ETV Bharat / entertainment

ರಾಘವನ ಪಾತ್ರ ಮಾಡಲು ನನಗೆ ಭಯವಾಗಿತ್ತು.. ಪ್ಯಾನ್​ ಇಂಡಿಯಾ ನಟ ಪ್ರಭಾಸ್

author img

By

Published : Oct 3, 2022, 8:30 PM IST

Pan India actor Prabhas
ಪ್ಯಾನ್​ ಇಂಡಿಯಾ ನಟ ಪ್ರಭಾಸ್

ರಾಘವನ ಪಾತ್ರ ಮಾಡುತ್ತೇನೆ ಎಂದು ಒಪ್ಪಿಗೆ ಸೂಚಿಸಲು ಮೂರು ದಿನ ನಿರ್ದೇಶಕರನ್ನು ಕಾಯಿಸಿದ್ದೇನೆ. ರಾಘವನ ಪಾತ್ರವನ್ನು ನಾನು ಅತ್ಯಂತ ಭಕ್ತಿ ಗೌರವ ಹಾಗೂ ಪ್ರೀತಿಯಿಂದ ಮಾಡಿದ್ದೇನೆ ಎಂದ ಪ್ರಭಾಸ್​.

ನಿನ್ನೆಯಷ್ಟೇ ಪ್ರಭಾಸ್​ ಅಭಿನಯದ 'ಆದಿಪುರುಷ' ಸಿನಿಮಾದ ಟೀಸರ್​ ಬಿಡುಗಡೆಯಾಗಿದೆ. ಸರಯೂ ನದಿ ತೀರದಲ್ಲಿ ನಡೆದ ಟೀಸರ್​ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಪ್ರಭಾಸ್​ ಅವರು, ನಿರ್ದೇಶಕ ಓಂ ರಾವುತ್​ ಅವರು ರಾಘವ ಪಾತ್ರದಲ್ಲಿ ನಟಿಸಲು ಅವಕಾಶ ನೀಡಿದಾಗ ನಿಜವಾಗಿಯೂ ನನಗೆ ಭಯವಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ಪ್ಯಾನ್​ ಇಂಡಿಯಾ ನಟ ಪ್ರಭಾಸ್

ಆ ಪಾತ್ರವನ್ನು ಮಾಡುವಾಗ ನಾನೇನಾದರೂ ತಪ್ಪು ಮಾಡುತ್ತೇನಾ ಎಂಬ ಭಯವಿತ್ತು. ಪಾತ್ರ ಮಾಡುತ್ತೇನೆ ಎಂದು ಒಪ್ಪಿಗೆ ಸೂಚಿಸಲು ಮೂರು ದಿನ ನಿರ್ದೇಶಕರನ್ನು ಕಾಯಿಸಿದ್ದೇನೆ. ರಾಘವನ ಪಾತ್ರವನ್ನು ನಾನು ಅತ್ಯಂತ ಭಕ್ತಿ ಗೌರವ ಹಾಗೂ ಪ್ರೀತಿಯಿಂದ ಮಾಡಿದ್ದೇನೆ. ಅದಕ್ಕೆ ಆ ರಾಮನ ಆಶೀರ್ವಾದವಿದೆ ಏಕೆಂದರೆ ಇದು ದೇಶಕ್ಕೆ ಅತ್ಯಂತ ಅಮೂಕ್ಯವಾದ ಚಿತ್ರವಾಗಿದೆ. ಆ ಪಾತ್ರಕ್ಕೆ ನ್ಯಾಯ ಸಲ್ಲಿಸಲು ನನ್ನಿಂದಾದಷ್ಟು ಪ್ರಯತ್ನಿಸಿದ್ದೇನೆ ಎಂದು ಹೇಳಿದ್ದಾರೆ.

ಕೋವಿಡ್​-19 ಮೊದಲ ಅಲೆಯ ಲಾಕ್​ಡೌನ್​ ಮಧ್ಯದ ಸಮಯದಲ್ಲಿ ನಿರ್ದೇಶಕ ಓಂ ರಾವುತ್​ ಚಿತ್ರದ ಕುರಿತು ಮಾತನಾಡಲು ಪ್ರಭಾಸ್​ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಮುಂಬೈನಿಂದ ಹೈದರಾಬಾದ್​ಗೆ ತೆರಳಿದ್ದರು.

7000 ವರ್ಷಗಳ ಹಿಂದಿನ ವಾಲ್ಮೀಕಿ ರಾಮಾಯಣದ ಕಥೆಯನ್ನು ಆಧಾರವಾಗಿಟ್ಟುಕೊಂಡು ಆದಿಪುರುಷ್​ ಸಿನಿಮಾವನ್ನು ರಾವುತ್​ ನಿರ್ದೇಶಸಿದ್ದಾರೆ. ಆದರೆ ಚಿತ್ರದಲ್ಲಿ ಪ್ರಭಾಸ್​ ಅವರು ರಾಮನ ಹೆಸರಲ್ಲಿ ಕರೆಸಿಕೊಳ್ಳದೇ ರಾಘವ ಎನ್ನುವ ಹೆಸರನ್ನು ಇಡಲಾಗಿದೆ. ನಾಯಕಿ ಕೃತಿ ಸನೋನ್​ ಅವರು ಜಾನಕಿ ಎನ್ನುವ ಹೆಸರಿನಲ್ಲಿ ರಾವಣನ ಪಾತ್ರ ಮಾಡಿರುವ ಸೈಫ್​ ಆಲಿ ಖಾನ್​ ಅವರು ಲಂಕೇಶ್​ ಎನ್ನುವ ಹೆಸರಿನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಆದಿಪುರುಷ ಟೀಸರ್ ಬಿಡುಗಡೆ: ಗಮನ ಸೆಳೆಯುತ್ತಿದೆ ಪ್ರಭಾಸ್-ಕೃತಿ ನಡುವಿನ ಕೆಮಿಸ್ಟ್ರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.