ETV Bharat / state

ಯಡಿಯೂರಪ್ಪ ಸಿಎಂ ಆಗಲು ಪಂಚಮಸಾಲಿ‌ ಸಮುದಾಯ ಕಾರಣ: ವಿಜಯಾನಂದ‌‌ ಕಾಶಪ್ಪನವರ

author img

By

Published : Jan 22, 2021, 3:47 PM IST

dsds
ವಿಜಯಾನಂದ‌‌ ಕಾಶಪ್ಪನವರ ಹೇಳಿಕೆ

ನಾವು ಸಚಿವ ಸ್ಥಾನ, ಮಠಕ್ಕೆ ಅನುದಾನ ಕೇಳುತ್ತಿಲ್ಲ. ಪಂಚಮಸಾಲಿ‌ ಸಮುದಾಯಕ್ಕೆ 2A ಮೀಸಲಾತಿ ನೀಡಬೇಕು ಎಂದು ಪಂಚಮಸಾಲಿ ಮುಖಂಡ, ಮಾಜಿ ಶಾಸಕ ವಿಜಯಾನಂದ‌‌ ಕಾಶಪ್ಪನವರ ಆಗ್ರಹಿಸಿದ್ದಾರೆ.

ಹೊಸಪೇಟೆ: ಬಿ.ಎಸ್.ಯಡಿಯೂರಪ್ಪ ಮೂರು ಬಾರಿ ಮುಖ್ಯಮಂತ್ರಿಯಾಗಲು ಪಂಚಮಸಾಲಿ‌ ಸಮುದಾಯ ಕಾರಣ. ಸಮುದಾಯಕ್ಕೆ 2A ಮೀಸಲಾತಿ ನೀಡದಿದ್ದರೆ ಹೋರಾಟ ಕ್ರಾಂತಿಯ ಸ್ವರೂಪ ಪಡೆದುಕೊಂಡು ಅನಾಹುತವಾದರೆ ಅದಕ್ಕೆ ಯಡಿಯೂರಪ್ಪ ಕಾರಣವಾಗುತ್ತಾರೆ ಎಂದು ಮಾಜಿ ಶಾಸಕ ವಿಜಯಾನಂದ‌‌ ಕಾಶಪ್ಪನವರ ಹೇಳಿದ್ದಾರೆ.

ವಿಜಯಾನಂದ‌‌ ಕಾಶಪ್ಪನವರ

ತಾಲೂಕಿನ‌ ಮರಿಯಮ್ಮನಹಳ್ಳಿ ಮಾತನಾಡಿದ ಅವರು, ಮೀಸಲಾತಿ ನೀಡಲು ಮುಖ್ಯಮಂತ್ರಿಗೆ ಪರಮಾಧಿಕಾರವಿದೆ. ನಮ್ಮ ಸಮುದಾಯದ ಶಾಸಕರು ಸರ್ಕಾರದಲ್ಲಿ 15 ಜನ ಇದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಪಂಚಮಸಾಲಿ ಸಮುದಾಯವೇ ಮೂಲ ಕಾರಣ. ಶೀಘ್ರವೇ ಮೀಸಲಾತಿಯನ್ನು ನೀಡಬೇಕು. ಶಾಂತಿಯುತವಾದ ಪಾದಯಾತ್ರೆ ಕ್ರಾಂತಿಯಾಗುತ್ತದೆ ಎಂದು ಎಚ್ಚರಿಸಿದರು.

ಸಮುದಾಯದ ಜಗದ್ಗುರು 215 ಕಿ.ಮೀ. ಪಾದಯಾತ್ರೆ ಮಾಡಿದ್ದಾರೆ.‌ ಇತರರಂತೆ ಅವರನ್ನು‌ ನಡೆಸಿಕೊಳ್ಳುವುದು ಸರಿಯಲ್ಲ. ಪಾದಯಾತ್ರೆ ಬೆಂಗಳೂರು ತಲುಪುವ ಮುನ್ನ ಸಮುದಾಯಕ್ಕೆ ಮೀಸಲಾತಿ ಘೋಷಣೆ ಮಾಡಿದರೆ ಒಳ್ಳೆಯದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.