ETV Bharat / city

ಪೂರ್ವ ವಲಯದ ವಾರ್ ರೂಮ್​ ಪರಿಶೀಲಿಸಿದ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ

author img

By

Published : Apr 19, 2021, 9:04 AM IST

BBMP Commissioner Gaurav Gupta
ಪೂರ್ವ ವಲಯದ ವಾರ್ ರೂಂ ಪರಿಶೀಲಿಸಿದ ಪಾಲಿಕೆ ಆಯುಕ್ತ ಗೌರವ್ ಗುಪ್ತಾ

ಪೂರ್ವ ವಲಯದ ಕೋವಿಡ್ ವಾರ್ ರೂಮ್​ಗೆ ಭೇಟಿ ನೀಡಿದ್ದ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ಆಯಾ ದಿನದ ಟೆಸ್ಟಿಂಗ್ ಅನ್ನು ಕೂಡಲೇ ಐಸಿಎಂಆರ್ ಪೋರ್ಟ್​ಲ್​ನಲ್ಲಿ ನೋಂದಾಯಿಸಿ, ಬಹುಬೇಗ ಫಲಿತಾಂಶ ಬರಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ವಿಳಂಬ ಕಂಡುಬಂದಲ್ಲಿ ಶೋಕಾಸ್ ನೋಟಿಸ್ ನೀಡುವುದಾಗಿ ಎಚ್ಚರಿಕೆ ನೀಡಿದರು.

ಬೆಂಗಳೂರು: ಪಾಲಿಕೆ‌ ಮುಖ್ಯ ಆಯುಕ್ತ ಗೌರವ್ ಗುಪ್ತಾ ಭಾನುವಾರ ಸಂಜೆ ಪೂರ್ವ ವಲಯದ ಕೋವಿಡ್​ ವಾರ್ ರೂಮ್​ಗೆ ಭೇಟಿ ನೀಡಿ, ಪರಿಶೀಲಿಸಿದರು.

ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈಗಿರುವ ಸಿಬ್ಬಂದಿ ಜೊತೆಗೆ ಹೆಚ್ಚುವರಿಯಾಗಿ ಸಿಬ್ಬಂದಿಯನ್ನು ನಿಯೋಜಿಸಿಕೊಂಡು ಕಾರ್ಯ ನಿರ್ವಹಿಸಬೇಕು. ಅಲ್ಲದೇ, ಪೂರ್ವ ವಲಯದಲ್ಲಿನ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಕಡ್ಡಾಯವಾಗಿ ಎಎಲ್​ಎಸ್​ ಸೌಲಭ್ಯಗಳನ್ನೊಳಗೊಂಡ ಆ್ಯಂಬುಲೆನ್ಸ್​ಗಳನ್ನು ಹೆಚ್ಚುವರಿಯಾಗಿ ಪಡೆಯಬೇಕು. ಆಯಾ ದಿನದ ಟೆಸ್ಟಿಂಗ್ ಅನ್ನು ಕೂಡಲೇ ಐಸಿಎಂಆರ್ ಪೋರ್ಟ್​ಲ್​ನಲ್ಲಿ ನೋಂದಾಯಿಸಿ, ಬಹುಬೇಗ ಫಲಿತಾಂಶ ಬರಲು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ವಿಳಂಬ ಕಂಡುಬಂದಲ್ಲಿ ಶೋಕಾಸ್ ನೋಟಿಸ್ ನೀಡುವುದಾಗಿ ಎಚ್ಚರಿಸಿದರು.

ಟೆಸ್ಟಿಂಗ್ ಮತ್ತು ವ್ಯಾಕ್ಸಿನೇಷನ್​ಗೆ ಸರದಿಯಲ್ಲಿ ನಿಲ್ಲುವಂತೆ ವಿಕೇಂದ್ರೀಕರಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಶವಗಳ ಸಾಗಣೆಗೆ ಅಗತ್ಯ ಕ್ರಮ ಹಾಗೂ ಸೌಲಭ್ಯಗಳನ್ನು ಒದಗಿಸಿಕೊಂಡು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕು. ಕೋವಿಡ್ ಹಿನ್ನೆಲೆಯಲ್ಲಿ ಯಾವುದೇ ನಾಗರಿಕರಿಗೆ ತೊಂದರೆಯಾಗದಂತೆ ಕೆಲಸ ನಿರ್ವಹಿಸಲು ಸಿದ್ಧತೆ ಮಾಡಿಕೊಳ್ಳಿ ಎಂದು ಬಿಬಿಎಂಪಿ ಆಯುಕ್ತರು ಆದೇಶಿಸಿದರು.

ಓದಿ: ಕೊರೊನಾ: ರಾಷ್ಟ್ರೀಯ ವಿಪತ್ತು ಘೋಷಣೆಗೆ ಖಂಡ್ರೆ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.