ETV Bharat / sports

ಟಿ20 ವಿಶ್ವಕಪ್​ನಲ್ಲಿ ರೋಹಿತ್,ರಾಹುಲ್​​, ಕೊಹ್ಲಿ ಭಾರತದ ಟಾಪ್​ 3 ನಲ್ಲಿ  ಆಡಲು ಸೂಕ್ತರೆ?

author img

By

Published : May 4, 2022, 10:59 PM IST

ಟಿ20 ವಿಶ್ವಕಪ್​ಗೆ ಭಾರತ ತಂಡ
ಟಿ20 ವಿಶ್ವಕಪ್​ಗೆ ಭಾರತ ತಂಡ

2022ರ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಫಾರ್ಮ್​ನ ಸೂಚಕವಾಗಿದ್ದರೂ ಈ ಹಂತದಲ್ಲಿ ಚೇತನ್​ ಶರ್ಮಾ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿ ಅಂತಹ ಯಾವುದೇ ಅಲೋಚನೆಗಳನ್ನು ಹೊಂದಿಲ್ಲ. ನಾಯಕ ರೋಹಿತ್ , ಉಪನಾಯಕ ರಾಹುಲ್ ಮತ್ತು ತಂಡದ ಪ್ರೀಮಿಯರ್ ಬ್ಯಾಟರ್​ ವಿರಾಟ್​ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮೆಗಾ ಇವೆಂಟ್​ನಲ್ಲಿ ಅಗ್ರ 3 ಕ್ರಮಾಂಕದಲ್ಲಿ ಆಡಲು ಸಿದ್ಧರಾಗಿದ್ದಾರೆ.

ನವದೆಹಲಿ: ಪ್ರಸ್ತುತ ಫಾರ್ಮ್ ಪ್ರೇರೇಪಿಸದಿದ್ದರೂ ನಾಯಕ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಅನಿವಾರ್ಯವಾಗಲಿದ್ದಾರೆ. ಆದರೆ ತಂಡದ ಲಾಭಕ್ಕಾಗಿ ಅವರ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಬಹುದು ಎಂದು ಕ್ರಿಕೆಟ್​ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

2022ರ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಫಾರ್ಮ್​ನ ಸೂಚಕವಾಗಿದ್ದರೂ ಈ ಹಂತದಲ್ಲಿ ಚೇತನ್​ ಶರ್ಮಾ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿ ಬದಲಾವಣೆಯ ಯಾವುದೇ ಅಲೋಚನೆಗಳನ್ನು ಹೊಂದಿಲ್ಲ. ನಾಯಕ ರೋಹಿತ್ , ಉಪನಾಯಕ ರಾಹುಲ್ ಮತ್ತು ತಂಡದ ಪ್ರೀಮಿಯರ್ ಬ್ಯಾಟರ್​ ವಿರಾಟ್​ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮೆಗಾ ಈವೆಂಟ್​ನಲ್ಲಿ ಅಗ್ರ 3 ಕ್ರಮಾಂಕದಲ್ಲಿ ಆಡಲು ಸಿದ್ಧರಾಗಿದ್ದಾರೆ.

ಆದರೆ ಕಳೆದ ಟಿ20 ವಿಶ್ವಕಪ್​ನಲ್ಲಿ ಭಾರತದ ಈ ಬ್ಯಾಟಿಂಗ್ ಕ್ರಮಾಂಕ ತಂಡಕ್ಕೆ ಸೂಕ್ತ ಫಲಿತಾಂಶವನ್ನು ತರಲಿಲ್ಲ. ಈ ಮೂವರು ಟಾಪ್​ ಬ್ಯಾಟರ್​ಗಳು ಮೊದಲು ಸೆಟ್​ ಆಗಿ ನಂತರ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುವ ಒಂದೇ ತರಹದ ಬ್ಯಾಟಿಂಗ್ ಶೈಲಿ ಭಾರೀ ಟೀಕೆಗೆ ಗುರಿಯಾಗಿತ್ತು. ಅಂದಿನಿಂದ ರೋಹಿತ್​ ಬ್ಯಾಟಿಂಗ್ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುಲು ಬಯಸುತ್ತಿದ್ದಾರೆ. ಆದರೆ ಪ್ರಸ್ತುತ ಐಪಿಎಲ್​ನಲ್ಲಿ 123ರ ಸ್ಟ್ರೈಕ್​ರೇಟ್​ನಲ್ಲಿ 9 ಪಂದ್ಯಗಳಿಂದ ಕೇವಲ 155 ರನ್​ಗಳಿಸಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ.

ಇನ್ನೂ ಕೊಹ್ಲಿ ಅತ್ಯಂತ ಕಳಪೆ ಫಾರ್ಮ್​ನಲ್ಲಿದ್ದಾರೆ. ಟೂರ್ನಿಯಲ್ಲಿ 10 ಪಂದ್ಯಗಳಿಂದ 116ರ ಸ್ಟ್ರೈಕ್​ರೇಟ್​ನಲ್ಲಿ 186 ರನ್​ಗಳಿಸಿದ್ದಾರೆ. ಇನ್ನು ರಾಹುಲ್​ ಲಖನೌ ಸೂಪರ್ ಜೈಂಟ್ಸ್ ಪರ 145ರ ಸ್ಟ್ರೈಕ್​ರೇಟ್​​ನಲ್ಲಿ 451 ರನ್​ಗಳಿಸಿ ವಿಜೃಂಭಿಸಿದ್ದಾರೆ. ಆದರೆ ರಾಹುಲ್​ ಅವರ ಪವರ್​ ಪ್ಲೇ ಆಟ ನಿಜಕ್ಕೂ ಉತ್ತಮವಾಗಿಲ್ಲ. ಅವರು ಟೂರ್ನಿಯಲ್ಲಿ ಪವರ್​​ ಪ್ಲೇ ಓವರ್​ಗಳಲ್ಲಿ 10 ಪಂದ್ಯಗಳಿಂದ 55 ಡಾಟ್​ ಬಾಲ್​ಗಳನ್ನಾಡಿದ್ದಾರೆ. ಅವರು ಒಟ್ಟಾರೆ ಪವರ್​ ಪ್ಲೇನಲ್ಲಿ 123 ಎಸೆತಗಳಲ್ಲಿ 141 ರನ್​ಗಳಿಸಿದ್ದಾರೆ. ಅಂದರೆ ಟಿ20ಯಲ್ಲಿ ಬ್ಯಾಟರ್​ಗಳ ಪಾಲಿನ ಬಂಪರ್​ ಓವರ್​ಗಳಲ್ಲಿ ಅವರ ಸ್ಟ್ರೈಕ್​ರೇಟ್ ಕೇವಲ111.90 ಈ ಓವರ್​ಗಳಲ್ಲಿ ಅವರು 15 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿದ್ದಾರೆ.

ಈ ಮೂವರಲ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಅಗತ್ಯವಿದೆಯೇ? ಎಂಬ ವಿಚಾರವಾಗಿ ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್​ ಮತ್ತು ಅವರ ಸಹ ಆಯ್ಕೆಗಾರ ದೇವಾಂಗ್ ಗಾಂಧಿ ಮತ್ತು ಮಾಜಿ ವಿಕೆಟ್ ಕೀಪರ್ ದೀಪ್​ ದಾಸ್​ ಗುಪ್ತಾ ಅವರು ತಮ್ಮದೇ ಆದ ರೀತಿಯಲ್ಲಿ ವಿವರಿಸಿದ್ದಾರೆ.

ಈ ಮೂವರು ಆಟಗಾರರು ಫಿಟ್​ ಇದ್ದರೇ ತಂಡಕ್ಕೆ ಅನಿವಾರ್ಯರಾಗಲಿದ್ದಾರೆ. ಟಿ20 ವಿಶ್ವಕಪ್​ನಲ್ಲಿ ಇವರಲ್ಲಿ ಯಾರನ್ನು ಬಿಡಲು ಸಾಧ್ಯವಿಲ್ಲ. ಆದರೆ ಅಂಕಿ ಅಂಶಗಳ ಆಧಾರದಲ್ಲಿ ನಾನು ಶಿಖರ್​ ಧವನ್​ರನ್ನು ಆರಂಭಿಕ ಸ್ಥಾನದಲ್ಲಿ ಕಾಣಲು ಬಯಸುತ್ತೇನೆ. ಕೆಎಲ್ ರಾಹುಲ್​ರನ್ನು 4ನೇ ಕ್ರಮಾಂಕದಲ್ಲಿ ಪರೀಕ್ಷಿಸಬಹುದು. ಅವರು ಆ ಸ್ಥಾನದಲ್ಲಿ ಮ್ಯಾಂಚೆಸ್ಟರ್​ನಲ್ಲಿ ಕೆಲವು ವರ್ಷಗಳ ಹಿಂದೆ ಶತಕ ಸಿಡಿಸಿದ್ದಾರೆ ಎಂದು ಎಂಎಸ್​ಕೆ ಪ್ರಸಾದ್​ ಪಿಟಿಐಗೆ ತಿಳಿಸಿದ್ದಾರೆ.

ಮುಂದುವರಿಸಿದ ಪ್ರಸಾದ್​, ಏಷ್ಯಾಕಪ್‌ಗೂ ಮುನ್ನ ವಿರಾಟ್ ಮಹತ್ವದ ವಿರಾಮ ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

ಬ್ಯಾಟಿಂಗ್ ಕ್ರಮಾಂಕದ ಬದಲಾವಣೆ ಬಗ್ಗೆ ಮಾತನಾಡಿರುವ ದೇವಾಂಗ್ ಗಾಂಧಿ, ಟಿ20 ವಿಶ್ವಕಪ್​ನಂತಹ ದೊಡ್ಡ ಟೂರ್ನಮೆಂಟ್​ನಲ್ಲಿ ಪ್ರಯೋಗ ಮಾಡುವುದಕ್ಕೆ ಬಯಸುವುದಿಲ್ಲ ಎಂದು ತಿಳಿಸಿದ್ದಾರೆ. ಈ ಮೂವರು ನಿಮ್ಮ ಸಾಬೀತಾಗಿರುವ ಸಾಧಕರು ಮತ್ತು ಅವರು ಬಹಳ ಕಾಲದಿಂದ ಭಾರತಕ್ಕಾಗಿ ಆಡಿದ್ದಾರೆ, ಅವರು ಫ್ರಾಂಚೈಸಿಗಾಗಿ ಆಡುವಾಗ ನಿರ್ವಹಿಸುವ ಜವಾಬ್ದಾರಿಗೆ ಸಂಪೂರ್ಣ ವಿಭಿನ್ನವಾಗಿರುತ್ತದೆ ಎಂದಿದ್ದಾರೆ.

ಜೊತೆಗೆ ಬದಲಾವಣೆ ಮಾಡುವುದರ ಬಗ್ಗೆ ಮಾತನಾಡುವ ಮುನ್ನ ಅವರ ಜಾಗಕ್ಕೆ ಅರ್ಹ ಅಭ್ಯರ್ತಿಗಳು ಯಾರು? ಎನ್ನುವುದು ಮುಖ್ಯ. ಅವರು ಸೂಕ್ತರೆ ಮತ್ತು ಪಾಕಿಸ್ತಾನದಂತಹ ತಂಡದ ವಿರುದ್ಧ ಒತ್ತಡದಲ್ಲಿ ಆಡುವಾಗ ಈ ಮೂವರಿಗಿಂತಲೂ ಉತ್ತಮವಾಗಿ ಆಡಬಲ್ಲರೇ? ನೀವು ಈ ಅಂಶವನ್ನು ಪರಿಗಣಿಸಬೇಕು ಎಂದಿದ್ದಾರೆ.

ದೀಪ್​ದಾಸ್​ ಗುಪ್ರಾ ಅವರ ಅಭಿಪ್ರಾಯ: ಆ ಮೂವರನ್ನು ನಂಬರ್ 1, 2 ಮತ್ತು 3ರಲ್ಲಿ ಆಡಬಹುದು, ಆದರೆ ಟೂರ್ನಮೆಂಟ್​ಗೂ ಮುಂಚೆಯೇ ಅವರಿಗೆ ನಿರ್ದಿಷ್ಟ ಪಾತ್ರವನ್ನು ಗೊತ್ತುಪಡಿಸಬೇಕು ಎಂದಿದ್ದಾರೆ. ಒಂದು ವೇಳೆ ಬದಲಾವಣೆಯ ಅಗತ್ಯವಿದೆ ಎಂದು ಕೇಳಿದರೆ, ಧವನ್ ಅಥವಾ ಪೃಥ್ವಿ ಶಾ ಅವರನ್ನು ಅಗತ್ಯವಿದ್ದರೆ ಪ್ರಯತ್ನಿಸಬಹುದು ಎಂದು ದಾಸ್‌ಗುಪ್ತ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:ಭಾರತ 2019ರ ವಿಶ್ವಕಪ್ ಸೋಲಿನ ಕಾರಣ ತಿಳಿಸಿದ ಯುವರಾಜ್ ಸಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.