ETV Bharat / state

ಶಿವರಾಮ ಕಾರಂತ್ ಬಡಾವಣೆ ಯೋಜನೆ ಸ್ಥಗಿತಗೊಳ್ಳುವುದಿಲ್ಲ: ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್

author img

By

Published : Apr 5, 2021, 5:34 PM IST

retired-justice-av-chandrasekhar
ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್

ಶಿವರಾಮ ಕಾರಂತ್ ಬಡಾವಣೆ ಸ್ಥಗಿತಗೊಳ್ಳುವುದಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿಗಳು ಮಾಹಿತಿ ನೀಡಿದ್ದು, ಹೆಚ್ಚು ಹೆಚ್ಚು ಜನರು ತಮ್ಮ ನಿವೇಶನ ಕುರಿತ ಮಾಹಿತಿ ನೀಡಬೇಕು ಎಂದು ಹೇಳಿದ್ದಾರೆ.

ಬೆಂಗಳೂರು: ಶಿವರಾಮ ಕಾರಂತ್ ಬಡಾವಣೆ ಸ್ಥಗಿತಗೊಳ್ಳುವುದಿಲ್ಲ. ಜನ ತಪ್ಪು ಮಾಹಿತಿಗೆ ಕಿವಿಕೊಡಬಾರದು. ಆದಷ್ಟು ಬೇಗ ದಾಖಲೆಗಳನ್ನು ನೀಡಬೇಕು. ಎಪ್ರಿಲ್ 30 ದಾಖಲೆಗಳನ್ನು ಸಲ್ಲಿಸಲು ಕೊನೆಯ ದಿನ ಎಂದು ನಿವೃತ್ತ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್​ ಮಾಹಿತಿ ನೀಡಿದ್ದಾರೆ.

ಸುಪ್ರೀಂಕೋರ್ಟ್ ಆದೇಶದಂತೆ 03-08-2018ರ ಮೊದಲು ನಿರ್ಮಾಣವಾದ ಕಟ್ಟಡಗಳ ಮಾಹಿತಿ, ದಾಖಲೆ ಪಡೆಯಲು ಸುಪ್ರೀಂಕೋರ್ಟ್ ಸಮಿತಿ ರಚಿಸಿದ್ದು, ದಾಖಲೆಗಳನ್ನು ಪಡೆದು ಪರಿಶೀಲಿಸಿ ಸುಪ್ರೀಂಕೋರ್ಟ್​​​ಗೆ ವರದಿ ನೀಡಬೇಕಿದೆ. ಆದರೆ ಜನಗಳಿಗೆ ಕೆಲವರ ಮಾಹಿತಿಯಿಂದ ಗೊಂದಲ ಉಂಟಾಗಿ ನಿರೀಕ್ಷಿತ ಪ್ರಮಾಣದಲ್ಲಿ ಮಾಹಿತಿ ಕೊಡುತ್ತಿಲ್ಲ.

ಶಿವರಾಮ ಕಾರಂತ್ ಬಡಾವಣೆ ಯೋಜನೆ ಕುರಿತು ನಿವೃತ್ತ ನ್ಯಾಯಮೂರ್ತಿ ಮಾಹಿತಿ

ಕೋಡಿಹಳ್ಳಿ ಚಂದ್ರಶೇಖರ್ ಈ ಲೇಔಟ್ ಸ್ಥಗಿತಗೊಂಡಿದೆ. ಮುಖ್ಯಮಂತ್ರಿಗಳು ಆಶ್ವಾಸನೆಯನ್ನೂ ಕೊಟ್ಟಿದ್ದಾರೆ ಎಂದು ಸುಳ್ಳು ಹೇಳಿಕೊಂಡು ಬಂದಿದ್ದಾರೆ. ಈ ರೀತಿ ಭಿತ್ತಿಪತ್ರ ಅಂಟಿಸಿರುವುದರಿಂದ ಜನರಿಗೆ ಗೊಂದಲ ಉಂಟಾಗಿ ಹೆಚ್ಚು ಮಾಹಿತಿ ಕೊಡುತ್ತಿಲ್ಲ. ಈ ಬಗ್ಗೆ ರೈತ ಮುಖಂಡರಿಗೂ ನೋಟಿಸ್ ಕೊಡಲಾಗಿದೆ ಎಂದು ತಿಳಿಸಿದರು.

ಇದರ ಜೊತೆಗೆ ಬಡಾವಣೆಗೆ ನಿಯೋಜಿತ ಜಾಗದಲ್ಲಿ ಕೆಲವರು ರೆವೆನ್ಯೂ ಲೇಔಟ್​​ನಲ್ಲಿ ಸೈಟ್​​​ಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಅವರಿಗೂ ಸಹಾಯ ಮಾಡುವ ನಿಟ್ಟಿನಲ್ಲಿ ಅಧ್ಯಯನ ಆಗ್ತಿದೆ. ಸುಪ್ರೀಂಕೋರ್ಟ್ ಅಂಜನಾಪುರ, ಬನಶಂಕರಿ, ವಿಶ್ವೇಶ್ವರ ಲೇಔಟ್​ನಲ್ಲಿ ನಿವೇಶನ ಕಳೆದುಕೊಂಡವರಿಗೆ ಹೇಗೆ ಪರಿಹಾರ ನೀಡಲಾಗಿದೆ. ಅದರ ಸಂಪೂರ್ಣ ಅಧ್ಯಯನ ಮಾಡಲೂ ತಿಳಿಸಿದ್ದಾರೆ ಎಂದರು.

ಸದ್ಯ 1,850 ಜನ ಮಾತ್ರ ಕಟ್ಟಡಗಳ ಮಾಹಿತಿ ಕೊಟ್ಟಿದ್ದಾರೆ. ಇದರಲ್ಲಿ 350 ಜನ ಆನ್​​​ಲೈನ್ ಮೂಲಕ ಸಲ್ಲಿಕೆ ಮಾಡಿದ್ದಾರೆ. ಸ್ಯಾಟಲೈಟ್ ಮ್ಯಾಪಿಂಗ್ ಪ್ರಕಾರ 7,500 ಕಟ್ಟಡಗಳಿವೆ. ಆದರೆ ಮಾಹಿತಿ ನೀಡಲು ಜನರು ಮುಂದೆ ಬರುತ್ತಿಲ್ಲ. ಜನ ಹೆಚ್ಚು ಸಂಖ್ಯೆಯಲ್ಲಿ ಬರಬಹುದು, ತಿಂಗಳಿಗೆ 4 ಸಾವಿರ ಬರಬಹುದೆಂಬ ಎಂಬ ನಿರೀಕ್ಷೆಯಿತ್ತು ಎಂದು ತಿಳಿಸಿದರು.

ಇದನ್ನೂ ಓದಿ: ಹೆಚ್ಚಿದ ತಾಪಮಾನ: ಉತ್ತರ ಕರ್ನಾಟಕ ಭಾಗದ ಕೋರ್ಟ್​ ಕೆಲಸದ ಅವಧಿಯಲ್ಲಿ ಬದಲಾವಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.