ETV Bharat / bharat

ಮೋದಿ ಉಪನಾಮ ಕೇಸ್​: ರಾಹುಲ್​ ಗಾಂಧಿಗೆ ಪಾಟ್ನಾ ಕೋರ್ಟ್​ನಿಂದ ರಿಲೀಫ್​

author img

By

Published : Apr 24, 2023, 7:56 PM IST

ಮೋದಿ ಉಪನಾಮ ಕೇಸ್
ಮೋದಿ ಉಪನಾಮ ಕೇಸ್

ಮೋದಿ ಉಪನಾಮ ಕುರಿತು ಸೂರತ್​ ಕೋರ್ಟ್​ನಲ್ಲಿ ಶಿಕ್ಷೆಯಾಗಿದ್ದು, ಇದೇ ರೀತಿಯ ಪ್ರಕರಣವನ್ನು ಬಿಹಾರದ ಪಾಟ್ನಾ ಕೋರ್ಟಲ್ಲಿ ದಾಖಲಿಸಲಾಗಿತ್ತು. ಆದರೆ, ಹೈಕೋರ್ಟ್​ ವಿಚಾರಣೆಗೆ ತಡೆ ನೀಡಿ ಆದೇಶಿಸಿದೆ.

ಪಾಟ್ನಾ(ಬಿಹಾರ): ಮೋದಿ ಉಪನಾಮ ಹೇಳಿಕೆ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಗೆ ಬಿಹಾರದ ಪಾಟ್ನಾ ಹೈಕೋರ್ಟ್​ ಮೇ 15 ರವರೆಗೆ ತಡೆ ನೀಡಿದೆ. ಇದರಿಂದ ಸೂರತ್​ ಕೋರ್ಟ್​ ಶಿಕ್ಷೆಯ ಬಳಿಕ ಆತಂಕದಲ್ಲಿದ್ದ ಮಾಜಿ ಸಂಸದನಿಗೆ ರಿಲೀಫ್​ ಸಿಕ್ಕಂತಾಗಿದೆ.

ಮೋದಿ ಉಪನಾಮ ಹೇಳಿಕೆಯ ವಿರುದ್ಧ ಬಿಜೆಪಿಯ ರಾಜ್ಯಸಭಾ ಸಂಸದ ಹಾಗೂ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರು ರಾಹುಲ್‌ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದರ ವಿಚಾರಣೆ ನಡೆಸಿದ್ದ ಪಾಟ್ನಾದ ಕೆಳಹಂತದ ಕೋರ್ಟ್​ ಏಪ್ರಿಲ್​ 25 ರಂದು ರಾಹುಲ್​ ಖುದ್ದು ಹಾಜರಾತಿಗೆ ಸೂಚಿಸಿತ್ತು. ಕಾಂಗ್ರೆಸ್​ ನಾಯಕ ಇದರ ವಿರುದ್ಧ ಹೈಕೋರ್ಟ್​ ಮೆಟ್ಟಿಲೇರಿದ್ದರು.

ಇದನ್ನು ಓದಿ:ರಾಜ್ಯ ಬಿಜೆಪಿ ಸರ್ಕಾರ ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ : ರಾಹುಲ್​ ಗಾಂಧಿ ವಾಗ್ದಾಳಿ

ಇಂದು ರಾಹುಲ್ ಗಾಂಧಿ ಸಲ್ಲಿಸಿದ ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂದೀಪ್ ಕುಮಾರ್ ಅವರಿದ್ದ ಪೀಠ ವಿಚಾರಣೆಗೆ ತಡೆ ನೀಡಿದೆ. ಅಲ್ಲದೇ, ಮುಂದಿನ ವಿಚಾರಣೆವರೆಗೆ ಯಾವುದೇ ಆದೇಶ ನೀಡುವಂತಿಲ್ಲ ಎಂದು ಆದೇಶಿಸಿದೆ. ಇದು ಕಾಂಗ್ರೆಸ್​ ನಾಯಕನನ್ನು ಮತ್ತೊಂದು ಸಂಕಷ್ಟದಿಂದ ಪಾರು ಮಾಡಿದೆ.

ಮಾನಹಾನಿ ಪ್ರಕರಣದ ಹಿನ್ನೆಲೆ: 2019 ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್​ ಗಾಂಧಿ ಅವರು ಕರ್ನಾಟಕದ ಕೋಲಾರದಲ್ಲಿ ಮೋದಿ ಹೆಸರು ಬಳಸಿಕೊಂಡು ಟೀಕೆ ಮಾಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಬಿಹಾರದ ಹಿರಿಯ ಬಿಜೆಪಿ ನಾಯಕ ಹಾಗೂ ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಅವರು ಪಾಟ್ನಾದ ಸಿವಿಲ್ ಕೋರ್ಟ್‌ನಲ್ಲಿ ದೂರು ಸಲ್ಲಿಸಿದ್ದರು.

ಇದನ್ನು ಓದಿ:ಬಸವಣ್ಣನ ಐಕ್ಯಮಂಟಪಕ್ಕೆ ನಾಳೆ ರಾಹುಲ್ ಗಾಂಧಿ ಭೇಟಿ.... ಎಂ ಬಿ ಪಾಟೀಲ್​​

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್​​ನ ಸೂರತ್ ನ್ಯಾಯಾಲಯ ರಾಹುಲ್​ ಗಾಂಧಿಗೆ ಈಗಾಗಲೇ 2 ವರ್ಷಗಳ ಶಿಕ್ಷೆ ವಿಧಿಸಿದೆ. ಇದರಿಂದಾಗಿ ಅವರು ಸಂಸತ್ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ. ಶಿಕ್ಷೆಯ ವಿರುದ್ಧ ಸಲ್ಲಿಸಲಾದ ಮೇಲ್ಮನವಿ ಅರ್ಜಿಯು ಸಹಿತ ತಿರಸ್ಕಾರವಾಗಿದೆ. ಮಾನಹಾನಿ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದರೂ ಕಾಂಗ್ರೆಸ್​ ನಾಯಕನಿಗೆ ಜಾಮೀನು ಮಂಜೂರು ಮಾಡಲಾಗಿದೆ. ಇದೀಗ ಇದೇ ಪ್ರಕರಣದಲ್ಲಿ ಪಾಟ್ನಾ ನ್ಯಾಯಾಲಯದಿಂದ ರಿಲೀಫ್ ಪಡೆದಿದ್ದಾರೆ.

ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸ್ತಾರಾ?: ಮಾನನಷ್ಟ ಪ್ರಕರಣದಲ್ಲಿ ಸೂರತ್​ ಸೆಷನ್ಸ್​ ನ್ಯಾಯಾಲಯದಿಂದ ಶಿಕ್ಷೆಗೆ ತಡೆಯಾಜ್ಞೆ ಸಿಗದ ಕಾರಣ ರಾಹುಲ್​ ಗಾಂಧಿ ಅವರ ಮುಂದೆ ಇರುವ ಆಯ್ಕೆ ಹೈಕೋರ್ಟ್ ಮಾತ್ರ ಆಗಿದೆ​. ತಮಗೆ ನೀಡಲಾದ ಶಿಕ್ಷೆಗೆ ತಡೆ ನೀಡಬೇಕು ಎಂದು ಅವರು ಹೈಕೋರ್ಟ್​ಗೆ ಮತ್ತೆ ಮೇಲ್ಮನವಿ ಅರ್ಜಿ ಸಲ್ಲಿಸಬಹುದು. ಮೇಲ್ಮನವಿ ಅರ್ಜಿಯನ್ನು ಯಾವಾಗ ಸಲ್ಲಿಸಬೇಕು ಎಂಬುದನ್ನು ಮುಂದೆ ನಿರ್ಣಯಿಸಲಾಗುವುದು ಎಂದು ರಾಹುಲ್​ ಪರ ವಕೀಲರು ತಿಳಿಸಿದ್ದರು.

ಇದನ್ನೂ ಓದಿ: ಮಾನಹಾನಿ ಕೇಸ್​: ಶಿಕ್ಷೆ ತಡೆ ಕೋರಿ ರಾಹುಲ್​ ಗಾಂಧಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.