ETV Bharat / state

ಜಮೀರ್​ ಅಹ್ಮದ್​ ಪಾದ ಪೂಜೆ ಪ್ರಕರಣ: ದೂರು ದಾಖಲಿಸಲು ಪೊಲೀಸರ ನಿರ್ಧಾರ

author img

By

Published : Jul 1, 2020, 5:24 PM IST

MLA Zameer Ahmed Khan worship, MLA Zameer Ahmed Khan foot worship, MLA Zameer Ahmed Khan worship issue, MLA Zameer Ahmed Khan worship issue news, ಶಾಸಕ ಜಮೀರ್ ಅಹ್ಮದ್ ಖಾನ್​ಗೆ ಪೂಜೆ, ಶಾಸಕ ಜಮೀರ್ ಅಹ್ಮದ್ ಖಾನ್​ಗೆ ಪಾದ ಪೂಜೆ, ಶಾಸಕ ಜಮೀರ್ ಅಹ್ಮದ್ ಖಾನ್​ಗೆ ಪಾದ ಪೂಜೆ ವಿವಾದ, ಶಾಸಕ ಜಮೀರ್ ಅಹ್ಮದ್ ಖಾನ್​ಗೆ ಪಾದ ಪೂಜೆ ವಿವಾದ ಸುದ್ದಿ,
ಶಾಸಕ ಜಮೀರ್ ಅಹ್ಮದ್ ಖಾನ್​ಗೆ ಪಾದ ಪೂಜೆ ಪ್ರಕರಣ

ಶಾಸಕ ಜಮೀರ್ ಅಹ್ಮದ್ ಖಾನ್​ ಪಾದ ಪೂಜೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹಿಸಿ‌‌ ದೂರು ದಾಖಲಿಸಲು ಪೊಲೀಸರು ನಿರ್ಧರಿಸಿ್ದ್ದಾರೆ.

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿನ ಲಕ್ಷಣ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ವಿವಾದಕ್ಕೆ ಶಾಸಕ ಜಮೀರ್ ಅಹ್ಮದ್ ಸಿಲುಕುತ್ತಿದ್ದಾರೆ.

MLA Zameer Ahmed Khan worship, MLA Zameer Ahmed Khan foot worship, MLA Zameer Ahmed Khan worship issue, MLA Zameer Ahmed Khan worship issue news, ಶಾಸಕ ಜಮೀರ್ ಅಹ್ಮದ್ ಖಾನ್​ಗೆ ಪೂಜೆ, ಶಾಸಕ ಜಮೀರ್ ಅಹ್ಮದ್ ಖಾನ್​ಗೆ ಪಾದ ಪೂಜೆ, ಶಾಸಕ ಜಮೀರ್ ಅಹ್ಮದ್ ಖಾನ್​ಗೆ ಪಾದ ಪೂಜೆ ವಿವಾದ, ಶಾಸಕ ಜಮೀರ್ ಅಹ್ಮದ್ ಖಾನ್​ಗೆ ಪಾದ ಪೂಜೆ ವಿವಾದ ಸುದ್ದಿ,
ಶಾಸಕ ಜಮೀರ್ ಅಹ್ಮದ್ ಖಾನ್​ಗೆ ಪಾದ ಪೂಜೆ ಪ್ರಕರಣ

ಕಳೆದ ಭಾನುವಾರ ಕೆಂಪೇಗೌಡನಗರದ ಕಲ್ಯಾಣ ಮಂಟಪದಲ್ಲಿ‌ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಶಾಸಕ ಜಮೀರ್ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಜಮೀರ್ ಅಹಮ್ಮದ್ ಕೊರೊನಾ ಸೋಂಕಿನಿಂದ ಮೃತಪಟ್ಟ ರೋಗಿಗಳ ಶವ ಸಂಸ್ಕಾರವನ್ನ ನೆರವೇರಿಸಲು ಆರ್ಥಿಕ ಸಹಾಯ ಮಾಡುತ್ತಿದ್ದಾರೆಂದು ಬೆಂಬಲಿಗರು ಜಮೀರ್​ ಮೇಲೆ ಹೂವು ಸುರಿದು ಬಳಿಕ ಪಾದಾಪೂಜೆ ಮಾಡಿದ್ದಾರೆ.

ಸದ್ಯ ಕೊರೊನಾ ಇರುವ ಹಿನ್ನೆಲೆ ಸಾಮಾಜಿಕ ಅಂತರ ಬಹಳ ಅಗತ್ಯ. ಆದರೆ ಇಲ್ಲಿ ಯಾವುದೇ ನಿಯಮ ಇಲ್ಲದೆ ಗುಂಪುಗೂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ನೆಟ್ಟಿಗರು ಇಂತಹ ಸಂದರ್ಭದಲ್ಲಿ ಈ ರೀತಿಯ ಪೂಜೆ ಅವಶ್ಯಕತೆ ಇದೇಯಾ ಎಂದು ಪ್ರಶ್ನಿಸಿದ್ದಾರೆ. ಹಾಗೆ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ ಜಮೀರ್ ಹಾಗೂ ಬೆಂಬಲಿಗರ‌ ಮೇಲೆ‌ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಸದ್ಯ ಕೆಂಪೇಗೌಡ ನಗರ ಪೊಲೀಸರು ಈ ಕುರಿತು ಕಾನೂನು ತಜ್ಞರ ಅಭಿಪ್ರಾಯ ಪಡೆದು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ನಿರ್ಧರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.