ETV Bharat / state

ಪ್ರಾಣಿಗಳಿಂದ ಬೆಳೆ ರಕ್ಷಿಸಲು ಹೊಸ ಉಪಾಯ: ಸೌರಯಂತ್ರ ತಯಾರಿಸಿ ಯಶಸ್ವಿಯಾದ ರೈತ

author img

By

Published : Mar 17, 2021, 7:18 PM IST

Updated : Mar 17, 2021, 10:55 PM IST

Farmer who invented Solar mission to protect his crop from animals
ಸೌರಯಂತ್ರ ತಯಾರಿಸಿ ಯಶಸ್ವಿಯಾದ ರೈತ

ನಾಗರಾಜ್‌ ಎಂಬ ರೈತ ಬೆಳೆಗಳನ್ನು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಸ್ವಯಂ ಸದ್ದು ಮಾಡುವ ಸೌರಯಂತ್ರವನ್ನು ಕಂಡುಹಿಡಿದಿದ್ದಾರೆ. ಈ ಯಂತ್ರವು ಪ್ರತಿ 10 ನಿಮಿಷಗಳಿಗೊಮ್ಮೆ 1 ನಿಮಿಷಗಳ ಕಾಲ ಪ್ರಾಣಿಗಳ ಸದ್ದು ಮಾಡುತ್ತಿದೆ. ಇದರ ಜತೆಯಲ್ಲಿ ಎಲ್​ಇಡಿ ಲೈಟ್ ಅಳವಡಿಸಲಾಗಿದೆ. ಈ ಲೈಟ್​​ ತಾನಾಗಿಯೇ ಹೊತ್ತಿಕೊಳ್ಳುತ್ತದೆ. ಇದರಿಂದ ಪ್ರಾಣಿ ಮತ್ತು ಪಕ್ಷಿಗಳು ಹೆದರಿ ಹೊಲಗಳತ್ತ ಸುಳಿಯುವುದಿಲ್ಲ.

ಹೊಸಪೇಟೆ (ವಿಜಯನಗರ): ರೈತರ ಬೆಳೆಗಳಿಗೆ ಪ್ರಾಣಿಗಳ ಕಾಟ ತಪ್ಪಿದ್ದಲ್ಲ. ಇದನ್ನು ತಪ್ಪಿಸಲು ರೈತ ಹರಸಾಹಸ ಪಡುವಂತಹ ಸ್ಥಿತಿ ಇದೆ. ಇದನ್ನರಿತ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಜಂಗಮಸೋವೇನಹಳ್ಳಿಯ ರೈತ ನಾಗರಾಜ ಗೌಡ ವಿನೂತನ ತಂತ್ರಜ್ಞಾನವನ್ನು ಕಂಡುಕೊಂಡಿದ್ದಾರೆ.

ಪ್ರಾಣಿಗಳಿಂದ ಬೆಳೆ ರಕ್ಷಿಸಲು ಹೊಸ ಉಪಾಯ: ಸೌರಯಂತ್ರ ತಯಾರಿಸಿ ಯಶಸ್ವಿಯಾದ ರೈತ

ಇವರು ಬೆಳೆಗಳನ್ನು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಸ್ವಯಂ ಸದ್ದು ಮಾಡುವ ಸೌರಯಂತ್ರ ಕಂಡುಹಿಡಿದಿದ್ದಾರೆ. ಈ ಯಂತ್ರವು ಪ್ರತಿ 10 ನಿಮಿಷಗಳಿಗೊಮ್ಮೆ 1 ನಿಮಿಷಗಳ ಕಾಲ ಪ್ರಾಣಿಗಳ ಸದ್ದು ಮಾಡಲಿದೆ. ಇದರ ಜತೆಯಲ್ಲಿ ಎಲ್​ಇಡಿ ಲೈಟ್ ಅಳವಡಿಸಲಾಗಿದೆ. ಈ ಲೈಟ್​​ ತಾನಾಗಿಯೇ ಹೊತ್ತಿಕೊಳ್ಳುತ್ತದೆ. ಇದರಿಂದ ಪ್ರಾಣಿ ಮತ್ತು ಪಕ್ಷಿಗಳು ಹೆದರಿ ಹೊಲಗಳತ್ತ ಸುಳಿಯುವುದಿಲ್ಲ.

ರಾತ್ರಿ ಮತ್ತು ಹಗಲು ವೇಳೆಯಲ್ಲಿಯೂ ಈ ಯಂತ್ರವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಒಂದು ಯಂತ್ರವು 8 ರಿಂದ 10 ಎಕರೆ ವಿಸ್ತೀರ್ಣ ವ್ಯಾಪ್ತಿವರೆಗೆ ಕಾರ್ಯನಿರ್ವಹಿಸಲಿದೆ. ‌

ಬೆಳೆ ರಕ್ಷಿಸಲು ರಾತ್ರಿ ವೇಳೆ ರೈತರು ನಿದ್ದೆಗೆಟ್ಟು ಬೆಳೆಗೆ ಕಾವಲು ಇರಬೇಕಿತ್ತು. ಆದರೆ ಇದೀಗ ಈ ಯಂತ್ರ ಸಹಾಯಕವಾಗಲಿದೆ. ಹೊಲದಲ್ಲಿ ಈ ಯಂತ್ರ ಇಟ್ಟ ಬಳಿಕ ಪ್ರಾಣಿಗಳ ಹಾವಳಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ಸೌರ ಯಂತ್ರಕ್ಕೆ ಉತ್ತಮ ಬೇಡಿಕೆ ಬಂದಿದೆ. ರಾಜ್ಯದ ರೈತರು ಮಾತ್ರವಲ್ಲ, ಹೊರರಾಜ್ಯದ ರೈತೂ ಸಹ ಈ ಯಂತ್ರದ ಮೊರೆ ಹೋಗುತ್ತಿದ್ದಾರೆ.

ಈ ಕಾರಣಕ್ಕಾಗಿ 200ಕ್ಕೂ ಹೆಚ್ಚು ಯಂತ್ರಗಳ ತಯಾರಿಸಿ ಮಾರಾಟ ಸಹ ಮಾಡಿದ್ದಾರೆ. ಒಂದು ಯಂತ್ರಕ್ಕೆ 9 ಸಾವಿರ ರೂ ತಗುಲಲಿದ್ದು, ರೈತ ನಾಗರಾಜ್ ಅವರನ್ನು ನೇರವಾಗಿ ಸಂಪರ್ಕಿಸಿ ಯಂತ್ರ ಪಡೆಯಬಹುದು.

ಇದನ್ನೂ ಓದಿ: ಕರ್ನಾಟಕ-ಆಂಧ್ರ ಗಡಿಯಲ್ಲಿ ಪ್ಯಾರಾ ಮಿಲಿಟರಿ ಫೋರ್ಸ್ ತರಬೇತಿ ಕಾರ್ಯಾಗಾರ

Last Updated :Mar 17, 2021, 10:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.