ETV Bharat / state

ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ನಂದಿನಿ ಬಗ್ಗೆ ಕೆಲವರಿಂದ ಅಪಪ್ರಚಾರ: ಕೇಂದ್ರ ಸಚಿವೆ ಕರಂದ್ಲಾಜೆ

author img

By

Published : Apr 9, 2023, 7:18 AM IST

Updated : Apr 9, 2023, 7:34 AM IST

ರಾಜಕೀಯ ಉದ್ದೇಶಕ್ಕಾಗಿ ಕೆಲವರು ಕೆಎಂಎಫ್ ಸಂಸ್ಥೆ ಹಾಗೂ ನಂದಿನಿ‌ ಹಾಲನ್ನು ಬೇರೆಯವರಿಗೆ ಮಾರುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.‌ ಇದಕ್ಕೆ ಕಿವಿಗೊಡಬಾರದು- ಶೋಭಾ ಕರಂದ್ಲಾಜೆ ಮನವಿ.

Union minister Shobha karandlaje
ಶೋಭಾ ಕರಂದ್ಲಾಜೆ

ರಾಜ್ಯಕ್ಕೆ ಅಮುಲ್ ಪ್ರವೇಶ.. ಸ್ಪಷ್ಟನೆ ನೀಡಿದ ಕೇಂದ್ರ ಸಚಿವೆ ಕರಂದ್ಲಾಜೆ

ಬೆಂಗಳೂರು: ಚುನಾವಣೆ ಹಿನ್ನೆಲೆ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ನಂದಿನಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ರಾಜ್ಯಕ್ಕೆ ಅಮುಲ್ ಪ್ರವೇಶಿಸುತ್ತಿರುವ ಬಗ್ಗೆ ಪ್ರತಿಪಕ್ಷಳ ಆರೋಪಕ್ಕೆ ವಿಡಿಯೋ ಸಂದೇಶದ ಮೂಲಕ ಅವರು ಸ್ಪಷ್ಟನೆ ನೀಡಿದ್ದಾರೆ.

ಕೆಎಂಎಫ್ ಸಂಸ್ಥೆ ಹಾಗೂ ನಂದಿನಿ‌ ಹಾಲನ್ನು ಬೇರೆಯವರಿಗೆ ಮಾರುತ್ತಿದ್ದಾರೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಇದು‌ ಕೇವಲ ರಾಜಕೀಯವಾಗಿದೆ. ಚುನಾವಣೆ ಹಿನ್ನೆಲೆ ರಾಜಕೀಯ ತಂತ್ರಗಾರಿಕೆಗಾಗಿ, ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕೆಲವರು ರೈತರು ಹಾಗೂ ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಇದಕ್ಕೆ ನಮ್ಮ ರೈತರು ಹಾಗೂ ಸಹಕಾರ ಸಂಸ್ಥೆಯವರು ಕಿವಿಗೊಡಬಾರದು. ನಮ್ಮ ನಂದಿನಿ ಬೆಳೆಸುವಂಥ ಕೆಲಸವನ್ನು ಬಿಜೆಪಿ ನೇತೃತ್ವದ ಸರ್ಕಾರ ಮಾಡಲಿದೆ. ನಮ್ಮ ಹೆಮ್ಮೆಯ ಸಂಸ್ಥೆಯನ್ನು ಉಳಿಸುತ್ತೇವೆ ಮತ್ತು ಬೆಳೆಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.

ಕೆಎಂಎಫ್ ಬೆಳೆಸುವ ಸಂಕಲ್ಪ: ನಂದಿನಿ ನಮ್ಮ ಹೆಮ್ಮೆಯ ಸಂಸ್ಥೆ. ನಂದಿನಿ ಹಾಲು, ನಂದಿನಿ ತುಪ್ಪ, ನಂದಿನಿ ಸ್ವೀಟ್ಸ್, ನಂದಿನಿ ಬೆಣ್ಣೆಯನ್ನು ಎಲ್ಲಾ ಕನ್ನಡಿಗರು ಬಳಸುತ್ತಿದ್ದಾರೆ. ರಾಜ್ಯದ ರೈತರಿಂದ ತಯಾರಗುತ್ತಿರುವ, ರೈತರು ಅವರ ಅವರ ಮನೆಯಿಂದ ಹಸು ಮತ್ತು ಎಮ್ಮೆ ಹಾಲನ್ನು ಕಳಿಸಿ ಕೆಎಂಎಫ್ ಸಂಸ್ಥೆಯನ್ನು ಬೆಳೆಸಿದ್ದಾರೆ. ಅಮುಲ್​ಗಿಂತ ಎತ್ತರದಲ್ಲಿ ಕೆಎಂಎಫ್​​ನ್ನು ಬೆಳೆಸಬೇಕು. ನಂದಿನಿ ಹಾಲನ್ನು ಇಡೀ ಪ್ರಪಂಚಕ್ಕೆ ಕೊಡಬೇಕು ಎಂಬುದು ನಮ್ಮ ಸದುದ್ದೇಶ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಒಟ್ಟಾಗಿ ಕೆಎಂಎಫ್ ಸಂಸ್ಥೆಯನ್ನು ಬೆಳೆಸುವ ಸಂಕಲ್ಪವನ್ನು ಮಾಡಿದ್ದೇವೆ. ನಮ್ಮ ರೈತರಿಗೆ ಆರ್ಥಿಕವಾಗಿ ಸಹಾಯವಾಗಬೇಕು. ಈ ಕಾರಣದಿಂದ ಕೆಎಂಎಫ್ ಸಂಸ್ಥೆಯನ್ನು ನಾವು ಬೆಳೆಸುತ್ತಿದ್ದೇವೆ. ಅಮುಲ್​​ಗಿಂತ ಎತ್ತರದಲ್ಲಿ ನಂದಿನಿ ಬೆಳೆಯಬೇಕು ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: ನಂದಿನಿ ಬ್ರ್ಯಾಂಡ್​ ಬೆಳೆಯಬೇಕು, ಅಮುಲ್ ಆನ್​ಲೈನ್ ಖರೀದಿ ಜನರಿಗೆ ಬಿಟ್ಟದ್ದು: ಶೋಭಾ ಕರಂದ್ಲಾಜೆ

ಅಮುಲ್​​ ವಿವಾದ: ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ಗುಜರಾತ್ ಮೂಲದ ಹೈನು ಉತ್ಪನ್ನ ಸಂಸ್ಥೆ 'ಅಮುಲ್' ಕರ್ನಾಟಕ ಪ್ರವೇಶ ಮಾಡುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ಆಡಳಿತ ಪಕ್ಷ ಬಿಜೆಪಿ ಅಮುಲ್ ಆಗಮನವನ್ನು ಸ್ವಾಗತಿಸದಿದ್ದರೂ, ವಿರೋಧಿಸುವ ಕಾರ್ಯ ಮಾಡುತ್ತಿಲ್ಲ. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್​ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಅಮುಲ್ ಆಗಮನ ರಾಜ್ಯದ ಜನಪ್ರಿಯ ಉತ್ಪನ್ನವಾದ ನಂದಿನಿಗೆ ಅಡ್ಡಿ ಮಾಡಲು ಎಂದೇ ಬಣ್ಣಿಸಲಾಗುತ್ತಿದೆ.

ಅಮುಲ್ ಮೂಲಕ ನಂದಿನಿಯ ಜನಪ್ರಿಯತೆ ಹತ್ತಿಕ್ಕುವ ಕಾರ್ಯ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಈ ಮಧ್ಯೆ ಬಿಜೆಪಿ ನಾಯಕರು ಸಹ ನಂದಿನಿ ಹಾಲಿನ ಮೇಲೆ ಅಮುಲ್​ ಯಾವುದೇ ಪರಿಣಾಮ ಬೀರುವುದಿಲ್ಲ.

ಎಂತಹ ಸೋತವರ ಗುಂಪು- ಸಿ ಟಿ ರವಿ ಟ್ವೀಟ್​.. ''ಗುಲಾಮರಿಗೆ ಇಟಾಲಿಯನ್ ಆಳ್ವಿಕೆಯಲ್ಲಿ ಯಾವುದೇ ತೊಂದರೆ ಇಲ್ಲ. ಆದರೆ ಭಾರತೀಯ ಬ್ರಾಂಡ್ ಅಮುಲ್ ತನ್ನ ಉತ್ಪನ್ನಗಳನ್ನು ಇತರ ಹಲವು ಬ್ರಾಂಡ್‌ಗಳಂತೆ ಕರ್ನಾಟಕದಲ್ಲಿ ಮಾರಾಟ ಮಾಡುವಾಗ ಅವರಿಗೆ ಸಮಸ್ಯೆ ಇದೆ. ಎಂತಹ ಸೋತವರ ಗುಂಪು ಇದು!'' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಟ್ವೀಟ್​ ಮೂಲಕ ಪ್ರತಿಪಕ್ಷ ಕಾಂಗ್ರೆಸ್​ ವಿರುದ್ಧ ಹರಿಹಾಯ್ದಿದ್ದಾರೆ. ​​

  • Slaves have no problem in being ruled by an Italian.

    But they have a problem when Bharatiya brand Amul sells its products in Karnataka just like many other brands.

    What a bunch of LOSERS !

    — C T Ravi 🇮🇳 ಸಿ ಟಿ ರವಿ (@CTRavi_BJP) April 8, 2023 " class="align-text-top noRightClick twitterSection" data=" ">

ಅಲ್ಲದೆ, ನಮ್ಮ ಸರ್ಕಾರ ಪ್ರತಿ ಲೀಟರ್​ ಹಾಲಿಗೆ 5 ರೂಪಾಯಿ ಸಬ್ಸಿಡಿ ಕೊಟ್ಟು ಗ್ರಾಮೀಣ ಕುಟುಂಬಗಳನ್ನು ಸಬಲೀಕರಣಗೊಳಿಸಿದೆ. ನಂದಿನಿ ಬ್ರ್ಯಾಂಡ್​ ಈಗಾಲೇ 12 ರಾಜ್ಯಗಳಲ್ಲಿ ವಹಿವಾಟು ನಡೆಸುತ್ತಿದೆ ಎಂದೂ ಅವರು ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ: ಚುನಾವಣೆ ವೇಳೆ ಅಮುಲ್​​ ವಿವಾದ.. ಕಾಂಗ್ರೆಸ್- ಜೆಡಿಎಸ್​​​ ಆಕ್ಷೇಪ ಏಕೆ?.. ಈ ಬಗ್ಗೆ ಬಿಜೆಪಿ ನಿಲುವೇನು?

Last Updated : Apr 9, 2023, 7:34 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.