ETV Bharat / bharat

ವಿದೇಶಿ ಮಹಿಳೆಯ ನಿಗೂಢ ಸಾವು ಪ್ರಕರಣ: ಪೊಲೀಸರಿಂದ ತನಿಖೆ ಚುರುಕು

author img

By

Published : Jul 28, 2023, 9:46 PM IST

Police Investigate Mysterious Death of English Woman in Tiruvannamalai
ಇಂಗ್ಲೆಂಡ್‌ ಮಹಿಳೆಯ ನಿಗೂಢ ಸಾವು ಪ್ರಕರಣ: ಪೊಲೀಸರಿಂದ ತನಿಖೆ ಚುರುಕು

ಕಳೆದ ಐದು ವರ್ಷಗಳಿಂದ ತಿರುವಣ್ಣಾಮಲೈ ಬಳಿಯ ಫಾರ್ಮ್‌ಹೌಸ್‌ನಲ್ಲಿ ಏಕಾಂಗಿಯಾಗಿ ನೆಲೆಸಿದ್ದ ಇಂಗ್ಲೆಂಡ್​ 72 ವರ್ಷದ ಮಹಿಳೆಯ ನಿಗೂಢ ಸಾವಿನ ಪ್ರಕರಣದ ಕುರಿತು ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.

ತಿರುವಣ್ಣಾಮಲೈ (ತಮಿಳುನಾಡು): ತಮಿಳುನಾಡಿನ ತಿರುವಣ್ಣಾಮಲೈ ಎಂಬ ಸುಂದರವಾದ ಪಟ್ಟಣವು ಶಿವನಿಗೆ ಅರ್ಪಿತವಾದ ಪೂಜ್ಯ ಅಣ್ಣಾಮಲೈಯಾರ್ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಇದು ಭಾರತ ಮತ್ತು ವಿದೇಶಗಳಿಂದ ಹಲವಾರು ಭಕ್ತರನ್ನು ಆಕರ್ಷಿಸುತ್ತದೆ. ಅನೇಕ ವಿದೇಶಿ ಭಕ್ತರು ಈ ಪ್ರದೇಶದಲ್ಲಿ ಭೂಮಿ ಖರೀದಿಸಿದ್ದಾರೆ. ತೋಟದ ಮನೆಗಳನ್ನು ನಿರ್ಮಿಸಿದ್ದಾರೆ, ಅಲ್ಲಿ ಅವರು ದೇವರನ್ನು ಪೂಜಿಸುತ್ತಾರೆ.

ಅದೇ ರೀತಿ ತಿರುವಣ್ಣಾಮಲೈ ಸುತ್ತಮುತ್ತ ಅನೇಕ ವಿದೇಶಿಗರು ತೋಟದ ಮನೆಗಳನ್ನು ಸ್ಥಾಪಿಸಿಕೊಂಡು ತಂಗುತ್ತಿದ್ದಾರೆ. ಇದರಂತೆ ಇಂಗ್ಲೆಂಡ್ ಮೂಲದ ಅನ್ನಾ ಲುಸಾರ್ಡಿ ಎಂಬ 72 ವರ್ಷದ ಮಹಿಳೆ ತಿರುವಣ್ಣಾಮಲೈ ಜಿಲ್ಲೆಯ ಸೆಂಗಂ ಪಕ್ಕದ ನೆಡುಂಗವಾಡಿ ಪ್ರದೇಶದಲ್ಲಿ ಕಳೆದ 5 ವರ್ಷಗಳಿಂದ ಒಂಟಿಯಾಗಿ ವಾಸಿಸುತ್ತಿದ್ದಾರೆ.

ಕೊಳೆತ ಸ್ಥಿತಿಯಲ್ಲಿದ್ದ ವಿದೇಶಿ ಮಹಿಳೆಯ ಮೃತದೇಹ: ಈ ವೇಳೆ, ಕಳೆದ ಭಾನುವಾರ ವಿದೇಶಿ ಮಹಿಳೆಗೆ ಸಹಾಯ ಮಾಡುತ್ತಿದ್ದ ತಿರುವಣ್ಣಾಮಲೈ ಮೂಲದ ಹರಿ ಎಂಬಾತ ವಿದೇಶಿ ಮಹಿಳೆ ತಂಗಿದ್ದ ಫಾರ್ಮ್ ಹೌಸ್ ಗೆ ತೆರಳಿದ್ದರು. ಅವರಿಗೆ ದುರ್ವಾಸನೆ ಬರುತ್ತಿತ್ತು. ವಿಷಯ ತಿಳಿದು ಮನೆಯೊಳಗೆ ಹೋದಾಗ ವಿದೇಶಿ ಮಹಿಳೆ ಸಾವನ್ನಪಿದ್ದರು. ಮೃತದೇಹ ಕೊಳೆತು ಹೋಗಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ಬಳಿಕ ಆ ಪ್ರದೇಶದ ಜನರು, ಮಹಿಳೆಯನ್ನು ಪೊಲೀಸರಿಗಾಗಲಿ, ಕಂದಾಯ ಇಲಾಖೆಗಾಗಲಿ ಯಾವುದೇ ಮಾಹಿತಿ ನೀಡದೇ ಆಕೆ ವಾಸವಿದ್ದ ತೋಟದಲ್ಲೇ ಹೂತು ಹಾಕಿದ್ದಾರೆ. ನಂತರ ಏನಾಯಿತು ಎಂಬುದರ ಆಧಾರದ ಮೇಲೆ ಗ್ರಾ.ಪಂ. ಆಡಳಿತ ಅಧಿಕಾರಿಯು, ಚಲಮ್ಮಾಳ್ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮೃತ ಮಹಿಳೆಯ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದರು. ಆಕೆಯದು ಸಹಜ ಸಾವೇ ಅಥವಾ ಕೊಲೆ ಮಾಡಲಾಗಿದೆಯೇ? ಎಂಬ ದೃಷ್ಟಿಕೋನದಿಂದ ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ಮೃತ ಮಹಿಳೆಯ ಲ್ಯಾಪ್ ಟಾಪ್, ಎಟಿಎಂ ಕಾರ್ಡ್, ಸೆಲ್ ಫೋನ್ ಜಪ್ತಿ ಮಾಡಿದ್ದು, ಚಾತನೂರು ಡ್ಯಾಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಳಿಕ ಜಿಲ್ಲಾಡಳಿತಕ್ಕೆ ಸೂಕ್ತ ಮಾಹಿತಿ ನೀಡಿ ಮೃತ ವಿದೇಶಿ ಮಹಿಳೆಯ ಶವ ಹೊರತೆಗೆಯಲಾಯಿತು.

ಮರಣೋತ್ತರ ಪರೀಕ್ಷೆ: ನಂತರ ತಿರುವಣ್ಣಾಮಲೈ ಕ್ರೈಂ ಬ್ರಾಂಚ್ ಹೆಚ್ಚುವರಿ ಉಪ ಅಧೀಕ್ಷಕ ಪಳನಿ, ಸೆಂಗಂ ಉಪ ಅಧೀಕ್ಷಕ ತೇನ್ಮೋಳಿವೇಲ್, ಮೇಲ್ ಸೆಂಗಂ ಇನ್ಸ್‌ಪೆಕ್ಟರ್ ಶಾಂತಿ, ತಂದರಂಪಟ್ಟ ಜಿಲ್ಲಾಧಿಕಾರಿ ಅಬ್ದುಲ್ ರಘುಬ್, ಗ್ರಾಮಾಧಿಕಾರಿ ಚಲಮ್ಮಾಳ್, ಕಂದಾಯ ನಿರೀಕ್ಷಕ ಸತ್ಯನಾರಾಯಣನ್ ಅವರು ತಿರುವಣ್ಣಾಮಲ ಸರ್ಕಾರಿ ವೈದ್ಯಕೀಯ ಕಾಲೇಜಿನ ಡಾ.ಕಮಲಕಣ್ಣನ್ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಪೊಲೀಸರಿಂದ ಮುಂದುವರೆದ ತನಿಖೆ: ತಿರುವಣ್ಣಾಮಲೈ ಸರ್ಕಾರಿ ವೈದ್ಯಕೀಯ ಕಾಲೇಜಿನ ಡಾ.ಕಮಲಕಣ್ಣನ್ ಅವರು, 2 ದಿನಗಳಲ್ಲಿ ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರಿಗೆ ನೀಡುವ ನಿರೀಕ್ಷೆಯಿದೆ. ಇದೀಗ ವಿದೇಶಿ ಮಹಿಳೆಯೊಬ್ಬರ ಸಾವು ಈ ಭಾಗದಲ್ಲಿ ಭಾರಿ ಸಂಚಲನ ಮೂಡಿಸಿದೆ. ವಿದೇಶಿ ಮಹಿಳೆಯ ನಿಗೂಢ ಸಾವಿನ ಕುರಿತು ಪೊಲೀಸರಿಂದ ತನಿಖೆ ಮುಂದುವರೆದಿದೆ.

ಇದನ್ನೂ ಓದಿ: ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯ ಶವ ಪಕ್ಕದ ಮನೆಯಲ್ಲಿ ಹೂತಿಟ್ಟಿರುವ ಸ್ಥಿತಿಯಲ್ಲಿ ಪತ್ತೆ: ಅತ್ಯಾಚಾರ ಎಸಗಿ ಕೊಲೆ ಶಂಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.