ETV Bharat / state

ವೀರ ಯೋಧರಿಗೆ ರಾಕಿ ಕಟ್ಟಿದ ಬ್ರಹ್ಮಕುಮಾರಿ ಸಿಬ್ಬಂದಿ

author img

By

Published : Aug 13, 2019, 10:08 PM IST

ವೀರ ಯೋಧರೊಂದಿಗೆ ರಕ್ಷಾ ಬಂಧನ ಆಚರಣೆ ಮಾಡಿದ ಬ್ರಹ್ಮಕುಮಾರಿಸ್

ಯಲಹಂಕದ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬ್ರಹ್ಮಕುಮಾರಿ ಸಂಸ್ಥೆಯ ಮಹಿಳೆಯರು ಮೂನ್ನೂರಕ್ಕೂ ಅಧಿಕ ಸಿಬ್ಬಂದಿ ಸೈನಿಕರಿಗೆ ರಾಕಿ ಕಟ್ಟಿ ಸಿಹಿ ನೀಡಿ ಶುಭ ಹಾರೈಸಿದ್ರು.

ಬೆಂಗಳೂರು: ಅಣ್ಣಾ ತಂಗಿಯರ ಬಂಧಕ್ಕೆ ಹೆಸರುವಾಸಿ ರಕ್ಷಾ ಬಂಧನ ಹಬ್ಬ. ಇನ್ನೇನು ಈ ಹಬ್ಬಕ್ಕೆ ಕೆಲವೇ ದಿನ ಬಾಕಿ ಉಳಿದಿದೆ. ಆದ್ರೆ ದೇಶಕಾಯೋ ಸೈನಿಕರಿಗೆ ಮಾತ್ರ ರಕ್ಷಾ ಬಂಧನ ಮಿಸ್ ಮಾಡಿಕೊಳ್ತಿರೊ ಬೆನ್ನಲ್ಲೆ ಇಲ್ಲೊಂದು ಮಹಿಳೆಯರ ತಂಡ ಸೈನಿಕರಿಗೆ ರಕ್ಷಾ ಬಂಧನದ ಸಿಹಿ ಹುಣಿಸಿದ್ದಾರೆ.

ಹೌದು, ದೇಶಸೇವೆಗಾಗಿ ಕುಟುಂಬವನ್ನ ಬಿಟ್ಟು ಬಂದಿದ್ದ ವೀರ ಸೈನಿಕರಿಗೆ ಶುಭ ಕೋರೋಕೆ ಅಂತ ಪ್ರಜಾಪಿತ ಬ್ರಹ್ಮಕುಮಾರಿ ಸಿಬ್ಬಂದಿ ಮುಂದಾಗಿದ್ದು, ಯಲಹಂಕ ಬಳಿಯ ತರಬೇತಿ ಸಂಸ್ಥೆಯ ಸೈನಿಕರಿಗೆ ರಾಕಿ ಕಟ್ಟುವ ಮುಖಾಂತರ ರಕ್ಷಾ ಬಂಧನವನ್ನ ಆಚರಿಸಿದ್ರು.

ವೀರ ಯೋಧರೊಂದಿಗೆ ರಕ್ಷಾ ಬಂಧನ ಆಚರಣೆ ಮಾಡಿದ ಬ್ರಹ್ಮಕುಮಾರಿಸ್

ನಂತರ ಈ ಕುರಿತು ಪ್ರತಿಕ್ರಿಯಿಸಿರುವ ಬ್ರಹ್ಮಕುಮಾರಿ ಸಂಸ್ಥೆಯ ಸದಸ್ಯೆ, ಯೋಧರು ಮಳೆ, ಚಳಿ, ಬಿಸಿಲೆನ್ನದೆ ಗಡಿಯಲ್ಲಿ ಕಾವಲು ಕಾಯುವ ಮೂಲಕ ದೇಶದ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತಹ ಯೋಧರಿಗೆ ಶುಭ ಕೋರಿದ್ದು ಅವಿಸ್ಮರಣೀಯ ಎಂದರು.

Intro:KN_BNG_01_13_Bsf_Raksha bandana_Ambarish_7203301

Slug: ವೀರ ಯೋದರೊಂದಿಗೆ ರಕ್ಷಾ ಬಂಧನ ಆಚರಣೆ.

ದೇಶ ರಕ್ಷಣೆಗಾಗಿ ಕುಟುಂಬ ಬಿಟ್ಟು ಬಂದ ಯೋಧರಿಗೆ ಕುಟುಂಬ ಪ್ರೀತಿ ತೋರಿಸಿದ ಬ್ರಹ್ಮಕುಮಾರಿಸ್

ಬೆಂಗಳೂರು : ಅಣ್ಣಾ ತಂಗಿಯರ ಬಂಧ ಅಂತಲೆ ಹೆಸರುವಾಸಿಯಾಗಿರೂ ರಕ್ಷಾ ಬಂಧನ ಹಬ್ಬ ಬಂದೇ ಬಿಡ್ತು.. ಇನ್ನು ಕೆಲವೇ ದಿನ ಬಾಕಿ ಉಳಿದಿದೆ. ಆದ್ರೆ ದೇಶಕಾಯೋ ಸೈನಿಕರಿಗೆ ಮಾತ್ರ ರಕ್ಷಾ ಬಂಧನ ಮೀಸ್ ಮಾಡಿಕೊಳ್ತಿರೂ ಬೆನ್ನಲ್ಲೆ ಇಲ್ಲೊಂದು ಮಹಿಳೆಯರ ತಂಡ ಸೈನಿಕರಿಗೆ ರಕ್ಷಾ ಬಂಧನದ ಸಿಹಿ ಹುಣಿಸಿದ್ದಾರೆ. ಅದು ಎಲ್ಲಿ ಅನ್ನೂದನ್ನ ನೀವೆ ನೋಡಿ.

ಅಣ್ಣಾ ತಂಗಿಯ ಅನುಬಂಧ ತೋರಲು ರಾಕಿ ಕಟ್ಟಿ ರಕ್ಷಾ ಬಂಧನ ಆಚರಿಸುತ್ತಿರೂ ಮಹಿಳೆಯರು.. ಸೈನಿಕರ ಕೈಗೆ ರಕ್ಷಾ ಬಂಧನ ಕಟ್ಟಿ ಶುಭ ಹಾರೈಸುತ್ತಿರೂ ಬ್ರಹ್ಮ ಕುಮಾರಿಸ್ ಸಿಬ್ಬಂದಿ.. ಹೌದು ಈ ದೃಶ್ಯಗಳೆಲ್ಲ ಕಂಡು ಬಂದಿದ್ದು, ಯಲಹಂಕ ಬಳಿಯ ಬಿಎಸ್ಎಪ್ ಟ್ರೈನಿಂಗ್ ಸೆಂಟರ್ ನಲ್ಲಿ. ಅಂದಹಾಗೆ ದೇಶ ಸೇವೆಗಾಗಿ ಮನೆ ಹಾಗೂ ಕುಟುಂಬವನ್ನೆಲ್ಲ ಬಿಟ್ಟು ಯಲಹಂಕ ಬಳಿ ತರಬೇತಿ ಪಡೆಯುತ್ತಿರೂ ಸೈನಿಕರು ಈ ಬಾರಿಯ ರಕ್ಷಾ ಬಂಧನದಲ್ಲಿ ಅಕ್ಕ ತಂಗಿಯರಿಂದ ರಾಕಿ ಕಟ್ಟಿಸಿಕೊಳ್ಳುವುದನ್ನ ಮೀಸ್ ಮಾಡಿಕೊಳ್ತಿದ್ರು. ಹೀಗಾಗಿ ದೇಶಸೇವೆಗಾಗಿ ಕುಟುಂಬವನ್ನ ಬಿಟ್ಟು ಬಂದಿದ್ದ ವೀರ ಸೈನಿಕರಿಗೆ ಶುಭ ಕೊರೂಕ್ಕೆ ಅಂತ ಪ್ರಜಾಪಿತ ಬ್ರಹ್ಮಕುಮಾರಿಸ್ ಸಿಬ್ಬಂದಿ ಮುಂದಾಗಿದ್ದು,ಯಲಹಂಕ ಬಳಿಯ ತರಬೇತಿ ಸಂಸ್ಥೆಯ ಸೈನಿಕರಿಗೆ ರಾಕಿ ಕಟ್ಟುವ ಮುಖಾಂತರ ರಕ್ಷಾ ಬಂಧನವನ್ನ ಆಚರಿಸಿದ್ರು.

ಯೋಧರು ಮಳೆ, ಚಳಿ, ಬಿಸಿಲೆನ್ನದೆ ಗಡಿನಿಯಂತ್ರಣ ರೇಖೆಗಳಲ್ಲಿ ಕಾವಲು ಕಾಯುವ ಮೂಲಕ ದೇಶದ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತಹ ಯೋಧರಿಗೆ ಶುಭ ಕೋರಿದ್ದು ಅವಿಸ್ಮರಣೀಯವಾದದ್ದು.. ಪ್ರತಿ ಕ್ಷಣ ಗಡಿಯನ್ನು ತಮ್ಮ ಪ್ರಾಣವನ್ನು ಲೆಕ್ಕಿಸದೇ ಭಾರತ ದೇಶವನ್ನು ಕಾಪಾಡುತ್ತ ಬಂದಿದ್ದಾರೆ.. ಅಂತಹವರು ದೇಶದ ಯಾವುದೇ ಪ್ರದೇಶದಲ್ಲಿ ಇದ್ದರೂ ನಮ್ಮ ಸಂಸ್ಥೆ ಅಲ್ಲಿನ ಯೋಧರಿಗೆ ರಾಖಿ ಕಟ್ಟುವ ಮೂಲಕ ಶುಭಾಷಯಗಳನ್ನು ಹೇಳುತ್ತೇವೆ.. ಇದು ನಮಗೆ ತುಂಭಾ ಸಂತಸ ತಂದಿದೆ.. ಕಳೆದ ಹದಿನೈದು ವರ್ಷಗಳಿಂದ ನಾವು ಯೋಧರಿಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಹಬ್ಬವನ್ನು ಸಂತೋಷದಿಂದ ಆಚರಿಸಿಕೊಂಡು ಬಂದಿದ್ದೇವೆ ಎಂದು ಬ್ರಹ್ಮ ಕುಮಾರಿ ಸಂಸ್ಥೆಯ ವಿಜಯಲಕ್ಷ್ಮಿ ಹೇಳಿದ್ರು..

ಬೈಟ್ :- ವಿಜಯಲಕ್ಷ್ಮೀ ಬ್ರಹ್ಮಕುಮಾರಿಸ್ ಸದಸ್ಯೆ.

ಯಲಹಂಕದ ತರಬೇತಿ ಸಂಸ್ಥೇಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬ್ರಹ್ಮಕುಮಾರಿಸ್ ಸಂಸ್ಥೇಯ ಮಹಿಳೆಯರು ಮೂನ್ನೂರಕ್ಕೂ ಅಧಿಕ ಸೈನಿಕರಿಗೆ ರಾಕಿ ಕಟ್ಟಿ ಸಿಹಿ ನೀಡಿ ಶುಭ ಹಾರೈಸಿದ್ರು. ಇನ್ನೂ ಸೈನಿಕರೊಂದಿಗಿನ ರಕ್ಷಾ ಬಂಧನ ಕಾರ್ಯಕ್ರಮಕ್ಕಾಗಿ ಬಿಎಸ್ಎಪ್ ಟ್ರೈನಿಂಗ್ ಸೆಂಟರೆ್ ನಲ್ಲಿ ಸೈನಿಕರು ಸಹ ಸಿದ್ದತೆ ಮಾಡಿದ್ರು.ಇನ್ನೂ ದೇಶಕ್ಕಾಗಿ ಕುಟುಂಬವನ್ನೆಲ್ಲ ಬಿಟ್ಟು ಬಂದು ತರಬೇತಿ ಪಡೆಯುತ್ತಿದ್ದ ಸೈನಿಕರಿಗೆ ರಾಕಿ ಕಟ್ಟಿ ರಕ್ಷಾ ಬಂಧನದ ಶುಬಾಷಯ ಕೋರಿದ್ದು, ತುಂಬಾ ಸಂತೋಷ ವಾಗಿದೆ ಅಂತ ಸೈನಿಕ ರೊಂದಿಗಿನ ರಕ್ಷಾ ಬಂದನ ಆಚರಣೆ ಬಗ್ಗೆ ಬಿಎಸ್ಎಪ್ ಟ್ರೈನಿಂಗ್ ಸೆಂಟರ್ ಐಜಿ ಮೆಚ್ಚುಗೆ ವ್ಯಕ್ತಪಡಿಸಿದ್ರು.

ಬೈಟ್ :- ಸಬ್ಬು ಎ ಜೋಸೆಪ್ ಐಜಿ ಯಲಹಂಕ ಬಿಎಸ್ಎಪ್ ಟ್ರೈನಿಂಗ್ ಸೆಂಟರ್.

ಒಟ್ಟಾರೆ ದೇಶಸೇವೆಗೆ ಮನೆ ಮತ್ತು ಕುಟುಂಬಸ್ಥರನೆಲ್ಲ ಬಿಟ್ಟು ಬಂದಿದ್ದ ವೀರ ಸೈನಿಕರೊಂದಿಗೆ ಬ್ರಹ್ಮಕುಮಾರಿಸ್ ಸಂಸ್ಥೆಯವರು ಅಣ್ಣಾ ತಂಗಿಯ ಪವಿತ್ರ ಹಬ್ಬ ರಕ್ಷಾ ಬಂಧನ ಆಚರಿಸಿದ್ದು ನಿಜಕ್ಕೂ ಶ್ಲಾಘನೀಯ. ಇದರಿಂದ ಯೋಧರಿಗೆ ತಮ್ಮ‌ ಕುಟುಂಬವನ್ನು ಬಿಟ್ಟು ಬಂದಿರುವ ನೊವು ಕಡಿಮೆಯಾದಂತೆ ಆಗಿದೆ..



Body:NoConclusion:No
ETV Bharat Logo

Copyright © 2024 Ushodaya Enterprises Pvt. Ltd., All Rights Reserved.