ETV Bharat / state

ಬೆಳಗಾವಿ: ಸಿಡಿಲು ಬಡಿದು ಯುವಕ‌ ಸಾವು

author img

By

Published : Feb 19, 2021, 12:38 PM IST

young man dies by thunderstorm
ಸಿಡಿಲು ಬಡಿದು ಯುವಕ‌ ಸಾವು

ಬೆಳಗಾವಿ ಜಿಲ್ಲೆಯ ಇಟ್ಟಿಗೆ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ.

ಬೆಳಗಾವಿ: ನಿನ್ನೆ ಸುರಿದ ಗುಡುಗು ಸಹಿತ ಭಾರಿ ಮಳೆಗೆ ಸಿಡಿಲು ಬಡಿದು ಇಟ್ಟಿಗೆ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಖಾನಾಪೂರ ತಾಲೂಕಿನ ನೀಡಗಲ್ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

young man dies by thunderstorm
ಸಿಡಿಲು ಬಡಿದು ಯುವಕ‌ ಸಾವು
ಜೋಯಿಡಾ ಗ್ರಾಮದ ಗುರುನಾಥ್ ನಾರ್ವೇಕರ್ (20) ಸಿಡಿಲು ಬಡಿದು ಸಾವನ್ನಪ್ಪಿದ ಯುವಕ. ಈತ ಮೂಲತಃ ‌ಜೋಯಿಡಾ ಗ್ರಾಮದವನಾಗಿದ್ದು, ಖಾನಾಪುರ ತಾಲೂಕಿನ ನೀಡಗಲ್ ಗ್ರಾಮದಲ್ಲಿ ವಾಸಿಸುತ್ತಿದ್ದ. ಈತ ಜೀವನ ನಿರ್ವಹಣೆಗೆ ಅದೇ ಗ್ರಾಮದಲ್ಲಿ ಇಟ್ಟಿಗೆ ತಯಾರಿಕಾ ಘಟಕದಲ್ಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ.

ಆದ್ರೆ, ನಿನ್ನೆ ಅಕಾಲಿಕ ಮಳೆ ಬಂದಿದ್ದರಿಂದ ಇಟ್ಟಿಗೆಯ ರಾಶಿ ಮೇಲೆ ಪ್ಲಾಸ್ಟಿಕ್ ಹೊದಿಕೆ ಹಾಕುವ ಸಂದರ್ಭದಲ್ಲಿ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಖಾನಾಪೂರ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:’ಹೀಗೆ ಮಾಡಿ ನಗರ ಸ್ವಚ್ಛವಾಗಿಡಿ’.. ಈ​​ ನಗರದಲ್ಲಿ ಸ್ಥಾಪನೆಯಾಗಲಿವೆ 'ಕ್ಯಾರಿ ಬ್ಯಾಗ್ ಬ್ಯಾಂಕ್'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.