ETV Bharat / sports

KXIP ತಂಡದಲ್ಲಿ 4 ಕನ್ನಡಿಗರು, 4 ವಿದೇಶಿಗರು.. ಉಳಿದ ಮೂವರು ಪಂಜಾಬ್​ನವರಲ್ಲ!!

author img

By

Published : Sep 20, 2020, 9:10 PM IST

Updated : Sep 25, 2020, 5:59 PM IST

ಕಿಂಗ್ಸ್​ ಇಲೆವೆನ್ ಪಂಜಾಬ್​
ಕಿಂಗ್ಸ್​ ಇಲೆವೆನ್ ಪಂಜಾಬ್​

ಕೆಎಲ್​ ರಾಹುಲ್​ ನಾಯಕನಾಗಿ ಪದಾರ್ಪಣೆ ಮಾಡಿರುವ ಪಂದ್ಯದಲ್ಲಿ ಕರ್ನಾಟಕ ಸ್ಟಾರ್ ಬ್ಯಾಟ್ಸ್​ಮನ್​ಗಳಾದ ಮಯಾಂಕ್ ಅಗರ್​ವಾಲ್​, ಕರುಣ್​ ನಾಯರ್​ ಹಾಗೂ ಕೃಷ್ಣಪ್ಪ ಗೌತಮ್​ ಇಂದಿನ ಪಂದ್ಯದಲ್ಲಿ ಪಂಜಾಬ್ ಭಾಗವಾಗಿದ್ದಾರೆ..

ದುಬೈ: ಡೆಲ್ಲಿ ಕ್ಯಾಪಿಟಲ್​ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿರುವ ಕಿಂಗ್ಸ್​ ಇಲೆವೆನ್ ಪಂಜಾಬ್​ ತಂಡದಲ್ಲಿ ಕರ್ನಾಟಕದ ನಾಲ್ವರು ಆಟಗಾರರು ಅವಕಾಶ ಪಡೆದಿದ್ದಾರೆ. ಆಶ್ಚರ್ಯಕರ ಸಂಗತಿ ಅಂದರೆ ಪಂಜಾಬ್​ನ ಯಾವುದೇ ಆಟಗಾರರು ಈ ತಂಡದಲ್ಲಿ ಅವಕಾಶ ಪಡೆದಿಲ್ಲ.

ಕಿಂಗ್ಸ್​ ಇಲೆವೆನ್ ಪಂಜಾಬ್​
ಕೆಎಲ್​ ರಾಹುಲ್​ -ಮಯಾಂಕ್ ಅಗರ್​ವಾಲ್​

ಕೆ ಎಲ್​ ರಾಹುಲ್​ ನಾಯಕನಾಗಿ ಪದಾರ್ಪಣೆ ಮಾಡಿರುವ ಪಂದ್ಯದಲ್ಲಿ ಕರ್ನಾಟಕ ಸ್ಟಾರ್ ಬ್ಯಾಟ್ಸ್​ಮನ್​ಗಳಾದ ಮಯಾಂಕ್ ಅಗರ್​ವಾಲ್​, ಕರುಣ್​ ನಾಯರ್​ ಹಾಗೂ ಕೃಷ್ಣಪ್ಪ ಗೌತಮ್​ ಇಂದಿನ ಪಂದ್ಯದಲ್ಲಿ ಪಂಜಾಬ್ ಭಾಗವಾಗಿದ್ದಾರೆ.

ಕಿಂಗ್ಸ್​ ಇಲೆವೆನ್ ಪಂಜಾಬ್​
ಕೃಷ್ಣಪ್ಪ ಗೌತಮ್​

ವಿಶೇಷವೆಂದರೆ ತಂಡದಲ್ಲಿ ಮೂವರು ಪಂಜಾಬ್​ ತಂಡದ ಆಟಗಾರರಿದ್ದರೂ ಈ ಪಂದ್ಯದಲ್ಲಿ ಅವಕಾಶ ಪಡೆದಿಲ್ಲ. ನಾಲ್ವರು ಆಟಗಾರರು ವಿದೇಶಿಗರಾಗಿದ್ರೆ, ಉಳಿದ ಮೂವರಾದ ಮೊಹ್ಮದ್ ಶಮಿ (ಪಶ್ಚಿಮ ಬಂಗಾಳ), ರವಿ ಬಿಷ್ಣೋಯ್​(ರಾಜಸ್ಥಾನ್​) ಹಾಗೂ ಸರ್ಫರಾಜ್​ ಖಾನ್​(ಮುಂಬೈ) ಮೂಲದವರಾಗಿದ್ದಾರೆ.

ಕಿಂಗ್ಸ್​ ಇಲೆವೆನ್ ಪಂಜಾಬ್​
ಕರುಣ್ ನಾಯರ್​

ತಂಡದ ಅನುಭವಿ ಬ್ಯಾಟ್ಸ್​ಮನ್​ ಮಂದೀಪ್​ ಸಿಂಗ್​ರನ್ನು ಕಡೆಗಣಿಸಿ ಸರ್ಫರಾಜ್​ ಖಾನ್​ ಹಾಗೂ ಕರುಣ್​ ನಾಯರ್​ಗೆ ಅವಕಾಶ ನೀಡಿರುವುದಕ್ಕೆ ಕೆಲ ಪಂಜಾಬ್​ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

Last Updated :Sep 25, 2020, 5:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.