ಉದಯ್ಪುರ್(ರಾಜಸ್ಥಾನ): ಕರ್ನಾಟಕ ರಣಜಿ ತಂಡದ ನಾಯಕ ಕರುಣ್ ನಾಯರ್ ಇಂದು ತಮ್ಮ ಬಹುಕಾಲದ ಗೆಳತಿ ಸನಾಯ ಟಂಕರಿವಾಲ ಅವರನ್ನು ವಿವಾಹವಾಗುವ ಮೂಲಕ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ.
ಕಳೆದ ವರ್ಷ ಜೂನ್ 29 ರಂದ ಸನಾಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಕರುಣ್ ಇಂದು ರಾಜಸ್ಥಾನದ ಉದಯಪುರದಲ್ಲಿ ವಿವಾಹವಾಗಿದ್ದಾರೆ. ಜನವರಿ 18 ರಂದು ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.
ಕರ್ನಾಟಕ ತಂಡದ ನಾಯಕನಾಗಿರುವ ಕರುಣ್ ಭಾರತದ ಪರ ಆರು ಟೆಸ್ಟ್ ಎರಡು ಏಕದಿನ ಪಂದ್ಯಗಳನ್ನಾಡಿದ್ದಾರೆ. ಇಂಗ್ಲೆಂಡ್ ವಿರುದ್ಧ ತ್ರಿಶತಕ ಬಾರಿಸುವ ಮೂಲಕ ಸೆಹ್ವಾಗ್ ನಂತರ ಈ ಸಾಧನೆ ಮಾಡಿದ ಭಾರತದ ಎರಡನೇ ಬ್ಯಾಟ್ಸ್ ಮನ್ ಎಂಬ ಹಿರಿಮೆ ಹೊಂದಿದ್ದಾರೆ. ಐಪಿಎಲ್ನಲ್ಲಿ ಕರುಣ್ ನಾಯರ್ರನ್ನು 2018 ರ ಹರಾಜಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ 5 ಕೋಟಿ ರೂಗೆ ಖರೀದಿಸಿತ್ತು. ಹೆಚ್ಚು ಪಂದ್ಯಗಳನ್ನಾಡದಿದ್ದರೂ ಈ ವರ್ಷವೂ ಅವರನ್ನು ಪಂಜಾಬ್ ತಂಡ ರೀಟೈನ್ ಮಾಡಿಕೊಂಡಿದೆ.