ಬೆಂಗಳೂರು: ರಾಜ್ಯ ಬಿಜೆಪಿ ನಾಯಕರಲ್ಲಿ ಅರ್ಧ ಮಂದಿ ತಿಕ್ಕಲು ಹಾಗೂ ಇನ್ನರ್ಧ ಮಂದಿ ಪುಕ್ಕಲರು ಇದ್ದಾರೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಪಿಎಂ ಮೋದಿ ಬೇಜವಾಬ್ದಾರಿ ಮನುಷ್ಯ, ತನ್ನ ಜವಾಬ್ದಾರಿ ಹಾಗೂ ಕರ್ತವ್ಯ ನಿಭಾಯಿಸದೆ ಕರ್ನಾಟಕದ ಪಾಲಿಗೆ ನಿರುಪಯುಕ್ತ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದೆ. ಇನ್ನು, ರಾಜ್ಯದ ಬಿಜೆಪಿ ನಾಯಕರು ಹಾಗೂ ಸಂಸದರಲ್ಲಿ ಅರ್ಧ ತಿಕ್ಕಲು: ಮನಸೋ ಇಚ್ಛೆ ಬೇಜವಾಬ್ದಾರಿ ಹೇಳಿಕೆ ಕೊಡುತ್ತಿರುವವರು, ಅರ್ಧ ಪುಕ್ಕಲು; ಮೋದಿ ಮುಂದೆ ನೆರೆ ಪರಿಹಾರದ ಬಗ್ಗೆ ಧ್ವನಿ ಎತ್ತದವರು ಎಂದು ಲೇವಡಿ ಮಾಡಿದೆ.
ರಾಜ್ಯವನ್ನು ಕಾಡುತ್ತಿರುವ ನೆರೆ ಹಾಗೂ ಬರ ಸಮಸ್ಯೆಗೆ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಿಕೊಂಡು ಬರುವಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ವಿಫಲರಾಗಿದ್ದಾರೆ ಎಂದು ನಿರಂತರವಾಗಿ ಆರೋಪಿಸುತ್ತಾ ಬಂದಿರುವ ಕಾಂಗ್ರೆಸ್ ನಾಯಕರು ಇದೀಗ ಈ ರೀತಿ ಲೇವಡಿ ಮಾಡಿ ಟ್ವೀಟ್ ಮಾಡಿದ್ದಾರೆ.