ETV Bharat / state

ಮೊದಲು ಭಗವದ್ಗೀತೆಯನ್ನು ಬರೆದದ್ದು, ಮಹಾಭಾರತ ಲಿಪಿಬದ್ಧಗೊಳಿಸಿದ್ದು ಗಣಪ: ಸುಗುಣೇಂದ್ರತೀರ್ಥ ಸ್ವಾಮೀಜಿ

author img

By ETV Bharat Karnataka Team

Published : Sep 17, 2023, 10:35 PM IST

Etv Bharatsugunendratirtha-swamiji-speech-in-mud-ganapa-workshop
ಮೊದಲು ಭಗವದ್ಗೀತೆಯನ್ನು ಬರೆದದ್ದು, ಮಹಾಭಾರತ ಲಿಪಿಬದ್ಧಗೊಳಿಸಿದ್ದು ಗಣಪ: ಸುಗುಣೇಂದ್ರತೀರ್ಥ ಸ್ವಾಮೀಜಿ

ಗಣೇಶ ಚತುರ್ಥಿ ಹಿನ್ನೆಲೆ ಜೋಶಿ ಸಂಗೀತ, ನೃತ್ಯ ನಾಟಕ ಶಾಲೆಯ ವತಿಯಿಂದ ಭಾನುವಾರ ಮಣ್ಣಿನಲ್ಲಿ ಗಣೇಶನನ್ನು ತಯಾರಿಸುವ ಕಾರ್ಯಗಾರ ಆಯೋಜಿಸಲಾಗಿತ್ತು.

ಬೆಂಗಳೂರು: ಭಗವದ್ಗೀತೆಯನ್ನು ಮೊದಲು ಬರೆದಿದ್ದು ಹಾಗೂ ಮಹಾಭಾರತವನ್ನು ಮಟ್ಟ ಮೊದಲಬಾರಿಗೆ ಲಿಪಿಬದ್ಧಗೊಳಿಸಿದ್ದು ಗಣಪತಿ ಎಂದು ಪುತ್ತಿಗೆಮಠದ ಸುಗುಣೇಂದ್ರ ತೀರ್ಥರು ತಿಳಿಸಿದರು. ಜೋಶಿ ಸಂಗೀತ ನೃತ್ಯ ನಾಟಕ ಶಾಲೆಯ ವತಿಯಿಂದ ಆಯೋಜಿಸಲಾಗಿದ್ದ ಮಣ್ಣಿನ ಗಣಪ ಮಾಡುವ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ನಾವೆಲ್ಲರೂ ಮಣ್ಣಿನ ಗಣಪತಿಯನ್ನು ನಿರ್ಮಾಣ ಮಾಡುತ್ತಿದ್ದೇವೆ. ಅದರ ಜೊತೆಗೆ ಕೋಟಿ ಗೀತಲೇಖನ ಯಜ್ಞವನ್ನು ಮಾಡಬೇಕು. ಯಾಕೆಂದರೆ ಕೋಟಿ ಗೀತಾಲೇಖನ ಯಜ್ಞವನ್ನು ಮೊದಲು ಮಾಡಿದ್ದು ಗಣಪತಿ. ಆದ್ದರಿಂದ ಗಣಪತಿಗೂ ಕೋಟಿ ಗೀತಾಲೇಖನ ಯಜ್ಞಕ್ಕೂ ನಿಖಟವಾದ ಸಂಬಂಧವಿದೆ. ಆದ್ದರಿಂದ ಗಣಪತಿಯನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ ಭಗವದ್ಗೀತೆಯನ್ನು ಬರೆಯುವುದುರಿಂದ ಕೃಷ್ಣ ಹಾಗೂ ಗಣಪತಿ ಇಬ್ಬರ ಅನುಗ್ರಹವು ದೊರೆಯುತ್ತದೆ ಎಂದರು.

Sugunendratirtha Swamiji speech in  mud ganapa workshop
ಮಣ್ಣಿನ ಗಣಪ ಮಾಡುವ ಕಾರ್ಯಗಾರವನ್ನು ಉದ್ಘಾಟಿಸಿ ಸುಗುಣೇಂದ್ರತೀರ್ಥ ಸ್ವಾಮೀಜಿ

ಇನ್ನೊಂದೆಡೆ ಕೃಷ್ಣನಿಗೆ ಗೀತೆ ಎಂದರೆ ತುಂಬಾ ಇಷ್ಟ, ಯಾರು ಕೃಷ್ಣನ ಗೀತೆಯನ್ನು ಬರೆಯುತ್ತಾರೆ ಹಾಗೂ ಓದುತ್ತಾರೊ ಅವರಿಗೆ ಅವರ ಇಷ್ಟಾರ್ಥಗಳನ್ನು ಶ್ರೀ ಕೃಷ್ಣ ಅನುಗ್ರಹಿಸುತ್ತಾನೆ. ಆದ್ದರಿಂದ ನಾವೆಲ್ಲರು ಭಾಗವದ್ಗೀತೆಯನ್ನು ಬರೆದು ಕೃಷ್ಣನಿಗೆ ಅರ್ಪಿಸಿದಾಗ ನಮ್ಮ ಸಂಕಲ್ಪ ಪೂರ್ಣವಾಗುತ್ತದೆ. ಮುಂಬರುವ ಜನವರಿ 18 ರಿಂದ 4 ತಿಂಗಳ ನಂತರ ಉಡುಪಿಯಲ್ಲಿ ನಮ್ಮ ಪರ್ಯಾಯ ನಡೆಯಲಿದೆ. ಅದರ ಅಂಗವಾಗಿ 1 ಕೋಟಿ ಜನರಿಂದ ಭಗವದ್ಗೀತೆಯನ್ನು ಬರೆಸಿ ಉಡುಪಿಯ ಶ್ರೀ ಕೃಷ್ಣನಿಗೆ ಅರ್ಪಿಸಬೇಕು ಎಂಬ ಸಂಕಲ್ಪವನ್ನು ಮಾಡಿದ್ದೇವೆ ಎಂದು ತಿಳಿಸಿದರು.

Sugunendratirtha Swamiji speech in  mud ganapa workshop
ಜೋಶಿ ಸಂಗೀತ ನೃತ್ಯ ನಾಟಕಶಾಲೆಯಲ್ಲಿ ಮಣ್ಣಿನ ಗಣಪ ಮಾಡುವ ಕಾರ್ಯಗಾರ

ಗಣೇಶ ಚತುರ್ಥಿ ದಿನದ ಪ್ರಯುಕ್ತ ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧ: ಸೋಮವಾರದಂದು " ಗಣೇಶ ಚತುರ್ಥಿ" ದಿನದ ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಂಟಿ ನಿರ್ದೇಶಕರು(ಪಶುಪಾಲನೆ) ತಿಳಿಸಿದ್ದಾರೆ.

ಬಿಬಿಎಂಪಿ ವತಿಯಿಂದ ಏಕಗವಾಕ್ಷಿ ಕೇಂದ್ರ, ಸಂಚಾರಿ ವಾಹನ(ಮೊಬೈಲ್ ಟ್ಯಾಂಕ್)/ಕಲ್ಯಾಣಿಗಳ ಸ್ಥಾಪನೆ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗಾಗಿ ಸ್ಥಾಪಿಸಲಾಗಿರುವ 63 ಏಕಗವಾಕ್ಷಿ ಕೇಂದ್ರಗಳು, ಗಣೇಶ ಮೂರ್ತಿಗಳ ವಿಸರ್ಜನೆಗಾಗಿ 39 ಕೆರೆ ಅಂಗಳದ/ತಾತ್ಕಾಲಿಕ ಕಲ್ಯಾಣಿಗಳು, 418 ತಾತ್ಕಾಲಿಕ ಮೊಬೈಲ್ ಟ್ಯಾಂಕ್​ಗಳ ವ್ಯವಸ್ಥೆಯನ್ನು ಪಾಲಿಕೆಯ ಎಲ್ಲಾ ವಾರ್ಡ್ ಗಳಲ್ಲಿ ಮಾಡಲಾಗಿದೆ.

ಈ ವ್ಯವಸ್ಥೆಯ ಮೇಲ್ವಿಚಾರಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಅದರ ವಿವರಗಳಿಗಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅಥವಾ ವೆಬ್ ಸೈಟ್ https://apps.bbmpgov.in/ganesh2023/ ನಲ್ಲಿ ಅಥವಾ ಬಿಬಿಎಂಪಿ ಸಹಾಯವಾಣಿ 1533ಗೆ ಕರೆಮಾಡಿ ವಿವರವನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: ಗಣೇಶ ಚತುರ್ಥಿ ಅದ್ಧೂರಿಯಾಗಿ ಆಚರಿಸಲು ಭರದ ಸಿದ್ಧತೆ: ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಹೂವು, ಹಣ್ಣು, ತರಕಾರಿಗಳು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.