ETV Bharat / state

ಪಿಎಸ್​​ಐ ಮೇಲೆ ಶಾಸಕರು ಗರಂ: ಎಂಎಲ್​​ಎ ನಡೆ ವಿರುದ್ಧ ಬಿಜೆಪಿ ಟ್ವೀಟಾಸ್ತ್ರ!

author img

By

Published : Mar 16, 2023, 10:41 PM IST

Updated : Mar 16, 2023, 10:51 PM IST

ಕಾಮಗಾರಿ ಸಂಬಂಧ ಕಾಂಗ್ರೆಸ್ ಶಾಸಕ ಆನಂದ ನ್ಯಾಮಗೌಡ ಅವರು ಪಿಎಸ್​​ಐ ಮೇಲೆ ಕೋಪಗೊಂಡ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

mla-anand-nyamagowdar-anger-on-psi
ಪಿಎಸ್​​ಐ ಮೇಲೆ ಶಾಸಕ ನ್ಯಾಮಗೌಡರ ಗರಂ : ಶಾಸಕರ ನಡೆಗೆ ಬಿಜೆಪಿ ಟೀಕೆ

ಬಾಗಲಕೋಟೆ: ಕಾಮಗಾರಿ ವಿಚಾರವಾಗಿ ಕಾಂಗ್ರೆಸ್ ಶಾಸಕ ಆನಂದ ನ್ಯಾಮಗೌಡ ಅವರು ಪಿಎಸ್​​ಐ ಮೇಲೆ ಗರಂ ಆದ ಘಟನೆ ನಗರದಲ್ಲಿ ನಡೆದಿದೆ. ನಗರದ ಹೊರ ವಲಯದ ಮುಧೋಳ ರಸ್ತೆಯಲ್ಲಿ ವೃತ್ತ ನಿರ್ಮಾಣ ಸಂದರ್ಭದಲ್ಲಿ‌ ಜಮಖಂಡಿ ಪಿಎಸ್​​ಐ ಹಾಗೂ ಜನರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಶಾಸಕರು ಎಸ್​​​ಐ ಮೇಲೆ ಗರಂ ಆಗಿದ್ದಾರೆ.

  • ನಿನ್ನೆಯಷ್ಟೇ ಕಾಂಗ್ರೆಸ್ ಅಧ್ಯಕ್ಷ @DKShivakumar ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ಮೇಲೆ ರೌಡಿ ಪ್ರವೃತ್ತಿ ತೋರಿದ್ದರು. ಈಗ ಅವರ ಹಾದಿಯಲ್ಲೇ ಜಮಖಂಡಿ ಕಾಂಗ್ರೆಸ್ ಶಾಸಕ @SidduNyamagouda ಪೊಲೀಸರ ಮೇಲೆ ಗೂಂಡಾಗಿರಿ ಪ್ರದರ್ಶಿಸಿದ್ದಾರೆ. ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ರಾಜ್ಯ ರೌಡಿಗಳ ಅಡ್ಡವಾಗಲಿದೆ.#CriminalCongress pic.twitter.com/AuoKQ8cxhC

    — BJP Karnataka (@BJP4Karnataka) March 16, 2023 " class="align-text-top noRightClick twitterSection" data=" ">

ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಮತ್ತೊಂದೆಡೆ ಈ ಘಟನೆ ಬಗ್ಗೆ ವಿಡಿಯೋದೊಂದಿಗೆ ರಾಜ್ಯ ಬಿಜೆಪಿ ಟ್ವೀಟ್ ಮಾಡಿದ್ದು, ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಈ ನಡುವೆ ಶಾಸಕರು ಗರಂ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಪರ- ವಿರೋಧದ ಚರ್ಚೆ ಜೋರಾಗಿ ಸಾಗಿದೆ.

ಇದನ್ನೂ ಓದಿ: ಕಾರ್ಯಕರ್ತರ ಪ್ರತಿಭಟನೆ ವಿಜಯ ಸಂಕಲ್ಪಯಾತ್ರೆ ರದ್ದುಗೊಳಿಸಿ ಹೊರನಡೆದ ಬಿಎಸ್​ವೈ

Last Updated :Mar 16, 2023, 10:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.