್​​ಪಿಯಿಂದ ಸರಣಿ ದಾಳಿ: ಕಳ್ಳಭಟ್ಟಿ ಅಡ್ಡೆ ಧ್ವಂಸ, ಅಪಾರ ಪ್ರಮಾಣದ ಕೊಳೆ ನಾಶ!

author img

By

Published : Apr 19, 2020, 11:51 PM IST

Bhalki DYS P series attacks, burglary rampage, enormous dirt destruction
ಭಾಲ್ಕಿ ಡಿವೈಎಸ್ ಪಿ ಸರಣಿ ದಾಳಿ, ಕಳ್ಳಭಟ್ಟಿ ದಂಧೆ ದ್ವಂಸ, ಅಪಾರ ಕೊಳೆ ನಾಶ...!

ಲಾಕ್​ಡೌನ್ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧವಾದ ಬೆನ್ನಲ್ಲೇ ಅಕ್ರಮ ಕಳ್ಳಭಟ್ಟಿ ಅಡ್ಡೆಗಳ ಮೇಲೆ ಭಾಲ್ಕಿ ಡಿವೈಎಸ್​ಪಿ ಡಾ. ದೇವರಾಜ್ ಬಿ. ನೇತೃತ್ವದಲ್ಲಿ ದಾಳಿ ಮಾಡಿ ಅಪಾರ ಪ್ರಮಾಣದ ಕೊಳೆ ನಾಶ ಮಾಡಲಾಗಿದೆ.

ಬೀದರ್: ಲಾಕ್​ಡೌನ್ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧವಾದ ಬೆನ್ನಲ್ಲೇ ಅಕ್ರಮ ಕಳ್ಳಭಟ್ಟಿ ಅಡ್ಡೆಗಳ ಮೇಲೆ ಭಾಲ್ಕಿ ಡಿವೈಎಸ್​ಪಿ ಡಾ. ದೇವರಾಜ್ ಬಿ. ನೇತೃತ್ವದಲ್ಲಿ ದಾಳಿ ಮಾಡಿ ಅಪಾರ ಪ್ರಮಾಣದ ಕೊಳೆ ನಾಶ ಮಾಡಲಾಗಿದೆ.

ಜಿಲ್ಲೆಯ ಭಾಲ್ಕಿ ತಾಲೂಕಿನ ಬಿರಿ ಗ್ರಾಮದ ಬಳಿಯ ಎಂಎಲ್​ಎ ತಾಂಡದ ಹೊರವಲಯದಲ್ಲಿ ಅಕ್ರಮವಾಗಿ ತಯಾರಿಸುತ್ತಿದ್ದ ಕಳ್ಳಭಟ್ಟಿ ಅಡ್ಡೆ ಮೇಲೆ ದಾಳಿ ಮಾಡಲಾಗಿದೆ. ಈ ವೇಳೆ 200 ಲೀಟರ್ ಕೊಳೆ ನಾಶ ಮಾಡಿ, 2 ಲಿಟರ್ ಕಳ್ಳಭಟ್ಟಿ ಜಪ್ತಿ ಮಾಡಿಕೊಂಡಿದ್ದಾರೆ.

ಅಲ್ಲದೆ ಭಾಲ್ಕಿ ತಾಲೂಕಿನ ನಾವದಗಿ ತಾಂಡದ ಮೇಲೆ ದಾಳಿ ಮಾಡಿದ ತಂಡ, ಅಕ್ರಮವಾಗಿ ತಯಾರಿಸುತ್ತಿದ್ದ 600 ಲೀಟರ್ ಕೊಳೆ ನಾಶ ಮಾಡಿದ್ದು, 28 ಲೀಟರ್ ಕಳ್ಳಭಟ್ಟಿ ಜಪ್ತಿ ಮಾಡಿಕೊಂಡಿದ್ದಾರೆ. ಕಮಲಾಕರ ಎಂಬಾತನನ್ನು ಬಂಧಿಸಿರುವ ಪೊಲೀಸರು, ಆರೋಪಿಯಿಂದ 2 ಕ್ಯಾನ್​​ಗಳಲ್ಲಿ ಸಾಗಾಟ ಮಾಡ್ತಿದ್ದ ಕಳ್ಳಭಟ್ಟಿ ಜಪ್ತಿ ಮಾಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.