ETV Bharat / state

ವೈಷ್ಣವ ಜನತೋ ಮೂಲಕ ಬಾಪೂಗೆ ನಮನ; ಈಟಿವಿ ಸಾಮಾಜಿಕ ಕಾಳಜಿಗೆ ಬಿಎಸ್‌ವೈ ಅಭಿನಂದನೆ

author img

By

Published : Oct 2, 2019, 9:31 PM IST

Updated : Oct 2, 2019, 11:27 PM IST

ದೇಶದ ಶ್ರೇಷ್ಠ ಗಾಯಕ ಗಾಯಕಿಯರಿಂದ ಬಾಪೂಜಿ ನೆಚ್ಚಿನ‌ ವೈಷ್ಣವ ಜನತೋ ಗೀತೆಯನ್ನು ಹಾಡಿಸುವ ಮೂಲಕ‌ ಈಟಿವಿ ಭಾರತ ಸಲ್ಲಿಸಿದ ಗೌರವಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.

ವೈಷ್ಣವ ಜನತೋ ಗೀತೆ ಮೂಲಕ ಬಾಪುವಿಗೆ ಈಟಿವಿ ಭಾರತ ಸಲ್ಲಿಸಿದ ಗೌರವಕ್ಕೆ ಅಭಿನಂದಿಸಿದ  ಬಿಎಸ್​ವೈ

ಬೆಂಗಳೂರು: ಮಹಾತ್ಮಾ ಗಾಂಧೀಜಿ ಅವರ 150ನೇ ಹುಟ್ಟುಹಬ್ಬಕ್ಕೆ ದೇಶದ ಪ್ರಖ್ಯಾತ ಗಾಯಕ ಗಾಯಕಿಯರಿಂದ ಬಾಪೂಜಿ ನೆಚ್ಚಿನ‌ 'ವೈಷ್ಣವ ಜನತೋ..' ಗೀತೆಯನ್ನು ಹಾಡಿಸಿರುವ ಈಟಿವಿ ಭಾರತದ ಕಾರ್ಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶ್ಲಾಘಿಸಿದ್ದಾರೆ.

  • I Congratulate @EtvBharat for a heartwarming tribute to Mahatma Gandhi by creating this beautiful music video of 'Vaishnava jana to'-Gandhiji's favourite song.The marvelous rendition by our singers and the beautiful production is a great homage to Gandhijihttps://t.co/0V8cS9iUWL

    — CM of Karnataka (@CMofKarnataka) October 2, 2019 " class="align-text-top noRightClick twitterSection" data=" ">

ಗಾಂಧೀಜಿಯವರ ಮೆಚ್ಚಿನ ಹಾಡಾದ 'ವೈಷ್ಣವ ಜನತೋ..' ಸುಂದರವಾದ ವೀಡಿಯೋ ಗೀತೆ ರಚಿಸುವ ಮೂಲಕ ಮಹಾತ್ಮ ಗಾಂಧಿಯವರಿಗೆ ಹೃತ್ಪೂರ್ವಕ ಗೌರವ ಸಲ್ಲಿಸಿದ್ದಕ್ಕಾಗಿ ಈಟಿವಿ ಭಾರತ್‌ಗೆ ಅಭಿನಂದಿಸುತ್ತೇನೆ. ನಮ್ಮ ಶ್ರೇಷ್ಠ ಗಾಯಕರು ಮತ್ತು ಸುಂದರ ನಿರ್ಮಾಣದ ಅದ್ಭುತ ಚಿತ್ರಣವು ಮಹಾತ್ಮ ಗಾಂಧೀಜಿಗೆ ಒಂದು ದೊಡ್ಡ ಗೌರವ ಕೊಟ್ಟಂತಾಗಿದೆ ಎಂದು ಸಿಎಂ ಬಿಎಸ್​ವೈ ಮುಖ್ಯಮಂತ್ರಿಗಳ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
ಐಪಿಎಸ್ ಅಧಿಕಾರಿ ಡಾ‌.ಭೀಮಾಶಂಕರ್ ಎಸ್. ಗುಳೇದ್ ಪ್ರಶಂಸೆ:

ಮಹಾತ್ಮಾ ಗಾಂಧೀಜಿ ನೆಚ್ಚಿನ ಭಜನೆಗಳಲ್ಲೊಂದಾದ 'ವೈಷ್ಣವೋ ಜನತೋ..' ಭಜನೆಯ ಹಾಡನ್ನು ವಿನೂತನವಾಗಿ ಚಿತ್ರೀಕರಿಸಿದ ಈಟಿವಿ ಭಾರತ ತಂಡಕ್ಕೆ ಅಭಿನಂದನೆಗಳು. ಬಾಪೂಜಿ 150 ಜನ್ಮ ದಿನಾಚರಣೆಯ ವಿಶೇಷ ಸಂದರ್ಭದಲ್ಲಿ ವಿಭಿನ್ನವಾಗಿ ಮೂಡಿ ಬಂದಿರುವ ಈ ಹಾಡು ದೇಶದ ಎಲ್ಲಾ ಜನರನ್ನೂ ಸೆಳೆಯಲಿದೆ ಎಂದು ಭೀಮಾಶಂಕರ್ ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟ್ವಿಟರ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ ಇತರೆ ಗಣ್ಯರು

ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ದೇಶದ ಪ್ರಖ್ಯಾತ ಗಾಯಕರ ಸಿರಿಕಂಠದಲ್ಲಿ ಮೂಡಿಬಂದ ವೈಷ್ಣವ ಜನತೋ ವಿಶೇಷ ಗಾಯನದ ವಿಡಿಯೋ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ಟ್ವಿಟ್ಟರ್ ಖಾತೆಗಳಲ್ಲಿ ಅಭಿಪ್ರಾಯ ಹಂಚಿಕೊಂಡು ಈಟಿವಿ ಭಾರತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಬೆಂಗಳೂರು ಉತ್ತರ ವಿಭಾಗದ ಐಪಿಎಸ್ ಅಧಿಕಾರಿ ಶಶಿಕುಮಾರ್ ಕೂಡ ತನ್ನ ಮಧುರ ಕಂಠದಿಂದ ಪೊಲೀಸ್ ಇಲಾಖೆಯಲ್ಲಿ ನಡೆಯುವ ಹಲವಾರು ಕಾರ್ಯಕ್ರಮಗಳಲ್ಲಿ ಹಾಡಿ ಗಮನ ಸೆಳೆದಿದ್ದಾರೆ. ಸದ್ಯ ಈ ಟಿವಿ ಭಾರತ್ ರಚನೆ ಮಾಡಿರುವ ವೈಷ್ಣವೊ ಜನತೋ ಎಂಬ ಸಾಹಿತ್ಯವನ್ನು ಬಹಳ ಮೆಚ್ಚಿಕೊಂಡು ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Intro:


ಬೆಂಗಳೂರು: ಮಹಾತ್ಮಾ ಗಾಂಧೀಜಿ ಅವರ 150 ನೇ ಹುಟ್ಟುಹಬ್ಬಕ್ಕೆ ದೇಶದ ಪ್ರಖ್ಯಾತ ಗಾಯಕ ಗಾಯಕಿಯರಿಂದ ಬಾಪೂಜಿ ಅವರ ನೆಚ್ಚಿನ‌ ವೈಷ್ಣವ ಜನತೋ ಗೀತೆಯನ್ನು ಹಾಡಿಸುವ ಮೂಲಕ‌ ರಾಷ್ಟ್ರಪಿತರಿಗೆ ಈಟಿವಿ ಭಾರತ ಸಲ್ಲಿಸಿದ ಗೌರವಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.

ಗಾಂಧೀಜಿಯವರ ಮೆಚ್ಚಿನ ಹಾಡಾದ ವೈಷ್ಣವ ಜನತೋ ಸುಂದರವಾದ ವೀಡಿಯೋ ಗೀತೆ ರಚಿಸುವ ಮೂಲಕ ಮಹಾತ್ಮ ಗಾಂಧಿಯವರಿಗೆ ಹೃತ್ಪೂರ್ವಕ ಗೌರವ ಸಲ್ಲಿಸಿದ್ದಕ್ಕಾಗಿ ಈಟಿವಿ ಭಾರತ್ ಗೆ ಅಭಿನಂದಿಸುತ್ತೇನೆ. ನಮ್ಮ ಗಾಯಕರು ಮತ್ತು ಸುಂದರವಾದ ನಿರ್ಮಾಣದ ಅದ್ಭುತ ಚಿತ್ರಣವು ಮಹಾತ್ಮ ಗಾಂಧೀಜಿಗೆ ಒಂದು ದೊಡ್ಡ ಗೌರವ ಕೊಟ್ಟಂತಾಗಿದೆ ಎಂದು ಸಿಎಂ ಬಿಎಸ್ವೈ ಮುಖ್ಯಮಂತ್ರಿಗಳ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
Body:.Conclusion:
Last Updated :Oct 2, 2019, 11:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.