ETV Bharat / sports

ನನ್ನ ಬಳಿ ಇನ್ನೂ ಉತ್ತರವಿಲ್ಲ: ಆರ್​ಸಿಬಿ ವಿರುದ್ಧದ ಸೋಲಿನ ಬಗ್ಗೆ ಸಂಜು ಸ್ಯಾಮ್ಸನ್​ ಪ್ರತಿಕ್ರಿಯೆ

author img

By

Published : May 14, 2023, 10:55 PM IST

Sanju Samson
ಸಂಜು ಸ್ಯಾಮ್ಸನ್​

ರಾಜಸ್ಥಾನ ರಾಯಲ್ಸ್​ ಭಾನುವಾರ ನಡೆದ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ 59 ರನ್​ಗೆ ಆಲ್​ಔಟ್​ ಆಯಿತು. ಪಂದ್ಯದ ನಂತರ ಮಾತನಾಡಿದ ಸಂಜು ಬೆಂಗಳೂರು ತಂಡದ ಬೌಲರ್​ಗಳ ಯಶಸ್ಸು ಇದು ಎಂದಿದ್ದಾರೆ.

ಜೈಪುರ (ರಾಜಸ್ಥಾನ): ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ಸೋಲಿನ ನಂತರ ಭಾನುವಾರದಂದು ಮಾತನಾಡಿದ ನಾಯಕ ಸಂಜು ಸ್ಯಾಮ್ಸನ್ "59 ರನ್​ ತಂಡ ಕುಸಿತ ಕಾಣಲು ಕಾರಣ ಏನು ಎಂದು ನನಗೂ ತಿಳಿದಿಲ್ಲ ಎಂದು ಪ್ರಾಮಾಣಿಕ ಉತ್ತರವನ್ನು ನೀಡಿದ್ದಾರೆ.

ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸುವ ಮೂಲಕ ಬೆಂಗಳೂರು ತಂಡವು ಸತತ ಎರಡು ಸೋಲಿನ ನಂತರ, ಟೇಬಲ್‌ನಲ್ಲಿ ನಿರ್ಣಾಯಕ ಎರಡು ಅಂಕಗಳನ್ನು ಪಡೆದು 5ನೇ ಸ್ಥಾನಕ್ಕೆ ಏರಿಕೆ ಕಂಡಿದೆ. ವೇಯ್ನ್ ಪಾರ್ನೆಲ್ (3/10) ನೇತೃತ್ವದ ಆರ್​ಸಿಬಿ ಬೌಲರ್‌ಗಳು ಪವರ್‌ಪ್ಲೇ ಒಳಗೆ ಆರ್​ಆರ್​ನ ಐದು ವಿಕೆಟ್‌ಗಳನ್ನು ಕೆಡವಿದರು. ಇದರಿಂದ 11 ಓವರ್‌ಗಳಲ್ಲಿ 59 ರನ್‌ಗಳಿಗೆ ರಾಜಸ್ಥಾನ ರಾಯಲ್ಸ್​ ಆಲೌಟ್ ಆಯಿತು.

"59 ರನ್​ಗೆ ಬ್ಯಾಟಿಂಗ್​ ಕುಸಿತ ಕಾಣುವಲ್ಲಿ ನಾವು ಎಲ್ಲಿ ಬ್ಯಾಟಿಂಗ್​ ವೈಫಲ್ಯ ಕಂಡಿದ್ದೇವೆ ಎಂಬುದರ ಬಗ್ಗೆ ಯೋಚಿಸುತ್ತಿದ್ದೇನೆ. ಇದಕ್ಕೆ ಸಧ್ಯ ನನ್ನ ಬಳಿ ಇನ್ನೂ ಉತ್ತರವಿಲ್ಲ ಎಂದು ನಾನು ಭಾವಿಸುತ್ತೇನೆ. ನಮಗೆಲ್ಲರಿಗೂ ಐಪಿಎಲ್ ಸ್ವರೂಪ ತಿಳಿದಿದೆ, ಲೀಗ್ ಹಂತದಲ್ಲಿ ಕೆಲವು ತಮಾಷೆಯ ಸಂಗತಿಗಳನ್ನು ನಾವು ನೋಡಿದ್ದೇವೆ. ನಾವು ದೃಢವಾಗಿ ಉಳಿಯಬೇಕು, ಒಂದು ದಿನ ರಜೆ ತೆಗೆದುಕೊಳ್ಳಬೇಕು ಮತ್ತು ಧರ್ಮಶಾಲಾದಲ್ಲಿ ಆಟದ ಬಗ್ಗೆ ಯೋಚಿಸಬೇಕು. ನಾವು ಬಲವಾಗಿ ಮುಂದಿನ ಪಂದ್ಯದಲ್ಲಿ ಎದ್ದು ಬರಬೇಕಿದೆ. ಈ ಪ್ರದರ್ಶನಕ್ಕಾಗಿ ನಾವು ಒಟ್ಟಾರೆಯಾಗಿ ತಂಡವಾಗಿ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು" ಎಂದು ಸ್ಯಾಮ್ಸನ್ ಪೋಸ್ಟ್ ಮ್ಯಾಚ್​ ಕಾರ್ಯಕ್ರಮದಲ್ಲಿ ಹೇಳಿದರು.

ಮುಂದುವರೆದು ಮಾತನಾಡಿದ ಅವರು,"ಇದರ ಯಶಸ್ಸು ಆರ್​ಸಿಬಿ ಬೌಲರ್​ಗಳಿಗೆ ಸಲ್ಲುತ್ತದೆ. ಪವರ್​ ಪ್ಲೇಯ ವೇಳೆಗೆ ಹಿಡಿತ ಸಾಧಿಸಿದರು. ಈ ಪಂದ್ಯವನ್ನು ಇಷ್ಟು ಬೇಗ ವಿಮರ್ಶೆ ಮಾಡಲು ಸಾಧ್ಯವಿಲ್ಲ. ನಮ್ಮ ಆರಂಭಿಕ ಬ್ಯಾಟರ್​ಗಳು ಕಳೆದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅದರೆ ಇಂದು ಸಾಧ್ಯವಾಗಿಲ್ಲ. ನಾವು ಬಾಲ್​ ಹಳೆಯದಾಗುವವರೆಗೆ ಕಾದು ದೊಡ್ಡ ಹೊಡೆತಗಳಿಗೆ ಮುಂದಾಗಬೇಕಿತ್ತು" ಎಂದಿದ್ದಾರೆ.

ರಾಜಸ್ಥಾನ ರಾಯಲ್ಸ್​ ಇಂಡಿಯನ್ ಪ್ರೀಮಿಯರ್​ ಲೀಗ್​ ಇತಿಹಾಸದಲ್ಲಿ ಮೂರನೇ ಅತಿ ಕಡಿಮೆ ಮೊತ್ತವನ್ನು ದಾಖಲಿಸಿತು. ಈ ಸೋಲಿನಿಂದ ಆರ್‌ಆರ್ ಪಾಯಿಂಟ್ಸ್ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ.

ಪಂದ್ಯದಲ್ಲಿ ಆರ್​ಸಿಬಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ಗೆ ಇಳಿಯಿತು. ರನ್ ಮಷಿನ್ ಫಾಫ್ ಡು ಪ್ಲೆಸಿಸ್ 44 ರಲ್ಲಿ 55 ರನ್ ಗಳಿಸಿದರು. ಐಪಿಎಲ್ 2023 ರಲ್ಲಿ ಅವರ ಏಳನೇ ಅರ್ಧಶತಕ ದಾಖಲಿಸಿ, 16ನೇ ಆವೃತ್ತಿಯ ಅತಿ ಹೆಚ್ಚ ರನ್​ ಗಳಿಕೆದಾರರಾಗಿ ಕಿತ್ತಳೆ (ಆರೆಂಜ್​) ಕ್ಯಾಪ್​ ತಮ್ಮಲ್ಲೇ ಉಳಿಸಿಕೊಂಡರು. ಇನ್ನು ಗ್ಲೆನ್ ಮ್ಯಾಕ್ಸ್‌ವೆಲ್ (33 ಎಸೆತಗಳಲ್ಲಿ 54) ಮತ್ತು ಅನುಜ್ ರಾವತ್ (11 ಎಸೆತಗಳಲ್ಲಿ 29*) ಅವರು ಬಾಕಿ ವಿಫಲ ಬ್ಯಾಟರ್​ಗಳ ಎದುರು ಗಟ್ಟಿಯಾಗಿ ರನ್​ ಕಲೆಹಾಕಿದರು. ಇವರ ರನ್​ ಸಹಾಯದಿಂದ ಆರ್​ಸಿಬಿ 20 ಓವರ್​ಗೆ 171 ರನ್​ಗೆ 5 ವಿಕೆಟ್​ ಕಳೆದುಕೊಂಡಿತ್ತು.

172 ರನ್‌ಗಳನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ಆರಂಭಿಕ ಆಘಾತಕ್ಕೆ ಒಳಗಾಯಿತು. ಯಶಸ್ವಿ ಜೈಸ್ವಾಲ್ (0 ಎಸೆತ 2) ಸೇರಿ ನಾಲ್ವರು ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು. ಇನ್ನೂ ನಾಲ್ಕು ಜನ ಒಂದಂಕಿಗೆ ಔಟ್​ ಆದರು. ರೂಟ್​ 10, ಶಿಮ್ರೋನ್ ಹೆಟ್ಮೆಯರ್ 35 ರನ್​ ಗಳಿಸಿದ್ದು ತಂಡ 59 ರನ್ ಗಳಿಸಿಲು ಸಾಧ್ಯವಾಯಿತು.

ಇದನ್ನೂ ಓದಿ: CSK vs KKR: ಅಗ್ರ ಸ್ಥಾನಕ್ಕೇರಲು ಸಿಎಸ್​ಕೆ ಕಣ್ಣು.. ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಧೋನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.