ETV Bharat / bharat

ವಿದ್ಯುತ್ ಬೆಲೆ ಏರಿಕೆ: ಅದಾನಿ ವಿರುದ್ಧ ತಮ್ಮ ನಿಲುವು ಸ್ಪಷ್ಟಪಡಿಸುವಂತೆ ಪ್ರಧಾನಿ ಮೋದಿಗೆ ರಾಹುಲ್​ ಸವಾಲು

author img

By ETV Bharat Karnataka Team

Published : Oct 18, 2023, 2:47 PM IST

Updated : Oct 18, 2023, 3:15 PM IST

Congress MP Rahul Gandhi shows a media report on 'Adani
ವಿದ್ಯುತ್ ಬೆಲೆ ಏರಿಕೆ: ಅದಾನಿ ವಿರುದ್ಧ ತಮ್ಮ ನಿಲುವು ಸ್ಪಷ್ಟಪಡಿಸುವಂತೆ ಪ್ರಧಾನಿ ಮೋದಿಗೆ ರಾಹುಲ್​ ಸವಾಲು

ಉದ್ಯಮಿ ಗೌತಮ್ ಅದಾನಿ ಇಂಡೋನೇಷ್ಯಾದಿಂದ ಕಲ್ಲಿದ್ದಲನ್ನು ಖರೀದಿಸುತ್ತಿದ್ದಾರೆ. ಈ ಕಲ್ಲಿದ್ದಲು ಭಾರತವನ್ನು ತಲುಪುವ ಹೊತ್ತಿಗೆ ಅದರ ಬೆಲೆ ದ್ವಿಗುಣಗೊಳ್ಳುತ್ತಿದೆ. ಇದರಿಂದ ನಮ್ಮ ವಿದ್ಯುತ್ ಬೆಲೆ ಏರುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ನವದೆಹಲಿ: ಸಾಗರೋತ್ತರ ವ್ಯಾಪಾರ ವ್ಯವಹಾರಗಳ ಮೂಲಕ ದೇಶದ ಬಡವರಿಂದ 20,000 ಕೋಟಿ ರೂ.ಗಳನ್ನು ಲೂಟಿ ಮಾಡಿರುವ ಉದ್ಯಮಿ ಗೌತಮ್ ಅದಾನಿ ವಿರುದ್ಧ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಪ್ರಧಾನಿ ಮೋದಿ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಸವಾಲು ಹಾಕಿದ್ದಾರೆ. ಇದೇ ವೇಳೆ, 2004ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಈ ಉದ್ಯಮಿ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ರಾಹುಲ್​ ಹೇಳಿದ್ದಾರೆ.

ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌತಮ್ ಅದಾನಿ ಮತ್ತು ನಿಗೂಢವಾಗಿ ಕಲ್ಲಿದ್ದಲು ಬೆಲೆ ಏರಿಕೆ ಕುರಿತು ಮಾಧ್ಯಮಗಳ ವರದಿಯನ್ನು ತೋರಿಸುವ ಮೂಲಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಅದಾನಿ ಇಂಡೋನೇಷ್ಯಾದಿಂದ ಕಲ್ಲಿದ್ದಲನ್ನು ಖರೀದಿಸುತ್ತಾರೆ. ಈ ಕಲ್ಲಿದ್ದಲು ಭಾರತವನ್ನು ತಲುಪುವ ಹೊತ್ತಿಗೆ ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಇದರಿಂದ ನಮ್ಮ ವಿದ್ಯುತ್ ಬೆಲೆ ಏರುತ್ತಿದೆ. ಅದಾನಿ ಬಡ ಜನರಿಂದ ಹಣ ಪಡೆಯಲಾಗುತ್ತಿದೆ. ಈ ಕಥೆಯ ಯಾವುದೇ ಸರ್ಕಾರವನ್ನು ಉರುಳಿಸುತ್ತದೆ. ಇದು ನೇರ ಕಳ್ಳತನ ಎಂದು ರಾಹುಲ್​ ಗಾಂಧಿ ಆರೋಪಿಸಿದರು.

ಇದೇ ವೇಳೆ, ಅದಾನಿ ಬಗ್ಗೆ ಪ್ರಧಾನಿ ಮೋದಿ ಮೌನವನ್ನು ಪ್ರಶ್ನಿಸಿದ ರಾಹುಲ್​ ಗಾಂಧಿ, ಪಿಎಂ ಮೋದಿ ಅದಾನಿ ಅವರನ್ನು ರಕ್ಷಿಸುತ್ತಿದ್ದಾರೆ ಎಂಬುದು ಸ್ಪಷ್ಟ. ಇದು ಭಾರತದ ಬಡ ಜನರ ಜೀವನದೊಂದಿಗೆ ಸಂಬಂಧಿಸಿದ ವಿಷಯವಾಗಿದೆ. ಪ್ರಧಾನಿ ತನಿಖೆಗೆ ಆದೇಶಿಸುವ ಬದಲು ಅದಾನಿ ಹಿತಾಸಕ್ತಿ ಕಾಪಾಡುತ್ತಿದ್ದಾರೆ ಎಂದೂ ದೂರಿದರು. ಅಲ್ಲದೇ, ಕರ್ನಾಟಕದಲ್ಲಿ ನಮ್ಮ ಕಾಂಗ್ರೆಸ್​ ಸರ್ಕಾರವು ವಿದ್ಯುತ್​ ಸಬ್ಸಿಡಿ ನೀಡುತ್ತಿದೆ. ಮಧ್ಯಪ್ರದೇಶದಲ್ಲಿ ನಮ್ಮ ಪಕ್ಷವು ಮತ್ತೆ ಅಧಿಕಾರಕ್ಕೆ ಬಂದರೆ ಅದೇ ರೀತಿಯಾಗಿ ವಿದ್ಯುತ್​ ಸಬ್ಸಿಡಿ ನೀಡುವುದಾಗಿ ಭರವಸೆ ನೀಡಿದ್ದೇವೆ. ಇಂತಹ ಸಂದರ್ಭದಲ್ಲಿ ಅದಾನಿ ಬಗ್ಗೆ ಪ್ರಧಾನಿ ಮೌನವು ತಪ್ಪುದಾರಿಗೆಳೆಯುತ್ತಿದೆ ಎಂದು ಟೀಕಿಸಿದರು.

ಅದಾನಿಯವರ ಈ ಭಾರಿ ಆರ್ಥಿಕ ದುರುಪಯೋಗದ ಬಗ್ಗೆ ಯಾವುದೇ ಭಾರತದ ಮಾಧ್ಯಮಗಳು ಪ್ರಶ್ನೆಗಳನ್ನು ಎತ್ತುತ್ತಿಲ್ಲ ಎಂದ ಕಾಂಗ್ರೆಸ್​ ನಾಯಕ, ಆರ್ಥಿಕ ದುರುಪಯೋಗದಲ್ಲಿ ಅದಾನಿ ಭಾಗಿಯಾಗಿರುವ ಬಗ್ಗೆ ತನಗೆ ಪುರಾವೆಗಳು ಸಿಗುತ್ತಿಲ್ಲ ಎಂದು ಸರ್ಕಾರದ ಸೆಬಿ ಹೇಳುತ್ತದೆ. ಇದೇ ವೇಳೆ, ಪತ್ರಿಕೆಯೊಂದು ಇಂತಹ ದಾಖಲೆಗಳನ್ನು ಪ್ರಸ್ತುತಪಡಿಸಿದೆ. ಇದು ಅದಾನಿ ಅವರನ್ನು ರಕ್ಷಿಸುತ್ತಿರುವುದು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಹೇಳಿದರು.

ಶರದ್ ಪವಾರ್ ಪ್ರಧಾನಿಯಲ್ಲ: ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟದ ನಾಯಕರಾದ ಎನ್​ಸಿಪಿ ವರಿಷ್ಠ ಶರದ್ ಪವಾರ್ ಹಾಗೂ ಅದಾನಿ ಭೇಟಿ ಕುರಿತು ಪ್ರಶ್ನೆಗೆ ರಾಹುಲ್​ ಗಾಂಧಿ, ನಾನು ಶರದ್ ಪವಾರ್ ಅವರನ್ನು ಕೇಳಿಲ್ಲ. ಅವರು ದೇಶದ ಪ್ರಧಾನಿ ಅಲ್ಲ. ಶರದ್ ಪವಾರ್ ಅವರು ಅದಾನಿಯನ್ನು ರಕ್ಷಿಸುತ್ತಿಲ್ಲ. ಮೋದಿಯವರು ದೇಶದ ಪ್ರಧಾನಿ, ಅದಕ್ಕಾಗಿಯೇ ನಾನು ಮೋದಿಯವರಿಗೆ ಈ ಪ್ರಶ್ನೆಯನ್ನು ಕೇಳುತ್ತಿದ್ದೇನೆ. ಶರದ್ ಪವಾರ್ ಪ್ರಧಾನಿಯಾಗಿ ಕುಳಿತು ಅದಾನಿಯನ್ನು ರಕ್ಷಿಸುತ್ತಿದ್ದರೆ, ನಾನು ಶರದ್ ಪವಾರ್‌ ಅವರಿಗೆ ಈ ಪ್ರಶ್ನೆಯನ್ನು ಕೇಳುತ್ತಿದ್ದೆ ಎಂದು ತಿಳಿಸಿದರು.

ಇದನ್ನೂ ಓದಿ: ರಾಜ್ಯದ ವಿದ್ಯುತ್ ಕ್ಷಾಮಕ್ಕೆ ಸರ್ಕಾರದಿಂದ ವಿದ್ಯುಚ್ಛಕ್ತಿ ಕಾಯ್ದೆ ಅಸ್ತ್ರ.. ಖಾಸಗಿಯವರು ಬೇರೆ ರಾಜ್ಯಕ್ಕೆ ಕರೆಂಟ್ ಮಾರುವುದಕ್ಕೆ ಬ್ರೇಕ್​​

Last Updated :Oct 18, 2023, 3:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.