ETV Bharat / sports

ನಾವು ನೋಡೋದೆಲ್ಲ ದೃಷ್ಟಿಕೋನವಷ್ಟೇ, ಸತ್ಯವಲ್ಲ: ವಿರಾಟ್​ ಕೊಹ್ಲಿ ಮಾರ್ಮಿಕ ಪೋಸ್ಟ್​

author img

By

Published : May 2, 2023, 1:39 PM IST

ವಿರಾಟ್​ ಕೊಹ್ಲಿ ಮಾರ್ಮಿಕ ಪೋಸ್ಟ್​
ವಿರಾಟ್​ ಕೊಹ್ಲಿ ಮಾರ್ಮಿಕ ಪೋಸ್ಟ್​

ಆರ್​ಸಿಬಿ ಮತ್ತು ಎಲ್​ಎಸ್​ಜಿ ನಡುವಿನ ಪಂದ್ಯದ ಬಳಿಕ ಗೌತಮ್​ ಗಂಭೀರ್​ ಮತ್ತು ವಿರಾಟ್​ ಕೊಹ್ಲಿ ಮಧ್ಯೆ ನಡೆದ ಗಲಾಟೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಈ ಮಧ್ಯೆ ವಿರಾಟ್​ ಕೊಹ್ಲಿ ಇನ್​​ಸ್ಟಾಗ್ರಾಮ್​ನಲ್ಲಿ ಮಾರ್ಮಿಕ ಪೋಸ್ಟ್​ವೊಂದನ್ನು ಹಾಕಿದ್ದಾರೆ.

ನವದೆಹಲಿ: ಸೋಮವಾರ ರಾತ್ರಿ ನಡೆದ ಲಖನೌ ಮತ್ತು ಆರ್​ಸಿಬಿ ನಡುವಿನ ಪಂದ್ಯ ಸೋಲು ಗೆಲುವಿಗಿಂತಲೂ ಆಟಗಾರರ ಕಿತ್ತಾಟದಿಂದಲೇ ಕುಖ್ಯಾತಿ ಪಡೆಯಿತು. ಅಫ್ಘಾನಿಸ್ತಾನದ ಆಟಗಾರ ನವೀನ್​ ಉಲ್​ ಹಕ್​ ಮತ್ತು ವಿರಾಟ್​ ಮಧ್ಯೆ ಮೈದಾನದಲ್ಲಿ ಶುರುವಾದ ಸಣ್ಣ ಅಸಮಾಧಾನ ಪಂದ್ಯ ಮುಗಿದ ಬಳಿಕ ಸ್ಫೋಟಗೊಂಡಿತು. ಎಲ್​ಎಸ್​ಜಿ ಮೆಂಟರ್​ ಗೌತಮ್​ ಗಂಭೀರ್​ ಮಧ್ಯಪ್ರವೇಶದ ಬಳಿಕ ಅದು ಇನ್ನಷ್ಟು ತಾರಕ್ಕೇರಿತ್ತು.

ವಿರಾಟ್​ ಕೊಹ್ಲಿ ಮಾರ್ಮಿಕ ಪೋಸ್ಟ್​
ವಿರಾಟ್​ ಕೊಹ್ಲಿ ಮಾರ್ಮಿಕ ಪೋಸ್ಟ್​

ಮೈದಾನದಲ್ಲಿ ಏನೆಲ್ಲಾ ಆಯ್ತು ಎಂಬುದರ ಬಗ್ಗೆ ಬ್ಯಾಟಿಂಗ್​ ಕಿಂಗ್​ ವಿರಾಟ್​ ಕೊಹ್ಲಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ 2ನೇ ಶತಮಾನದ ರೋಮನ್ ಚಕ್ರವರ್ತಿ ಮತ್ತು ತತ್ವಜ್ಞಾನಿ ಮಾರ್ಕಸ್ ಆರೆಲಿಯಸ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಪೋಸ್ಟ್​ ವೊಂದನ್ನು ಹಾಕಿಕೊಂಡಿದ್ದಾರೆ.

"ನಾವು ಕೇಳುವುದೆಲ್ಲವೂ ಒಂದು ಅಭಿಪ್ರಾಯವೇ ಹೊರತು ಸತ್ಯವಲ್ಲ. ನಾವು ನೋಡುವುದೆಲ್ಲವೂ ದೃಷ್ಟಿಕೋನವೇ ಹೊರತು ಸತ್ಯವಲ್ಲ" ಎಂದು ಬರೆದುಕೊಂಡಿರುವ ಕೊಹ್ಲಿ ಸ್ಟೋರಿ ಪೋಸ್ಟ್​ ಮಾಡಿ ಕೊಂಡಿದ್ದಾರೆ. ಅಂದರೆ ಮೈದಾನದಲ್ಲಿ ನಡೆದ ಗಲಾಟೆಗೆ ಕಾರಣ ಅರಿಯದೇ ಪ್ರತಿಕ್ರಿಯಿಸಿದರ ಬಗ್ಗೆ ಸೂಚ್ಯವಾಗಿ ಹೇಳಿದ್ದಾರೆ.

ನಡೆದಿದ್ದೇನು?: ಆರ್​ಸಿಬಿ ಮತ್ತು ಎಲ್​ಎಸ್​ಜಿ ನಡುವಣ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಕೆಲ ಸನ್ಹೆ ಮಾಡುತ್ತಿರುವುದು ಮತ್ತು ಅತಿಯಾಗಿ ಸಂಭ್ರಮಿಸುತ್ತಿರುವುದು ಲಖನೌ ತಂಡದ ಮೆಂಟರ್​ ಆಗಿದ್ದ ಗೌತಮ್​ ಗಂಭೀರ್​ರಿಗೆ ಅಸಮಾಧಾನ ತಂದಿತ್ತು. ನವೀನ್​ ಉಲ್​ ಹಕ್​ ನಡೆಗೆ ವಿರಾಟ್​ ಆಟದ ಮಧ್ಯೆಯೇ ಕಿಡಿಕಾರಿದ್ದರು. ಉಭಯ ತಂಡಗಳ ನಡುವೆ ಕಳೆದ ಪಂದ್ಯದಲ್ಲಿ ಗೆಲುವಿನ ಬಳಿಕ ಗಂಭೀರ್​ ಆರ್​ಸಿಬಿ ಅಭಿಮಾನಿಗಳನ್ನು ಬಾಯಿ ಮುಚ್ಚಿಕೊಂಡಿರುವಂತೆ ಸನ್ನೆ ಮಾಡಿ ಸೂಚಿಸಿದ್ದರು.

ಇದನ್ನು ಓದಿ: ಮೈದಾನದಲ್ಲಿ ಮತ್ತೆ ಕಾದಾಡಿದ ಕಿಂಗ್​ ಕೊಹ್ಲಿ- ಗಂಭೀರ್​: ನೋವಿನಲ್ಲೂ ಬ್ಯಾಟ್​ ಮಾಡಿದ ರಾಹುಲ್​

ಇದು ವಿರಾಟ್​ ಅವರನ್ನ ಕೆರಳಿಸಿತ್ತು. ಇಂದಿನ ಪಂದ್ಯದಲ್ಲಿ ವಿರಾಟ್​ ಇದಕ್ಕೆ ತಿರುಗೇಟು ನೀಡುವ ಮಾದರಿಯಲ್ಲಿ ಅದೇ ರೀತಿಯ ಸನ್ನೆ ಮೂಲಕ ಸಂಭ್ರಮಿಸುವಂತೆ ಅಭಿಮಾನಿಗಳನ್ನು ಹುರಿದುಂಬಿಸಿದ್ದರು. ನಿಕೋಲಸ್​ ಪೂರನ್​ ಮಾಡಿದ್ದ ಫ್ಲೈಯಿಂಗ್​ ಕಿಸ್​ ಮಾದರಿ ಬಗ್ಗೆಯೂ ವಿರಾಟ್​ ವ್ಯಂಗ್ಯವಾಡಿದರು. ಇದೆಲ್ಲವೂ ಕಾದಾಟಕ್ಕೆ ಪ್ರಮುಖ ಕಾರಣವಾಯಿತು.

ಪಂದ್ಯ ಮುಗಿದ ಬಳಿಕ ಹಸ್ತಲಾಘವ ಮಾಡುತ್ತಿದ್ದ ವೇಳೆ ಅಸಮಾಧಾನ ಮರುಕಳಿಸಿತು. ಈ ವೇಳೆ, ಮೆಂಟರ್​ ಗೌತಮ್​ ಗಂಭೀರ್​ ಆಕ್ರೋಶದಿಂದಲೇ ಕೊಹ್ಲಿಯತ್ತ ಧಾವಿಸಿ ಬಂದು ಬೈದಾಡಿಕೊಂಡರು. ಉಭಯ ತಂಡದ ಆಟಗಾರರು ಇಬ್ಬರನ್ನೂ ದೂರ ತಳ್ಳಿ ಸಮಾಧಾನ ಮಾಡಿದರು.

ಶೇ 100ರಷ್ಟು ದಂಡ: ಮೈದಾನದಲ್ಲೇ ಕಿತ್ತಾಡಿಕೊಂಡು ಐಪಿಎಲ್​ನ ನೀತಿ ಸಂಹಿತೆ ಉಲ್ಲಂಘಿಸಿದ ಗಂಭೀರ್​ ಮತ್ತು ಕೊಹ್ಲಿ ಪಂದ್ಯದ ಶೇ.100 ರಷ್ಟು ದಂಡ ವಿಧಿಸಲಾಗಿದೆ. ಐಪಿಎಲ್‌ನ ನೀತಿ ಸಂಹಿತೆಯ ಲೆವೆಲ್ 2 ಅಪರಾಧದಡಿ ಆಟಗಾರರಿಗೆ ದಂಡ ಹಾಕಲಾಗಿದೆ. ಇದನ್ನು ಇಬ್ಬರೂ ಆಟಗಾರರು ಒಪ್ಪಿಕೊಂಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ಬೌಲರ್ ನವೀನ್ ಉಲ್ ಹಕ್​ಗೂ ಪಂದ್ಯದ ಶುಲ್ಕದ ಶೇ.50 ರಷ್ಟು ದಂಡ ವಿಧಿಸಲಾಗಿದೆ.

ಓದಿ: ಮೈದಾನದಲ್ಲಿ ಮತ್ತೆ ಕಾದಾಡಿದ ಕಿಂಗ್​ ಕೊಹ್ಲಿ- ಗಂಭೀರ್​: ನೋವಿನಲ್ಲೂ ಬ್ಯಾಟ್​ ಮಾಡಿದ ರಾಹುಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.