ETV Bharat / city

ಬೆಳಗಾವಿಯಲ್ಲಿ ಬೈಪಾಸ್ ರಸ್ತೆ ಕಾಮಗಾರಿಗೆ ವಿರೋಧ.. ಜೆಸಿಬಿಗೆ ಕಲ್ಲೆಸೆಯಲು ಯತ್ನಿಸಿದ ರೈತರು ಪೊಲೀಸ್​ ವಶಕ್ಕೆ

author img

By

Published : Nov 16, 2021, 2:07 PM IST

Updated : Nov 16, 2021, 2:35 PM IST

belgaum  farmers were taken into police custody
ಹಲಗಾ-ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿಗೆ ವಿರೋಧ

ಹಲಗಾ-ಮಚ್ಛೆ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿ ಜೆಸಿಬಿಗೆ ಕಲ್ಲು ಎಸೆಯಲು ಮುಂದಾದ ರೈತರನ್ನು ಬೆಳಗಾವಿ(Belagavi farmers protest) ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿ: ನಗರದ ಹೊರವಲಯದಲ್ಲಿ ಹಲಗಾ-ಮಚ್ಛೆ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿ ಜೆಸಿಬಿಗೆ ಕಲ್ಲು ಎಸೆಯಲು ಮುಂದಾದ ರೈತರನ್ನು ಇಲ್ಲಿನ ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದರು.

ಜೆಸಿಬಿಗೆ ಕಲ್ಲೆಸೆಯಲು ಯತ್ನಿಸಿದ ರೈತರು ಪೊಲೀಸ್​ ವಶಕ್ಕೆ

ಬೆಳಗಾವಿ ತಾಲೂಕಿನ ಹಲಗಾ-ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ ವೇಳೆ, ಜಮೀನಿಗೆ ಜೆಸಿಬಿ ಬರುತ್ತಿದ್ದಂತೆ ಜಮೀನು ಮಾಲೀಕ ದೇವೇಂದ್ರಪ್ಪ ಬಳೇಗಾರ ಕಲ್ಲು ಎಸೆಯಲು ಮುಂದಾದರು. ಈ ವೇಳೆ ಜಮೀನು ಮಾಲೀಕ ಸೇರಿದಂತೆ ಪ್ರತಿಭಟನಾ ನಿರತ ರೈತರನ್ನು(Belagavi farmers protest) ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು. ಬಳಿಕ ಪೊಲೀಸ್ ಭದ್ರತೆಯಲ್ಲಿ ಬೈಪಾಸ್ ರಸ್ತೆ ಕಾಮಗಾರಿಯನ್ನು ಮುಂದುವರಿಸಲಾಯಿತು.

ಇದನ್ನೂ ಓದಿ: ಹಲಗಾ - ಮಚ್ಛೆ ಬೈಪಾಸ್ ರಸ್ತೆ ನಿರ್ಮಾಣ: ಕಾಮಗಾರಿ ತಡೆಯಲು ರೈತರಿಂದ ಮತ್ತೆ ಯತ್ನ

ಇದಕ್ಕೂ ಮೊದಲು ಕಾಮಗಾರಿ ‌ಆರಂಭಿಸಿದ ಅಧಿಕಾರಿಗಳ ವಿರುದ್ಧ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು.

Last Updated :Nov 16, 2021, 2:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.