ETV Bharat / entertainment

'ಗೇಮ್​ ಸ್ಟಾರ್ಟ್': ಬಿಗ್​ ಬಾಸ್​ ಮನೆಯಲ್ಲಿ ಉಳಿಯಲು ವರ್ತೂರು ಸಂತೋಷ್​​ ನಿರ್ಧಾರ

author img

By ETV Bharat Karnataka Team

Published : Nov 14, 2023, 10:03 AM IST

Updated : Nov 14, 2023, 10:30 AM IST

Bigg Boss Kannada: ಬಿಗ್​ ಬಾಸ್​ ಪ್ರೋಮೋ ಅನಾವರಣಗೊಂಡಿದೆ. ಮನೆಯಲ್ಲಿ ಆಟ ಮುಂದುವರಿಸಲು ವರ್ತೂರು ಸಂತೋಷ್​​ ನಿರ್ಧಾರ ಮಾಡಿದ್ದಾರೆ.

Varthur Santhosh
ವರ್ತೂರು ಸಂತೋಷ್

ಹೆಚ್ಚಿನ ಸಂಖ್ಯೆಯ ಕನ್ನಡಿಗರನ್ನು ಆಕರ್ಷಿಸಿರುವ ಕನ್ನಡದ ಜಪ್ರಿಯ ರಿಯಾಲಿಟಿ ಶೋ 'ಬಿಗ್​ ಬಾಸ್'. ಅಭಿನಯ ಚಕ್ರವರ್ತಿ ಸುದೀಪ್​ ನಿರೂಪಣೆಯ ಕಾರ್ಯಕ್ರಮ ಪ್ರೇಕ್ಷಕರಿಗೆ ಫುಲ್​ ಎಂಟರ್​ಟೈನ್ಮೆಂಟ್​ ಮೀಲ್ಸ್ ನೀಡ್ತಿದೆ. ಆದ್ರೆ ಕಳೆದ ವಾರದ ವೀಕೆಂಡ್​ ವಿತ್​ ಸುದೀಪ್ ​​ಸಂಚಿಕೆ ವರ್ತೂರು ಸಂತೋಷ್ ವಿಚಾರವಾಗಿ ಸಖತ್​ ಸದ್ದು ಮಾಡಿತ್ತು.

ಸೇಫ್​ ಆದ್ರೂ ಮನೆಯಿಂದ ಹೊರ ನಡೆಯುತ್ತೇನೆಂದು ಹೇಳಿ ಬಿಗ್​ ಬಾಸ್​ ಸಹ ಸ್ಪರ್ಧಿ, ನಿರೂಪಕ ಸುದೀಪ್​, ತಂಡ ಸೇರಿದಂತೆ ಅಭಿಮಾನಿಗಳಿಗೆ ಶಾಕ್​​ ನೀಡಿದ್ರು. ಅಂತಿಮವಾಗಿ ವರ್ತೂರು ಸಂತೋಷ್ ಬಿಗ್​ ಬಾಸ್​ ಮನೆಯಲ್ಲಿ ಉಳಿಯಲು ನಿರ್ಧರಿಸಿದ್ದು, ಅಭಿಮಾನಿಗಳ ಮೊಗದಲ್ಲಿ ಮಂದಹಾಸ ಮೂಡಿದೆ.

ಬಿಗ್​ ಬಾಸ್​ ಪ್ರೋಮೋ: ಹೌದು, ''ಕಷ್ಟಗಳು, ಗೊಂದಲಗಳು ಎಲ್ಲದಕ್ಕೂ ಅಮ್ಮ ಬಂದ್ರೇನೇ ಉತ್ತರ ಸಿಗೋದು!'' ಎಂಬ ಶೀರ್ಷಿಕೆಯಡಿ ಇಂದಿನ ಸಂಚಿಕೆಯ ಪ್ರೋಮೋವನ್ನು ಸಾಮಾಜಿಕ ಜಾಲತಾಣದಲ್ಲಿ ಕಲರ್ಸ್ ಕನ್ನಡ ಅನಾವರಣಗೊಳಿಸಿದೆ. ನಿನ್ನೆಯ ಸಂಚಿಕೆಯಲ್ಲಿ ವರ್ತೂರು ಸಂತೋಷ್ ಅವರ ತಾಯಿ ಬಿಗ್​ ಬಾಸ್​ ಮನೆಗೆ ಬಂದಿದ್ದರು. ಫೈನಲಿ, ತಮ್ಮ ಮಗನನ್ನು ಬಿಗ್​ ಬಾಸ್​ ಮನೆಯಲ್ಲಿ ಉಳಿಸುವಲ್ಲಿ ತಾಯಿ ಯಶಸ್ಸು ಕಂಡಿದ್ದಾರೆ. ಅಮ್ಮನ ಮಾತನ್ನು ಒಪ್ಪಿ ವರ್ತೂರು ಸಂತೋಷ್ ಉಳಿದುಕೊಳ್ಳಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: BBK: ಮನೆ ಮಂದಿಗೆ ಅಮ್ಮಂದಿರ ಕೈ ಅಡುಗೆ... ವರ್ತೂರು ಸಂತೋಷ್​ಗೆ ಅಮ್ಮನೇ ಬಂದ್ರು!

ಶನಿವಾರ ಮತ್ತು ಭಾನುವಾರದಂದು ವೀಕೆಂಡ್​ ವಿತ್ ಸುದೀಪ್​ ಅಥವಾ ರದ ಕಥೆ ಕಿಚ್ಚನ ಜೊತೆ ಸಂಚಿಕೆಗಳು ಪ್ರಸಾರವಾಗುತ್ತದೆ. ಭಾನುವಾರ ಓರ್ವ ಸ್ಪರ್ಧಿ ಎಲಿಮಿನೇಟ್​ ಆಗುತ್ತಾರೆ. 34 ಲಕ್ಷ ಮತ ಪಡೆದು ವರ್ತೂರು ಸಂತೋಷ್ ಸೇಫ್​ ಆಗಿದ್ದರು. ಆದ್ರೆ ನಾನು ಮನೆಯಿಂದ ಹೊರ ಹೋಗಲು ಇಚ್ಛಿಸುತ್ತೇನೆಂದು ಹೇಳಿ ಎಲ್ರಿಗೂ ಶಾಕ್​ ನೀಡಿದ್ದರು. ನಾನು ಮನೆಯಿಂದ ಹೊರ ಹೋಗುತ್ತೇನೆಂದು ಹೇಳಿ ವರ್ತೂರು ಸಂತೋಷ್ ಭಾವುಕರಾಗಿದ್ದರು. ಕಣ್ಣೀರಿಟ್ಟು, ತಮ್ಮ ಈ ನಿರ್ಧಾರಕ್ಕೆ ಕಾರಣಗಳನ್ನೂ ಕೊಟ್ಟಿದ್ದರು. ಮನೆ ಮಂದಿ ಸೇರಿ ನಿರೂಪಕ ಸುದೀಪ್​ ಕೂಡ ಅಸಮಾಧಾನಗೊಂಡಿದ್ರು. ವರ್ತೂರು ಸಂತೋಷ್​​ ಅವರಿಗೆ 34 ಲಕ್ಷದ 15 ಸಾವಿರದ 475 ಮತ ಪಡೆದಿರುವುದಾಗಿ ತಿಳಿಸಿದ ಸುದೀಪ್​, ಜನರ ವಿರುದ್ಧ ನಾನು ಹೋಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಮನೆ ಮಂದಿ ವರ್ತೂರು ಸಂತೋಷ್ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದರು.

ಇದನ್ನೂ ಓದಿ: 34 ಲಕ್ಷ ಮತ ಪಡೆದು ಸೇಫ್​ ಆದ್ರೂ ಹೊರಹೋಗುತ್ತೇನೆಂದ ವರ್ತೂರು ಸಂತೋಷ್: ಕುತೂಹಲ ಮೂಡಿಸಿದ ಕಿಚ್ಚನ ವಾರದ ಕಥೆ!

ನಿನ್ನೆ ಬಿಗ್​ ಬಾಸ್,​ ಸ್ಪರ್ಧಿಗಳಿಗೆ ದೀಪಾವಳಿ ಸರ್​ಪ್ರೈಸ್ ಕೊಟ್ಟಿತ್ತು. ಮನೆಯಿಂದ ತಿನಿಸುಗಳನ್ನು ತರಿಸಿ ಕೊಡಲಾಗಿತ್ತು. ಆದ್ರೆ ವರ್ತೂರು ಸಂತೋಷ್​ ಅವರಿಗೆ ಮನೆಯಿಂದ ತಿಸಿಸುಗಳು ಬರಲಿಲ್ಲ. ಬದಲಾಗಿ ಅವರ ಅಮ್ಮನೇ ಬುತ್ತಿ ಹಿಡಿದು ಬಂದರು. ಮಗನನ್ನು ಸಂತೈಸಿದ ಅಮ್ಮ, ಫೈನಲಿ, ತಮ್ಮ ಮಗನನ್ನು ಬಿಗ್​ ಬಾಸ್​ ಮನೆಯಲ್ಲಿ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಟ ಮುಂದುವರಿಸಲು ನಿರ್ಧರಿಸಿದ್ದಾರೆ.

Last Updated :Nov 14, 2023, 10:30 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.