ETV Bharat / bharat

ಟಿಎಂಸಿ ಕಾರ್ಯಕರ್ತನಿಗೆ ಪೆಟ್ರೋಲ್ ಸುರಿದು ಥಳಿಸಿದ ಬಿಜೆಪಿ ಕಾರ್ಯಕರ್ತರು.. ಆರೋಪ

author img

By

Published : Jul 17, 2023, 8:05 PM IST

Updated : Jul 17, 2023, 8:39 PM IST

ನರೇಂದ್ರನಾಥ್ ಮಾಝಿ
ನರೇಂದ್ರನಾಥ್ ಮಾಝಿ

ಟಿಎಂಸಿ ಕಾರ್ಯಕರ್ತರೊಬ್ಬರನ್ನು ಬಿಜೆಪಿ ಕಾರ್ಯಕರ್ತರು ಪೆಟ್ರೋಲ್ ಸುರಿದು ಥಳಿಸಿದ ಘಟನೆ ಖೇಜೂರಿಯ ಪೂರ್ವ ಮಿಡ್ನಾಪುರದಲ್ಲಿ ನಡೆದಿದೆ.

ಖೇಜೂರಿ (ಪಶ್ಚಿಮ ಬಂಗಾಳ) : ಇಲ್ಲಿನ ಪೂರ್ವ ಮಿಡ್ನಾಪುರದಲ್ಲಿ ವೈದ್ಯರೂ ಆಗಿರುವ ಟಿಎಂಸಿ ಕಾರ್ಯಕರ್ತನೊಬ್ಬರನ್ನು ಬಿಜೆಪಿ ಕಾರ್ಯಕರ್ತರು ಪೆಟ್ರೋಲ್ ಸುರಿದು ಥಳಿಸಿದ ಘಟನೆ ಭಾನುವಾರ ನಡೆದಿದೆ. ಗಂಭೀರ ಸುಟ್ಟ ಗಾಯಗಳಾಗಿರುವ ತೃಣಮೂಲ ಕಾರ್ಯಕರ್ತನನ್ನು ಕಂಠಿ ಉಪ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ತೃಣಮೂಲ ವಕ್ತಾರ ಕುನಾಲ್ ಘೋಷ್ ಟ್ವೀಟ್ ಮೂಲಕ ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಆಗ್ರಹಿಸಿದ್ದಾರೆ. ಜಿಲ್ಲಾ ಬಿಜೆಪಿ ಘಟಕ ಈ ಆರೋಪಗಳನ್ನು ಅಲ್ಲಗಳೆದಿದೆ.

ಸಂತ್ರಸ್ತ ತೃಣಮೂಲ ಕಾರ್ಯಕರ್ತನ ಹೆಸರು ನರೇಂದ್ರನಾಥ್ ಮಾಝಿ. ಪೂರ್ವ ಮಿಡ್ನಾಪುರದ ಖೆಜುರಿಯ ಉತ್ತರ ಕಲಾಮ್ದನ್ ಪ್ರದೇಶದಲ್ಲಿ ಭಾನುವಾರ ಈ ಘಟನೆ ನಡೆದಿದೆ. ಪಂಚಾಯತ್ ಚುನಾವಣೆ ಮತ್ತು ಫಲಿತಾಂಶದ ನಂತರವೂ ರಾಜ್ಯದಲ್ಲಿ ಹಿಂಸಾಚಾರ ಮುಂದುವರೆದಿದೆ.

ಇದೀಗ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ಭದ್ರಕೋಟೆಯಾಗಿರುವ ಜಿಲ್ಲೆಯಲ್ಲಿ ಬಿಜೆಪಿ ತೃಣಮೂಲ ಕಾರ್ಯಕರ್ತರ ಮೇಲೆ ಪೆಟ್ರೋಲ್ ಸುರಿದ ಆರೋಪ ಕೇಳಿಬಂದಿದೆ. ಸ್ಥಳೀಯ ಮೂಲಗಳ ಪ್ರಕಾರ, ಬಿಜೆಪಿ ಬೆಂಬಲಿತ ದುಷ್ಕರ್ಮಿಗಳು ಬಲವಂತವಾಗಿ ಕೃಷಿ ಭೂಮಿಯನ್ನು ಆಕ್ರಮಿಸಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ತೃಣಮೂಲ ಕಾರ್ಯಕರ್ತ ನರೇಂದ್ರನಾಥ್ ಮಾಝಿ ಮಧ್ಯಪ್ರವೇಶಿಸಿದರು. ಆ ನಂತರ, ವೃತ್ತಿಯಲ್ಲಿ ವೈದ್ಯರಾಗಿರುವ ತೃಣಮೂಲ ಕಾರ್ಯಕರ್ತನನ್ನ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ತೀವ್ರವಾಗಿ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಜತೆಗೆ ಅವರ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ದುಷ್ಕರ್ಮಿಗಳು ಯತ್ನಿಸಿದ್ದಾರೆ. ಖೇಜೂರಿ ಪೊಲೀಸ್ ಠಾಣಾಧಿಕಾರಿ ಅಮಿತ್ ಡೇ ಮಾತನಾಡಿ, ಈ ಘಟನೆಯಲ್ಲಿ ಇದುವರೆಗೆ ಪೊಲೀಸರಿಗೆ ಯಾವುದೇ ಲಿಖಿತ ದೂರು ದಾಖಲಾಗಿಲ್ಲ. ದೂರು ನೀಡಿದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ನರೇಂದ್ರನಾಥ್ ಮಾಝಿ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ ನಂತರ ದೇಹದ ಮೇಲ್ಭಾಗ ಸುಟ್ಟಿದೆ. ಸ್ಥಳೀಯರು ಆತನನ್ನು ರಕ್ಷಿಸಿ ಖೇಜೂರಿ ಬ್ಲಾಕ್ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆದರೆ, ಸ್ಥಿತಿ ಹದಗೆಟ್ಟಾಗ ಅವರನ್ನು ಕಂಠಿ ಉಪಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ರಾಜಕೀಯಕ್ಕೂ ಇದಕ್ಕೂ ಸಂಬಂಧವಿಲ್ಲ: ಆದರೆ, ಈ ಘಟನೆ ಕೇವಲ ಕೌಟುಂಬಿಕ ಕಲಹದಿಂದ ನಡೆದಿದ್ದು, ರಾಜಕೀಯಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಜಿಲ್ಲಾ ಬಿಜೆಪಿ ಆರೋಪಿಸಿದೆ. ಈ ಘಟನೆಯ ಸುತ್ತ ಆ ಪ್ರದೇಶದಲ್ಲಿ ಭೀತಿ ಆವರಿಸಿದೆ. ತೃಣಮೂಲ ವಕ್ತಾರ ಕುನಾಲ್ ಘೋಷ್ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

''ಖೇಜೂರಿ ಚಟ್ನಾಬರಿಯ ಟಿಕಾಶಿ ಪ್ರದೇಶದಲ್ಲಿ ನಾವು ಗೆದ್ದು, ಮತಗಟ್ಟೆಯಲ್ಲಿ ಸೋತಿದ್ದೇವೆ. ಬಿಜೆಪಿ ಗೂಂಡಾಗಳು ತೃಣಮೂಲ ಕಾರ್ಯಕರ್ತ ನರೇನ್ ಮಾಝಿ ಅವರನ್ನು ಸುಟ್ಟು ಹಾಕಲು ಯತ್ನಿಸಿದರು. ಚಿಕಿತ್ಸೆ ನಡೆಯುತ್ತಿದೆ. ಬ್ಲಾಕ್ ನಾಯಕತ್ವವು ಗಮನಿಸುತ್ತಿದೆ. ನಾವು ಬುಧವಾರ ಖೇಜುರಿ ಪೊಲೀಸ್ ಠಾಣೆಗೆ ಹೋಗುತ್ತೇವೆ. ಅದಕ್ಕೂ ಮೊದಲು ಪೊಲೀಸರು ಅಪರಾಧಿಗಳನ್ನು ಬಂಧಿಸಿ'' ಕುನಾಲ್ ಬಂಗಾಳಿಯಲ್ಲಿ ಟ್ವೀಟ್ ಮಾಡಿದ್ದಾರೆ.

ತೃಣಮೂಲ ಬಣ ಸಂಘರ್ಷದ ಫಲಿತಾಂಶ: ಬಿಜೆಪಿಯ ಸಂಘಟನಾ ಜಿಲ್ಲೆಯ ಕಂಠಿ ಉಪಾಧ್ಯಕ್ಷ ಅಸೀಮ್ ಮಿಶ್ರಾ ಮಾತನಾಡಿ, ''ಇದು ತೃಣಮೂಲದ ಬಣ ಸಂಘರ್ಷದ ಫಲಿತಾಂಶವಾಗಿದೆ. ಕ್ಷೇತ್ರದ ಮುಖ್ಯಸ್ಥರು ಯಾರಾಗುತ್ತಾರೆ ಎಂಬ ಬಗ್ಗೆ ತೃಣಮೂಲ ಕಾಂಗ್ರೆಸ್​​ನಲ್ಲಿ ಈಗ ತೀವ್ರ ಹೋರಾಟವಿದೆ. ಬಿಜೆಪಿ ಇದರಲ್ಲಿ ಭಾಗಿಯಾಗಿಲ್ಲ'' ಎಂದಿದ್ದಾರೆ.

ಆದಾಗ್ಯೂ, ಪೂರ್ವ ಮಿಡ್ನಾಪುರ ಜಿಲ್ಲಾ ಪರಿಷತ್ ಅಧ್ಯಕ್ಷ ಮತ್ತು ತೃಣಮೂಲ ನಾಯಕ ಉತ್ತಮ್ ಬಾರಿಕ್ ಒಟ್ಟಾರೆ ಪರಿಸ್ಥಿತಿಯನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಆ ಭಾಗದಲ್ಲಿ ತೃಣಮೂಲ ಗೆದ್ದಿದೆ. ಹೀಗಾಗಿ ಬಿಜೆಪಿಯ ಗೂಂಡಾಗಳು ನಮ್ಮ ತೃಣಮೂಲ ಕಾರ್ಯಕರ್ತನ ಮನೆಗೆ ಬೆಂಕಿ ಹಚ್ಚಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದರು. ಪೊಲೀಸ್ ದೂರು ನೀಡುತ್ತಿದ್ದೇವೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದರು.

ಇದನ್ನೂ ಓದಿ: ಆರೋಪಿಯನ್ನ ವಿದ್ಯುತ್​ ಕಂಬಕ್ಕೆ ಕಟ್ಟಿ ಸಾರ್ವಜನಿಕವಾಗಿ ಥಳಿಸಿದ ಪೊಲೀಸರು.. ವಿಡಿಯೋ ವೈರಲ್​

Last Updated :Jul 17, 2023, 8:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.