ETV Bharat / sports

'ಮತ್ತಷ್ಟು ಬಲಿಷ್ಠವಾಗಿ ಹಿಂದಿರುಗುತ್ತೇವೆ'; ಸೋಲಿನ ಬಳಿಕ ಮೆಂಟರ್​ ಗಂಭೀರ್​ ಹೃದಯಸ್ಪರ್ಶಿ ಸಂದೇಶ

author img

By

Published : May 26, 2022, 4:11 PM IST

Gautam Gambhir
Gautam Gambhir

ಲಖನೌ ಸೂಪರ್ ಜೆಂಟ್ಸ್ ತಂಡದ ಮೆಂಟರ್ ಆಗಿ ಆಯ್ಕೆಯಾಗಿದ್ದ ಗೌತಮ್​ ಗಂಭೀರ್​ ಚೊಚ್ಚಲ ಪ್ರಯತ್ನದಲ್ಲೇ ಅತ್ಯದ್ಭುತ ಕೆಲಸ ಮಾಡಿದ್ದು, ತಂಡವನ್ನ ಪ್ಲೇ-ಆಫ್​ ಹಂತಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿದ್ದರು. ಆದರೆ, ನಿನ್ನೆ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಸೋಲುವ ಮೂಲಕ ಅಭಿಯಾನ ಅಂತ್ಯಗೊಳಿಸಿದೆ.

ಕೋಲ್ಕತ್ತಾ: ರಾಯಲ್​ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಎಲಿಮಿನೇಟರ್​ ಪಂದ್ಯದಲ್ಲಿ 14 ರನ್​​​ ಅಂತರದ ಸೋಲು ಕಾಣುವ ಮೂಲಕ ಲಖನೌ ಸೂಪರ್ ಜೈಂಟ್ಸ್​​ ಐಪಿಎಲ್​ ಅಭಿಯಾನ ಅಂತ್ಯಗೊಳಿಸಿದೆ. ಚೊಚ್ಚಲ ಪ್ರಯತ್ನದಲ್ಲೇ ಅತ್ಯದ್ಭುತ ಪ್ರದರ್ಶನದಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಕೆಎಲ್ ರಾಹುಲ್ ನಾಯಕತ್ವದ ಲಖನೌ, ಮುಂದಿನ ಆವೃತ್ತಿಯಲ್ಲಿ ಮತ್ತಷ್ಟು ಬಲಿಷ್ಠವಾಗಿ ಹಿಂದಿರುಗುವ ಪ್ರತಿಜ್ಞೆ ಮಾಡಿದೆ.

ಇದನ್ನೂ ಓದಿ: ರಜತ್​ ಶತಕದಬ್ಬರ, ಬೌಲರ್​ಗಳ ಮಿಂಚು... ಲಖನೌ ವಿರುದ್ಧ ಗೆದ್ದು ಕ್ವಾಲಿಫೈಯರ್​ಗೆ ಆರ್​ಸಿಬಿ ಲಗ್ಗೆ

ಪಂದ್ಯ ಸೋತ ಬಳಿಕ ತಂಡದ ಮೆಂಟರ್​ ಗೌತಮ್ ಗಂಭೀರ್​ ಹೃದಯಸ್ಪರ್ಶಿ ಸಂದೇಶ ರವಾನಿಸಿದ್ದು, 'ನಮ್ಮ ಹೊಸ ತಂಡಕ್ಕೆ ಇದು ಉತ್ತಮ ಪಂದ್ಯಾವಳಿ ಆಗಿತ್ತು. ನಾವು ಮತ್ತಷ್ಟು ಬಲಿಷ್ಠವಾಗಿ ಮರಳುತ್ತೇವೆ' ಎಂದು ಬರೆದುಕೊಂಡಿದ್ದಾರೆ. ಲಖನೌ ಸೂಪರ್​​ ಜೈಂಟ್ಸ್ ತಂಡದಲ್ಲಿ ಮುಖ್ಯ ಕೋಚ್​ ಆಗಿ ಆಂಡಿ ಫ್ಲವರ್​​ ಇದ್ದು, ಮೆಂಟರ್​ ಆಗಿ ಗೌತಮ್ ಗಂಭೀರ್ ಕಾರ್ಯ ನಿರ್ವಹಿಸುತ್ತಿದ್ದಾರೆ.

ಲೀಗ್​ ಹಂತದಲ್ಲಿ 8 ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿದ್ದ ರಾಹುಲ್ ನಾಯಕತ್ವದ ಲಖನೌ ತಂಡ ಪ್ಲೇ-ಆಫ್​​ಗೆ ಪ್ರವೇಶ ಪಡೆದುಕೊಂಡಿತ್ತು. ಆದರೆ, ನಿನ್ನೆಯ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ರೋಚಕ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದೆ. ನಿನ್ನೆಯ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ನಾಯಕ ರಾಹುಲ್​​ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.