ETV Bharat / bharat

ನಮ್ಮ ಮುಂದಿನ ಗುರಿ ಮಾಧ್ಯಮ ಸಂಸ್ಥೆಗಳೇ.. ನೀವು ಉಳಿಯಬೇಕಂದ್ರೆ ನಮಗೆ ಬೆಂಬಲ ನೀಡಿ.. ರಾಕೇಶ್ ಟಿಕಾಯತ್​

author img

By

Published : Sep 28, 2021, 3:09 PM IST

The next target will be media houses: Rakesh Tikait
The next target will be media houses: Rakesh Tikait

ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಕಳೆದೊಂದು ವರ್ಷದಿಂದ ನಡೆಸುತ್ತಿರುವ ಹೋರಾಟಕ್ಕೆ ಎಲ್ಲರೂ, ವಿಶೇಷವಾಗಿ ಮಾಧ್ಯಮಗಳು ಕೈ ಜೋಡಿಸಬೇಕು. ನಮಗೆ ಬೆಂಬಲ ನೀಡದಿದ್ದರೆ ನೀವೂ ಮುಂದೆ ಪಶ್ಚಾತಾಪ ಪಡುವ ಪರಿಸ್ಥಿತಿ ಬರುತ್ತದೆ ಎಂದಿದ್ದಾರೆ..

ರಾಯಪುರ (ಛತ್ತೀಸ್‌ಗಢ): 'ಎಲ್ಲರೂ ರೈತ ಹೋರಾಟಕ್ಕೆ ಕೈಜೋಡಿಸಿ. ನೀವು ಉಳಿಯಬೇಕಂದ್ರೆ ನಮ್ಮೊಂದಿಗೆ ಸೇರಿಕೊಳ್ಳಿ. ಇಲ್ಲ ಅಂದ್ರೆ ನೀವು ಸಹ ಅನುಭವಿಸುತ್ತೀರಾ. ನಮ್ಮ ಮುಂದಿನ ಗುರಿ ಮಾಧ್ಯಮ ಸಂಸ್ಥೆಗಳೇ' ಎಂದು ಮಾಧ್ಯಮಗಳಿಗೆ ರೈತ ಮುಖಂಡ ರಾಕೇಶ್​ ಟಿಕಾಯತ್​ ನಗು ನಗುತ್ತಲೇ ಹೋರಾಟಕ್ಕೆ ಕರೆಯ ಜತೆಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.

ಮಾಧ್ಯಮಗಳಿಗೆ ಕರೆ ಹಾಗೂ ಎಚ್ಚರಿಕೆ ನೀಡಿದ ರಾಕೇಶ್ ಟಿಕಾಯತ್

ನಿನ್ನೆ ಭಾರತ್​ ಬಂದ್​ ಬಳಿಕ ಇಂದು 'ಕಿಸಾನ್ ಮಹಾಪಂಚಾಯತ್'ನಲ್ಲಿ ಪಾಲ್ಗೊಳ್ಳಲು ಛತ್ತೀಸ್‌ಗಢದ ರಾಯಪುರಕ್ಕೆ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್​ ಟಿಕಾಯತ್ ಬಂದಿಳಿದಿದ್ದಾರೆ.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಕಳೆದೊಂದು ವರ್ಷದಿಂದ ನಡೆಸುತ್ತಿರುವ ಹೋರಾಟಕ್ಕೆ ಎಲ್ಲರೂ, ವಿಶೇಷವಾಗಿ ಮಾಧ್ಯಮಗಳು ಕೈ ಜೋಡಿಸಬೇಕು. ನಮಗೆ ಬೆಂಬಲ ನೀಡದಿದ್ದರೆ ನೀವೂ ಮುಂದೆ ಪಶ್ಚಾತಾಪ ಪಡುವ ಪರಿಸ್ಥಿತಿ ಬರುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಟಿಕಾಯತ್​ರ ಭಾರತ್​ ಬಂದ್​ ಕರೆ ತಾಲಿಬಾನ್​ ಚಟುವಟಿಕೆಗೆ ಹೋಲಿಸಿದ ಭಾನು ಪ್ರತಾಪ್​

ಇಂದು ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯ ರಾಜೀಮ್‌ ಗ್ರಾಮದಲ್ಲಿ ಇಂದು ಕಿಸಾನ್ ಮಹಾ ಪಂಚಾಯತ್ ನಡೆಯಲಿದೆ. ದೇಶದಲ್ಲಿ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಸಿಗದಿರುವುದೇ ದೊಡ್ಡ ಸಮಸ್ಯೆಯಾಗಿದೆ. ಇದರ ಬಗ್ಗೆ ನಾವು ದನಿ ಎತ್ತುತ್ತೇವೆ ಎಂದು ಟಿಕಾಯತ್​ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.