ETV Bharat / state

ನಮ್ಮ ಸಂಘಟನೆ ಪ್ರಶ್ನೆ ಮಾಡಿದವರಿಗೆ ಜನಸ್ಪಂದನ ಕಾರ್ಯಕ್ರಮವೇ ಉತ್ತರ: ಸುಧಾಕರ್

author img

By

Published : Sep 10, 2022, 4:50 PM IST

Updated : Sep 10, 2022, 7:48 PM IST

ಆರೋಗ್ಯ ಸಚಿವ ಡಾ ಸುಧಾಕರ್
ಆರೋಗ್ಯ ಸಚಿವ ಡಾ ಸುಧಾಕರ್

ಜನಸ್ಪಂದನ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ ಸುಧಾಕರ್ ಅವರು ರಾಜ್​​ಕುಮಾರ್ ನಟನೆಯ ಪ್ರೇಮ ಕಾಣಿಕೆ ಚಿತ್ರದ ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆಯಿದೆ ಎಂಬ ಹಾಡಿನ ಮೂಲಕ ಕಾಂಗ್ರೆಸ್​ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಂಗಳೂರು: ಬಯಲು ಸೀಮೆಯಲ್ಲಿ ಬಿಜೆಪಿ ಸಂಘಟನಾ ಶಕ್ತಿ ಜಗಜ್ಜಾಹೀರಾಗಿದೆ. ಈ ಭಾಗದಲ್ಲಿ ಇಂತಹ ಸಮವೇಶ ಆಗಿರಲಿಲ್ಲ, ಈ ಭಾಗದಲ್ಲಿ ನಮ್ಮ ಸಂಘಟನೆಯನ್ನು ಪ್ರಶ್ನೆ ಮಾಡುತ್ತಿದ್ದವರಿಗೆ ಇಂದು ದಿಟ್ಟ ಉತ್ತರವನ್ನು ಇಲ್ಲಿನ ಜನ ನೀಡಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ನಡೆದ ಸರ್ಕಾರದ ಮೂರು ವರ್ಷದ ಸಾಧನಾ ಸಮಾವೇಶವಾದ ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಮಾಡಿದ ಅವರು, ಕೆಂಪೇಗೌಡರಿಗೆ ಜನ್ಮ ನೀಡಿದ ಪವಿತ್ರ ಭೂಮಿ ಇದಾಗಿದೆ. ಗುಜರಾತ್​​ನಲ್ಲಿ ಪಟೇಲ್ ಪ್ರತಿಮೆ ಮೋದಿ ನಿಲ್ಲಿಸಿದ್ದಾರೆ. ಅದೇ ರೀತಿ ನಮ್ಮ ಸಿಎಂ 108 ಅಡಿ ಎತ್ತರದ ಕೆಂಪೇಗೌಡರ ಮೂರ್ತಿ ಅಕ್ಟೋಬರ್​ನಲ್ಲಿ ಅನಾವರಣ ಮಾಡಲಿದ್ದಾರೆ.

ಆರೋಗ್ಯ ಸಚಿವ ಡಾ ಸುಧಾಕರ್

ಬೊಮ್ಮಾಯಿ‌ ಬಂದು ಒಂದು ವರ್ಷವಾಯಿತು. ಮೊದಲೆರಡು ವರ್ಷ ಯಡಿಯೂರಪ್ಪ ಆಡಳಿತ ನಡೆಸಿದ್ದಾರೆ. ಇತಿಹಾಸ ಕಂಡರಿಯದ ಸಾಂಕ್ರಾಮಿಕ ರೋಗ ಎದುರಾದಾಗ ದಿಟ್ಟ ಆಡಳಿತ ನೀಡಿ ನಿಯಂತ್ರಣ ಮಾಡಿದ್ದಾರೆ. ಅದೇ ಹಾದಿಯಲ್ಲಿ ಬೊಮ್ಮಾಯಿ‌ ಹೊಸ ದಿಟ್ಟ ಹೆಜ್ಜೆ ಇಡುತ್ತಿದ್ದಾರೆ. ಮೋದಿ ಪ್ರಧಾನ ಸೇವಕ ಎಂದು ಹೇಳಿಕೊಂಡರೆ ಬೊಮ್ಮಾಯಿ‌ ಕಾಮನ್ ಮ್ಯಾನ್ ಎಂದು ಹೇಳಿಕೊಂಡು ಸರಳತೆ ಮೆರೆದಿದ್ದಾರೆ ಎಂದರು.

ಇಂದು ನಾವು ಯಾವುದೇ ವ್ಯಕ್ತಿಯ ವೈಭವೀಕರಣದ ಕಾರ್ಯಕ್ರಮ ಮಾಡುತ್ತಿಲ್ಲ. ಸಾರ್ಥಕ ಸೇವೆಯ ಅನಾವರಣ ಮಾಡುವ ಕಾರ್ಯಕ್ರಮ ಮಾಡುತ್ತಿದ್ದೇವೆ. ನಮ್ಮ ರಿಪೋರ್ಟ್ ಕಾರ್ಡ್ ಅನ್ನು ಯಡಿಯೂರಪ್ಪ, ಬೊಮ್ಮಾಯಿ‌ ಸರ್ಕಾರ ಜನರ ಮುಂದಿಡುವ ಕೆಲಸ ಮಾಡಿದ್ದೇವೆ ಎಂದರು.

ವಿದ್ಯಾಸಿರಿ ಉತ್ಸವ, ಲಸಿಕಾ ಉತ್ಸವ, ಸ್ವಚ್ಛ ಭಾರತ ಉತ್ಸವ ಮಾಡುತ್ತಿದ್ದೇವೆಯೇ ಹೊರತು ಯಾವುದೇ ವ್ಯಕ್ತಿಯ ಉತ್ಸವ ಅಲ್ಲ ಎಂದು ಪರೋಕ್ಷವಾಗಿ ಸಿದ್ದರಾಮೋತ್ಸವಕ್ಕೆ ಟಾಂಗ್ ನೀಡಿದರು.

ಕೈನಲ್ಲಿ ಕುರ್ಚಿಗಾಗಿ ಕಚ್ಚಾಟ: ಕಾಂಗ್ರೆಸ್ ಪಕ್ಷದಲ್ಲಿ ಕುರ್ಚಿಗೆ ಕಚ್ಚಾಟ ನಡೆಯುತ್ತಿದೆ. ಸಮರ್ಥ ಆಡಳಿತ ನಡೆಸುತ್ತಿರುವ ಡಬ್ಬಲ್ ಇಂಜಿನ್ ಸರ್ಕಾರ ಬೇಕಾ? ಡಬ್ಬಲ್ ಸ್ಟೇರಿಂಗ್ ಡಬ್ಬಲ್ ಡೋರ್ ಇರುವ ಸರ್ಕಾರ ಬೇಕಾ? ಎಂದು ಜನ ತೀರ್ಮಾನ ಮಾಡಲಿದ್ದಾರೆ. ಡಬ್ಬಲ್ ಡೋರ್ ಇರುವ ಕಡೆ ಯಾರು ಯಾವಾಗ ಇಳಿದುಕೊಳ್ಳುತ್ತಾರೋ ಗೊತ್ತಿಲ್ಲ ಎಂದರು.

  • Live : 'ಜನಸ್ಪಂದನ - ರಾಜ್ಯ ಸರ್ಕಾರದ ಮೂರು ವರ್ಷಗಳ ಸಾಧನೆಯ ಅನಾವರಣ' - ದೊಡ್ಡಬಳ್ಳಾಪುರ #JanaSpandana https://t.co/LqNTw69evs

    — BJP Karnataka (@BJP4Karnataka) September 10, 2022 " class="align-text-top noRightClick twitterSection" data=" ">

ಎತ್ತಿನ ಹೊಳೆ ಈ ಭಾಗದ ಪ್ರಮುಖ ಯೋಜನೆಯಾಗಿದೆ. 2012 ರಲ್ಲಿ ಸದಾನಂದಗೌಡ ಸಿಎಂ ಆಗಿದ್ದಾಗ ಜಲಸಂಪನ್ಮೂಲ ಸಚಿವರಾಗಿದ್ದ ಬೊಮ್ಮಾಯಿ‌ ಅಡಿಗಲ್ಲು ಹಾಕಿದರು. ಮತ್ತೆ ಸರ್ಕಾರ ನಮ್ಮದೆ ಬಂದಿದ್ದರೆ ಯೋಜನೆ ಮುಗಿಯುತ್ತಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಬಂದಿದ್ದ ಕಾರಣ ಯೋಜನೆ ನೆನೆಗುದಿಗೆಗೆ ಬಿದ್ದಿತ್ತು. ಆದರೆ, ಈಗ ನಮ್ಮ ಸರ್ಕಾರ ಮತ್ತೆ ಬಂದಿರುವ ಕಾರಣ ಯೋಜನೆಗೆ ವೇಗ ಸಿಗಲಿದೆ ಎಂದರು.

ಇಂದು ಕಾಂಗ್ರೆಸ್ ಕಚ್ಚಾಟ ನೋಡಿದರೆ ರಾಜ್​​ಕುಮಾರ್ ಅವರ ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆಯಿದೆ ನೆನಪಾಗುತ್ತಿದೆ. ಮಾನ್ಯ ಡಿಕೆಶಿ ಅವರೆ ನೀವು ನೆನೆಸಿದಂತೆ ಕರ್ನಾಟಕದಲ್ಲಿ ಏನು ಆಗದು ಎಂದು ಟಾಂಗ್ ನೀಡಿದರು.

ಬಿಸಿ ಪಾಟೀಲ್ ಮಾತನಾಡಿ, ಈ ಭಾಗದಲ್ಲಿ ರಣಕಹಳೆ ಊದಿದ ಮೊದಲ ದಿನ ಇದಾಗಿದೆ, ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ನೆಲೆ ಇಲ್ಲ ಎನ್ನುವುದಕ್ಕೆ ಇಂದು ಈ ವೇದಿಕೆ ಉತ್ತರ ನೀಡಿದೆ ಎಂದರು.

ಇದನ್ನೂ ಓದಿ: ಜನಸ್ಪಂದನ ಕಾರ್ಯಕ್ರಮದಲ್ಲಿ ಪ್ರವೀಣ್ ನೆಟ್ಟಾರು ಮನೆಯವರಿಗೆ ಉದ್ಯೋಗ: ಬೊಮ್ಮಾಯಿ ಘೋಷಣೆ

Last Updated :Sep 10, 2022, 7:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.