ETV Bharat / state

ಕೊರೊನಾ‌ ಕರಿನೆರಳಲ್ಲೇ ಸರಳವಾಗಿ ರಕ್ಷಬಂಧನ ಆಚರಿಸಿ ಸಂಭ್ರಮಿಸಿದ ಒಡಹುಟ್ಟಿದವರು..

author img

By

Published : Aug 22, 2021, 7:38 PM IST

brother sister celebrate raksha bandhan simple
ರಕ್ಷಾಬಂಧನ ಆಚರಣೆ

ಈ ದಿನಕ್ಕೆ ಮತ್ತೊಂದು ವಿಶೇಷವಿದೆ. ಈ ಮೊದಲು ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತವಿದ್ದ 'ರಕ್ಷಾಬಂಧನ' ಅಥವಾ 'ರಾಖಿ' ಹಬ್ಬವನ್ನು ಇತ್ತೀಚಿನ ವರ್ಷಗಳಲ್ಲಿ ಭಾರತದಾದ್ಯಂತ ಎಲ್ಲರೂ ಆಚರಿಸುತ್ತಾರೆ. ಆದರೆ, ಅಣ್ಣ-ತಂಗಿಯರ ಬಾಂಧವ್ಯವನ್ನು ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಸ್ಮರಿಸುವ ಈ ದಿನ ಬಾಲ್ಯದ ಅನೇಕ ಸಿಹಿ ನೆನಪುಗಳನ್ನು ನಮ್ಮ ಮನದಲ್ಲಿ ಮೂಡಿಸುತ್ತದೆ..

ಬೆಂಗಳೂರು : ಇಂದು ನಾಡಿನಾದ್ಯಂತ ಸೋದರ ಬಾಂಧವ್ಯ ಬೆಸೆಯುವ ರಕ್ಷಾಬಂಧನದ ಸಂಭ್ರಮ‌ ಮಾಡಿದೆ.‌ ಶ್ರಾವಣ ಮಾಸದ ಶುದ್ಧ ಪೌರ್ಣಿಮೆಯ ದಿನ ಈ ಹಬ್ಬವನ್ನ ಆಚರಿಸಲಾಗುತ್ತೆ. ಭಾರತೀಯರ ಪಾಲಿಗೆ ಇದು ಪವಿತ್ರವಾದ ಹಬ್ಬ. ಈ ರಾಖಿ ಹಬ್ಬ ಸಹೋದರತ್ವದ ಪ್ರೀತಿಯ ಸಂಕೇತವಾಗಿದೆ. ತಂಗಿಗೆ ಸಹೋದರನ ಪ್ರೀತಿಯನ್ನ ದುಪ್ಪಟ್ಟು ಹೆಚ್ಚು ಮಾಡುವ ಹಬ್ಬವಿದು.

ರಕ್ಷಾಬಂಧನ ಆಚರಣೆ

ಪ್ರತಿವರ್ಷ ರಾಖಿ ಹಬ್ಬ ಬಂತು ಅಂದ್ರೆ ಅಣ್ಣ ತಂಗಿಯರು ಅದ್ದೂರಿಯಾಗಿ ಆಚರಿಸುತ್ತಿದ್ದರು. ಬೇರೆ ಊರಲ್ಲಿ ವಾಸವಾಗಿರುತ್ತಿದ್ದ ಅಣ್ಣ ತಂಗಿಯರು ಈ ಹಬ್ಬವನ್ನ ಆಚರಿಸಲು ಸೇರುತ್ತಿದ್ದರು. ಆದ್ರೆ, ಈ ವರ್ಷ ಹಬ್ಬದ ವಾತಾವರಣ ಕೊಂಚ ಮಟ್ಟಿಗೆ ಕಡಿಮೆಯಾಗಿತ್ತು. ಕೊರೊನಾ ಇದ್ದ ಕಾರಣ ಊರಿಂದ‌ ಊರಿಗೆ ಪ್ರಯಾಣಿಸಲಾಗದೇ ತಂಗಿಯರು ಪೋಸ್ಟ್ ಮೂಲಕ ತಮ್ಮ ಅಣ್ಣಂದಿರಿಗೆ ರಾಖಿ ಕಳಿಸಿದ್ದಾರೆ. ಮನೆಯಲ್ಲಿಯೇ ಇರುವ ಅಣ್ಣ-ತಂಗಿಯರು ಸರಳವಾಗಿ ರಕ್ಷಾ ಬಂಧನ ಹಬ್ಬ ಆಚರಿಸಿದ್ದಾರೆ.

ಈ ಬಾರಿ ಮಾರುಕಟ್ಟೆಗಳಲ್ಲಿ, ಫ್ಯಾನ್ಸಿ ಸ್ಟೋರ್‌ನಲ್ಲಿ ಬಗೆ ಬಗೆಯ ರಾಖಿಗಳು ಮಾರಾಟವಾಗುತ್ತಿವೆ.. ಕುಂದನ್, ಸ್ಟೋನ್, ಜುಮಕಿ, ದಾರದ ರಾಖಿ, ಮಣಿ, ಮುತ್ತಿನ ರಾಖಿಗಳು ಸೇರಿದಂತೆ ಮಕ್ಕಳಿಗಾಗಿ ಸ್ಪೈಡರ್ ಮ್ಯಾನ್ ರಾಖಿ , ಆ್ಯಂಗ್ರಿ ಬರ್ಡ್ಸ್ ರಾಖಿ, ಛೋಟಾ ಭೀಮ್, ಸೂಪರ್ ಮ್ಯಾನ್ ರಾಖಿಗಳು ಲಭ್ಯವಾಗುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿವೆ.

ರಕ್ಷಾ ಬಂಧನ ಶ್ರಾವಣ ಮಾಸದಲ್ಲಿ ಆಚರಿಸುವ ಒಂದು ಹಬ್ಬ.. ಈ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಪಡೆಯುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟಗೊಳಿಸುವ ಹಬ್ಬ ಇದಾಗಿದೆ..

ಈ ದಿನಕ್ಕೆ ಮತ್ತೊಂದು ವಿಶೇಷವಿದೆ. ಈ ಮೊದಲು ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತವಿದ್ದ 'ರಕ್ಷಾಬಂಧನ' ಅಥವಾ 'ರಾಖಿ' ಹಬ್ಬವನ್ನು ಇತ್ತೀಚಿನ ವರ್ಷಗಳಲ್ಲಿ ಭಾರತದಾದ್ಯಂತ ಎಲ್ಲರೂ ಆಚರಿಸುತ್ತಾರೆ. ಆದರೆ, ಅಣ್ಣ-ತಂಗಿಯರ ಬಾಂಧವ್ಯವನ್ನು ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಸ್ಮರಿಸುವ ಈ ದಿನ ಬಾಲ್ಯದ ಅನೇಕ ಸಿಹಿ ನೆನಪುಗಳನ್ನು ನಮ್ಮ ಮನದಲ್ಲಿ ಮೂಡಿಸುತ್ತದೆ.

ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸಲೆಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾಬಂಧನ ಹಬ್ಬದ ನೀತಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.