ETV Bharat / state

ರಾಜ್ಯದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು.. ಮಂಗಳೂರಿಗೆ ಹೈ-ಅಲರ್ಟ್..

author img

By

Published : Jan 14, 2020, 5:49 PM IST

high-alert-to-mangalore-by-dg-nilamani
high-alert-to-mangalore-by-dg-nilamani

ಮಂಗಳೂರಲ್ಲಿ ನಾಳೆ ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿಸಿ ಬೃಹತ್ ರ್ಯಾಲಿಯಲ್ಲಿ ವಿಧ್ವಂಸಕ ಕೃತ್ಯ ನಡೆಯುವ ಮುನ್ಸೂಚನೆ ಸಿಕ್ಕಿದೆ. ಹಾಗಾಗಿ ಮಂಗಳೂರು ಕಮಿಷನರ್​ಗೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಡಿಜಿ ನೀಲಮಣಿ ಎನ್.ರಾಜು ಆದೇಶ ನೀಡಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ವಿಧ್ವಂಸಕ ಕೃತ್ಯದ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಸೂಚನೆಯ ಮೇರೆಗೆ ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು, ಮಂಗಳೂರು ಕಮಿಷನರ್ ಡಾ. ಪಿ ಎಸ್‌ ಹರ್ಷ ಅವರಿಗೆ ಕರೆಮಾಡಿ, ಎಲ್ಲಾ ರೀತಿಯಲ್ಲೂ ಅಲರ್ಟ್ ಆಗಿರುವಂತೆ ಆದೇಶ ಕೊಟ್ಟಿದ್ದಾರೆ.

ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಜಿಹಾದಿಗಳ ಸಂಚು ಹಾಗೂ ಪೌರತ್ವ ಕಿಚ್ಚು ಪ್ರಕರಣಕ್ಕೆ ಸಂಬಂಧಿಸಿದಂತೆ ‌ಪೊಲೀಸ್ ಇಲಾಖೆ ಈಗಾಗ್ಲೇ ಹೈ-ಅಲರ್ಟ್ ಆಗಿದೆ. ಆದರೆ, ನಾಳೆ ಸಿಎಎ ಹಾಗೂ ಎನ್‌ಆರ್‌ಸಿ ಕಾನೂನುಗಳನ್ನ ವಿರೋಧಿಸಿ ಮಂಗಳೂರಿನಲ್ಲಿ ಬೃಹತ್ ರ್ಯಾಲಿ ಆಯೋಜಿಸಲಾಗಿದೆ. ಆದರೆ, ಇತ್ತೀಚೆಗೆ ಜಿಹಾದಿಗಳ ಬಂಧನ ಬೆನ್ನಲ್ಲೇ ಮಂಗಳೂರಿನಲ್ಲಿ ಗಲಭೆಯಾಗುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಸೂಚನೆ ನೀಡಿದೆ.

ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಈ ವೇಳೆ ಯಾವುದೇ ಅಹಿತಕರ ಘಟನೆ ನಡಿಯಬಾರದು ಅನ್ನೋ ದೃಷ್ಟಿಯಿಂದ ಅಡ್ಯಾರ್ ಬಳಿ‌ ಇರುವ ಗಾರ್ಡನ್ ಮೈದಾನದಲ್ಲಿ ಭದ್ರತೆ ದೃಷ್ಟಿಯಿಂದ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಈಗಾಗಲೇ ಮಂಗಳೂರಿನಲ್ಲೇ ಗುಪ್ತದಳ‌ ಹಾಗೂ ಐಎಸ್​ಡಿ ತಂಡ ಬೀಡು ಬಿಟ್ಟಿದೆ.

Intro:ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಸಂಚು
ಮಂಗಳೂರಿನಲ್ಲಿ ಅಲರ್ಟ್ ಇರುವಂತೆ ಡಿಜಿ ಆದೇಶ

ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಜಿಹಾದಿಗಳ ಸಂಚು ಹಾಗೂ ಪೌರತ್ವ ಕಿಚ್ಚು ಪ್ರಕರಣಕ್ಕೆ ಸಂಬಂಧಿಸಿದಂತೆ ‌ಪೊಲೀಸ್ ಇಲಾಖೆ ಈಗಾಗ್ಲೇ ಹೈ ಅಲರ್ಟ್ ಆಗಿದೆ. ಆದರೆ ಮಂಗಳೂರಲ್ಲಿ ನಾಳೆ ಸಿಎಎ ಹಾಗೂ ಎನ್ ಆರ್ ಸಿ ವಿರೋಧಿಸಿ ಮಂಗಳೂರಿನಲ್ಲಿ ಬೃಹತ್ ರ್ಯಾಲಿ ಆಯೋಜಿಸಲಾಗಿದೆ. ಆದರೆ ಇತ್ತಿಚ್ಚೆಗೆ ಜಿಹಾದಿಗಳ ಬಂಧನ ಬೆನ್ನಲ್ಲೇ ಮಂಗಳೂರಿನಲ್ಲಿ ಗಲಭೆಯಾಗುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಸೂಚನೆ ನೀಡಿದೆ. ಹೀಗಾಗಿ ಅಲರ್ಟ್ ಇರುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜ್ ಮಂಗಳೂರು ಕಮಿಷನರ್ ಹರ್ಷಗೆ ಕರೆಮಾಡಿ ಆದೇಶ ಕೊಟ್ಟಿದ್ದಾರೆ

ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗುವ ನಿರೀಕ್ಷೆ ಇದ್ದು ಈ ವೇಳೆ ಅಹಿತಕರ ಘಟನೆ ನಡಿಯಬಾರದು ಅನ್ನೋ ದೃಷ್ಟಿ ಯಿಂದ ಅಡ್ಯಾರ್ ಬಳಿ‌ಇರುವ ಗಾರ್ಡನ್ ಮೈದಾನದಲ್ಲಿ ಭದತೆ ದೃಷ್ಟಿಯಿಂದ ಎಚ್ಚರಿಕೆಯಿಂದ ಇರುವಙತೆತ ಸೂಚಿಸಲಾಗಿದ್ದು ಈಗಾಗಲೇ ಮಂಗಳೂರಿನಲ್ಲೇ ಗುಪ್ತದಳ‌ ಹಾಗೂ ಐಎಸ್ ಡಿ ತಂಡ ಬೀಡು ಬಿಟ್ಟಿದೆ.

ಮತ್ತೊಂದೆಡೆ ಇತ್ತಿಚ್ಚೆಗೆ ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ದೊಡ್ಡ ಗಲಭೆನೆ ಸೃಷ್ಟಿ ಯಾಗಿ ಪೊಲೀಸರು‌ಮತ್ತು ಪ್ರತಿಭಟಾನಾಕಾರರ ವಿಡಿಯೋ ವೈರಲ್ ಆಗಿತ್ತು. ಹೀಗಾಗಿ ಎಲ್ಲಾ ರೀತಿಯಲ್ಲಿ ಅಲರ್ಟ್ ಆಗಿರಯವಂತೆ ಸೂಚನೆ ನೀಡಲಾಗಿದೆ
Body:KN_BNG_04_MNGLOR_7204498Conclusion:KN_BNG_04_MNGLOR_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.