ETV Bharat / sports

ಏಕದಿನ ವಿಶ್ವಕಪ್ 2023: ಮಾಜಿ ಕ್ರಿಕೆಟರ್​ ಕಿರಣ್ ಮೋರೆ​ ಜತೆ ಈಟಿವಿ ಭಾರತ ವಿಶೇಷ ಸಂದರ್ಶನ

author img

By ETV Bharat Karnataka Team

Published : Oct 3, 2023, 2:01 PM IST

​ ಕಿರಣ್ ಮೋರ್
​ ಕಿರಣ್ ಮೋರ್

ಭಾರತದ ಮಾಜಿ ಕ್ರಿಕೆಟರ್​ ಮತ್ತು ಮುಖ್ಯ ಆಯ್ಕೆಗಾರ ಕಿರಣ್​ ಮೋರೆ​ ಈಟಿವಿ ಭಾರತ ನಡೆಸಿದ ವಿಶೇಷ ಸಂದರ್ಶನದಲ್ಲಿ ತಂಡದ ಬಗ್ಗೆ ಮಾತನಾಡಿದ್ದಾರೆ.

ಕೋಲ್ಕತ್ತಾ: ಐಸಿಸಿ ಏಕದಿನ ವಿಶ್ವಕಪ್ (ICC World Cup) ಸರಣಿ ​ಆರಂಭಕ್ಕೆ ಕೇವಲ ಎರಡು ದಿನಗಳು ಮಾತ್ರ ಬಾಕಿ ಉಳಿದಿವೆ. ಇದಕ್ಕಾಗಿ ಎಲ್ಲ ತಂಡಗಳು ಈಗಾಗಲೇ ಭರದ ಸಿದ್ದತೆ ಕೂಡ ನಡೆಸಿವೆ. ಗುರುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್​ ನಡುವೆ ಮೊದಲ ಪಂದ್ಯ ನಡೆಯಲಿದೆ. ಈ ಮೂಲಕ ವಿಶ್ವಕಪ್​ ಅಭಿಯಾನ ಪ್ರಾರಂಭಗೊಳ್ಳಲಿದೆ. ಭಾನುವಾರ ವಿಶ್ವಕಪ್​ನ 5ನೇ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ನಡೆಯಲಿದೆ.

ಇತ್ತೀಚೆಗೆ ನಡೆದ ಏಷ್ಯಾಕಪ್ ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಗಂಭೀರವಾಗಿ ಗಾಯಗೊಂಡು ವಿಶ್ವಕಪ್​ನಿಂದ ಹೊರಬಿದ್ದಿದ್ದು, ಇವರ ಸ್ಥಾನಕ್ಕೆ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಆಯ್ಕೆ ಮಾಡಲಾಗಿದೆ. ಇದೀಗ ಭಾರತ ಬೌಲಿಂಗ್,​ ಬ್ಯಾಟಿಂಗ್​ ಲೈನ್​ನಲ್ಲೂ ಬಲಿಷ್ಠ ತಂಡವಾಗಿದೆ.

ಈ ಕುರಿತು ಭಾರತದ ಮಾಜಿ ಕ್ರಿಕೆಟರ್​ ಮತ್ತು ಮುಖ್ಯ ಆಯ್ಕೆಗಾರರಾಗಿರುವ ಕಿರಣ್ ಮೋರೆ​ ಈಟಿವಿ ಭಾರತ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ. ವಿಶ್ವಕಪ್ ಬೇಟೆಗೆ​ ಭಾರತ ತಂಡ ಸಜ್ಜಾಗಿದೆ. ಈ ಬಾರಿಯ ಪ್ಲಸ್ ಪಾಯಿಂಟ್ ಎಂದರೆ ಹೆಚ್ಚಿನ ವಿಕೆಟ್ ಪಡೆಯಬಲ್ಲ ಅನುಭವಿ ಬೌಲರ್‌ಗಳು ತಂಡದಲ್ಲಿದ್ದಾರೆ. ಕೆಲ ಬೌಲರ್​ಗಳು ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡು ವಿಶ್ವಕಪ್​ಗೆ ಸಿದ್ಧರಾಗಿದ್ದಾರೆ. ಸಂಪೂರ್ಣವಾಗಿ ಲಯ ಕಂಡುಕೊಂಡರೆ ತಂಡಕ್ಕೆ ಮತ್ತಷ್ಟು ಲಾಭವಾಗಲಿದೆ ಎಂದು ಹೇಳಿದರು.

ಬ್ಯಾಟಿಂಗ್​ ಲೈನ್​ಅಪ್​ ಬಗ್ಗೆ ಮಾತನಾಡಿದ ಅವರು, 'ಮೆನ್ ಇನ್ ಬ್ಲೂ' ತಂಡಕ್ಕೆ ಬ್ಯಾಟಿಂಗ್ ಯಾವಾಗಲೂ ಸ್ಟ್ರಾಂಗ್ ಸೂಟ್ ಆದರೆ, ಈ ಬಾರಿ ಬೌಲಿಂಗ್ ಕೂಡ ಮಾರಕವಾಗಿ ಕಾಣುತ್ತಿದೆ. ಎಲ್ಲ ಬೌಲರ್​ಗಳು ಮೊದಲ 10 ಓವರ್‌ಗಳಿಂದ ಮಧ್ಯಮ, ಡೆತ್ ಓವರ್‌ಗಳವರೆಗೂ ವಿಕೆಟ್‌ಗಳನ್ನು ಕಬಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಆಲ್ ರೌಂಡರ್ ಆಗಿರುವ ಹಾರ್ದಿಕ್ ಪಾಂಡ್ಯ ಕೂಡ ವಿಕೆಟ್ ಟೇಕಿಂಗ್ ಬೌಲರ್ ಆಗಿದ್ದಾರೆ. ಇವರ ಹೊರತಾಗಿ ರವೀಂದ್ರ ಜಡೇಜಾ ಕೂಡ ಇರಲಿದ್ದಾರೆ. ಕುಲ್ದೀಪ್ ಯಾದವ್ ಬೌಲಿಂಗ್​​ ದಾಳಿ ಮೂಲಕ ತಂಡದ ಸಾಮರ್ಥ್ಯ ಹೆಚ್ಚಿಸಲಿದ್ದಾರೆ.

ಟೀಂ ಇಂಡಿಯಾದ ಎಲ್ಲ ಆಟಗಾರರು ಅಗತ್ಯವಾದ ಕೌಶಲ್ಯಗಳನ್ನು ಹೊಂದಿದ್ದು, ವಿಶ್ವಕಪ್‌ ನಂತಹ ದೊಡ್ಡ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ. ಈಗಾಗಲೇ ಭಾರತ ಮೂರು ಸ್ವರೂಪದ ಕ್ರಿಕೆಟ್​ನಲ್ಲಿ ಅಗ್ರ ಸ್ಥಾನದಲ್ಲಿದ್ದು, ಮೊದಲಿನಿಂದಲೂ ಉತ್ತಮ ಫಾರ್ಮ್​ನಲ್ಲಿದೆ ಎಂದು ಮೋರೆ ಹೇಳಿದ್ದಾರೆ.

ಪ್ರಸ್ತುತ ವಿಶ್ವಕಪ್​ ತಂಡದಲ್ಲಿರುವ ಎಲ್ಲ ಆಟಗಾರರು ಸಾಕಷ್ಟು ODI ಮತ್ತು T20 ಪಂದ್ಯಗಳನ್ನು ಆಡಿರುವ ಅನುಭವಿಗಳಾಗಿದ್ದಾರೆ. ಇದಲ್ಲದೇ ಹಾಗಾಗಿ ಭಾರತ ಸುಲಭವಾಗಿ ಸೆಮಿಫೈನಲ್‌ ಪ್ರವೇಶಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಐಸಿಸಿ ಏಕದಿನ ವಿಶ್ವಕಪ್: ಪಂದ್ಯಾವಳಿಗಾಗಿ ಚಿನ್ನಸ್ವಾಮಿ ಕ್ರೀಡಾಂಗಣ ಮತ್ತಷ್ಟು ಮೇಲ್ದರ್ಜೆಗೆ, ವಿಶೇಷತೆಗಳೇನು‌?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.