ETV Bharat / sports

ಆರ್​ಸಿಬಿ ನಾಯಕತ್ವ ತ್ಯಜಿಸಿದ್ದಕ್ಕೆ ಕೊನೆಗೂ ಕಾರಣ ಬಹಿರಂಗ ಪಡಿಸಿದ ವಿರಾಟ್​ ಕೊಹ್ಲಿ!

author img

By

Published : Feb 24, 2022, 5:01 PM IST

Kohli on stepping down as RCB skipper
ವಿರಾಟ್ ಕೊಹ್ಲಿ ಆರ್​ಸಿಬಿ ನಾಯಕತ್ವ

ಟಿ-20 ವಿಶ್ವಕಪ್​ ನಾಯಕನಾಗಿ ನನ್ನ ಕೊನೆಯ ಟೂರ್ನಮೆಂಟ್ ಎಂದಿದ್ದ ಕೊಹ್ಲಿ ನಂತರ ಐಪಿಎಲ್​ನಲ್ಲೂ ನಾಯಕನಾಗಿ ಇದೇ ತಮ್ಮ ಕೊನೆಯ ಆವೃತ್ತಿ ಎಂದು ಘೋಷಿಸಿ ಕ್ರಿಕೆಟ್​ ವಲಯಕ್ಕೆ ಆಶ್ಚರ್ಯವನ್ನುಂಟು ಮಾಡಿದ್ದರು.

ಮುಂಬೈ: 2021ರ ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ರಾಯಲ್​ ಚಾಲೆಂಜರ್ಸ್​​ ನಾಯಕತ್ವ ತ್ಯಜಿಸಿದ್ದ ವಿರಾಟ್ ಕೊಹ್ಲಿ, ಕೆಲಸದ ಹೊರೆಯನ್ನು ನಿಯಂತ್ರಿಸಿಕೊಳ್ಳುವುದಕ್ಕೆ ಆ ನಿರ್ಧಾರ ತೆಗೆದುಕೊಂಡೆ ಎಂದು ಟೀಮ್ ಇಂಡಿಯಾ ಮಾಜಿ ನಾಯಕ ಹೇಳಿಕೊಂಡಿದ್ದಾರೆ. ಟಿ-20 ವಿಶ್ವಕಪ್​ ನಾಯಕನಾಗಿ ನನ್ನ ಕೊನೆಯ ಟೂರ್ನಮೆಂಟ್ ಎಂದಿದ್ದ ಕೊಹ್ಲಿ ನಂತರ ಐಪಿಎಲ್​ನಲ್ಲೂ ನಾಯಕನಾಗಿ ಇದೇ ತಮ್ಮ ಕೊನೆಯ ಆವೃತ್ತಿ ಎಂದು ಘೋಷಿಸಿ ಕ್ರಿಕೆಟ್​ ವಲಯಕ್ಕೆ ಆಶ್ಚರ್ಯವನ್ನುಂಟು ಮಾಡಿದ್ದರು. ನಂತರ ಅವರನ್ನು ಬಿಸಿಸಿಐ ಆಯ್ಕೆ ಸಮಿತಿ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿತ್ತು. ಇದಾದ ಕೆಲವೇ ತಿಂಗಳಲ್ಲಿ ಕೊಹ್ಲಿ ಟೆಸ್ಟ್​ ತಂಡದ ನಾಯಕತ್ವವನ್ನು ತ್ಯಜಿಸಿದ್ದರು.

ಇದನ್ನೂ ಓದಿ:IPL 2022: ಕನ್ನಡಿಗ ಮಯಾಂಕ್ ಅಗರ್ವಾಲ್​ಗೆ ಪಂಜಾಬ್ ಕಿಂಗ್ಸ್ ನಾಯಕನ ಪಟ್ಟ?

ನನ್ನ ಕೈಯಿಂದ ಮಾಡಲಾಗದನ್ನು ನ್ನನ್ನಲ್ಲೇ ಹಿಡಿದಿಟ್ಟುಕೊಳ್ಳಬೇಕು ಎಂದು ಬಯಸುವ ವ್ಯಕ್ತಿ ನಾನಲ್ಲ. ನಾನು ಸಾಕಷ್ಟನ್ನು ಮಾಡಬಲ್ಲೇ ಎಂದು ನನಗೆ ಗೊತ್ತಿದ್ದರೂ ಸಹಾ, ಆ ಪ್ರಕ್ರಿಯೆಯನ್ನು ಆನಂದಿಸಲು ಆಗದಿದ್ದರೆ, ಅಂತಹವುಗಳನ್ನು ನಾನು ಮಾಡಲು ಹೋಗುವುದಿಲ್ಲ ಎಂದು ಆಧುನಿಕ ಕ್ರಿಕೆಟ್​ನ ಶ್ರೇಷ್ಠ ಕ್ರಿಕೆಟಿಗ ಕೊಹ್ಲಿ ನಾಯಕತ್ವವನ್ನು ತ್ಯಜಿಸಿದರ ಬಗ್ಗೆ ಆರ್​ಸಿಬಿ ಪೋಡ್​​ಕಾಸ್ಟ್​​ನಲ್ಲಿ ಹೇಳಿಕೊಂಡಿದ್ದಾರೆ.

ಕ್ರಿಕೆಟಿಗರು ಇಂತಹ ನಿರ್ಧಾರಗಳನ್ನು ತೆಗೆದುಕೊಂಡಾಗ ಹೊರಗಿನ ಜನರಿಗೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಮಾಜಿ ಆರ್​ಸಿಬಿ ನಾಯಕ ಒಪ್ಪಿಕೊಂಡಿದ್ದಾರೆ. ನನ್ನ ಪರಿಸ್ಥಿತಿಯಲ್ಲಿ ನಿಂತು ಆಲೋಚಿಸದಿದ್ದರೆ ನನ್ನ ನಿರ್ಧಾರವನ್ನು ಜನರು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ಸಾಮಾನ್ಯವಾಗಿ ಹೊರಗಿನ ಜನರಿಗೆ ಹೆಚ್ಚಿನ ನಿರೀಕ್ಷೆಗಳಿರುತ್ತವೆ. ಓ.. ಇದು ಹೇಗಾಯಿತು? ನಮಗೆ ತುಂಬಾ ಆಘಾತವಾಗಿದೆ!, ಎಂದೆಲ್ಲಾ ಹೇಳುತ್ತಾರೆ.

ಆದರೆ, ನನ್ನ ನಿರ್ಧಾರದಿಂದ ಆಘಾತಕ್ಕೊಳಗಾಗುವಂತಹದ್ದೇನು ಇಲ್ಲ. ನನಗೆ ಸ್ಪಲ್ಪ ಸಮಯವಕಾಶ ಬೇಕಿತ್ತು. ನನ್ನ ಕೆಲಸದ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ನಾನು ಬಯಸಿದ್ದೆ. ಹೀಗಾಗಿ ಆ ನಿರ್ಧಾರ ತೆಗೆದುಕೊಂಡೆ ಅಷ್ಟೇ" ಎಂದು 100ನೇ ಟೆಸ್ಟ್​ ಹೊಸ್ತಿಲಲ್ಲಿರುವ ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ:Ranji Trophy: ಜಮ್ಮು ಕಾಶ್ಮೀರದ ವಿರುದ್ಧ ಶತಕ ಸಿಡಿಸಿ ಅಬ್ಬರಿಸಿದ ಕರುಣ್ ನಾಯರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.