ETV Bharat / city

ಮತಾಂತರಕ್ಕೆ ಪುಸ್ತಕ ಹಂಚಿದ ಆರೋಪ: ಕೇರಳದ ವ್ಯಕ್ತಿ ಪೊಲೀಸ್ ವಶಕ್ಕೆ!

author img

By

Published : Oct 15, 2021, 7:21 PM IST

mangalore police arrested a man in Conversion case
ಮತಾಂತರ ಯತ್ನಕ್ಕೆ ಪುಸ್ತಕ ಹಂಚಿದ ಆರೋಪದಡಿ ವ್ಯಕ್ತಿ ಅರೆಸ್ಟ್

ಪಾಂಡೇಶ್ವರದ ಕೇರಳ ಸಮಾಜ ಶಾಲೆಯ ಬಳಿ ಮತಾಂತರಕ್ಕೆ ಯತ್ನಿಸುತ್ತಿದ್ದಾರೆಂಬ ಆರೋಪದಡಿ ಕೇರಳದ ಕೊಟ್ಟಾಯಂ ನಿವಾಸಿ ರಾಜೇಯನ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಂಗಳೂರು: ನಗರದಲ್ಲಿ ಮನೆ ಮನೆಗೆ ತೆರಳಿ ಹಿಂದೂ ದೇವತೆಗಳ ಬಗ್ಗೆ ಅವಹೇಳಕಾರಿಯಾಗಿ ಬರೆಯಲ್ಪಟ್ಟ ಸಾಹಿತ್ಯ ಇರುವ ಪುಸ್ತಕಗಳನ್ನು ಹಂಚುತ್ತಿದ್ದಾರೆ ಎಂಬ ಆರೋಪದ ಮೇಲೆ ಕೇರಳದ ವ್ಯಕ್ತಿಯೋರ್ವನನ್ನು ಪಾಂಡೇಶ್ವರ ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ.

ನಗರದ ಪಾಂಡೇಶ್ವರದ ಕೇರಳ ಸಮಾಜ ಶಾಲೆಯ ಬಳಿ ಮತಾಂತರಕ್ಕೆ ಯತ್ನಿಸುತ್ತಿದ್ದಾನೆಂಬ ಆರೋಪದಡಿ ಕೇರಳದ ಕೊಟ್ಟಾಯಂ ನಿವಾಸಿ ರಾಜೇಯನ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ‌ ರಾಜೇಯನ್ ಮನೆ ಮನೆಗೆ ತೆರಳಿ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿಯಾದ ಸಾಹಿತ್ಯವಿದ್ದ ಪುಸ್ತಕಗಳನ್ನು ಹಂಚುತ್ತಿದ್ದ ಎನ್ನಲಾಗಿದೆ‌.

ಮತಾಂತರ ಯತ್ನಕ್ಕೆ ಪುಸ್ತಕ ಹಂಚಿದ ಆರೋಪದಡಿ ವ್ಯಕ್ತಿ ಅರೆಸ್ಟ್

ಈ ಬಗ್ಗೆ ಮಾಹಿತಿ ಪಡೆದ ಬಜರಂಗ ದಳದ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆರೋಪಿಯಲ್ಲಿದ್ದ ಪುಸ್ತಕಗಳನ್ನು ಪರಿಶೀಲನೆ ನಡೆಸಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ದುರ್ಗಾಮೂರ್ತಿ ನಿಮಜ್ಜನ ಮೆರವಣಿಗೆ: ದಾಂಡಿಯಾ ನೃತ್ಯಕ್ಕೆ ಸಖತ್​ ಸ್ಟೆಪ್​ ಹಾಕಿದ ಅಂಜಲಿ ನಿಂಬಾಳ್ಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.