ETV Bharat / bharat

ದಾವೂದ್​​ ಇಬ್ರಾಹಿಂ ಜತೆಗೆ ಪವಾರ್​ಗೆ ನಂಟು ಹೇಳಿಕೆ: ಕೇಂದ್ರ ಸಚಿವ ರಾಣೆ ಪುತ್ರರ ವಿರುದ್ಧ ಕೇಸ್​

author img

By

Published : Mar 13, 2022, 4:57 PM IST

Sharad Pawar-Narayan Rane
Sharad Pawar-Narayan Rane

ಎನ್​ಸಿಪಿ ಅಧ್ಯಕ್ಷ ಶರದ್​ ಪವರ್​ ಅವರಿಗೆ ಭೂಗತ ಪಾತಕಿ ದಾವೂದ್​​ ಇಬ್ರಾಹಿಂನೊಂದಿಗೆ ನಂಟಿದೆ. ಹೀಗಾಗಿ ಬಂಧನಕ್ಕೊಳಾಗಿರುವ ನವಾಬ್​ ಮಲಿಕ್ ಅವರ ರಾಜೀನಾಮೆ ಪಡೆಯುತ್ತಿಲ್ಲ ಎಂದು ಕೇಂದ್ರ ಸಚಿವ ರಾಣೆ ಅವರ ಪುತ್ರರಾದ ನಿತೇಶ್​ ರಾಣೆ ಮತ್ತು ನಿಲೇಶ್​ ರಾಣೆ ಹೇಳಿಕೆ ನೀಡಿದ್ದರು.

ಮುಂಬೈ (ಮಹಾರಾಷ್ಟ್ರ): ಎನ್​ಸಿಪಿ ಅಧ್ಯಕ್ಷ ಶರದ್​ ಪವಾರ್​ ಅವರಿಗೆ ಭೂಗತ ಪಾತಕಿ ದಾವೂದ್​​ ಇಬ್ರಾಹಿಂನೊಂದಿಗೆ ಸಂಪರ್ಕ ಹೊಂದಿರುವ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ನಾರಾಯಣ ರಾಣೆ ಅವರ ಇಬ್ಬರು ಪುತ್ರರ ವಿರುದ್ಧ ಮುಂಬೈನ ಆಜಾದ್​ ಮೈದಾನ ಪೊಲೀಸ್​​ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದಾವೂದ್​​ ಇಬ್ರಾಹಿಂ ಮತ್ತು ಆತನ ಸಹಚಾರರ ಜತೆ ನಂಟು ಹೊಂದಿದ ಆರೋಪದಡಿ ಇತ್ತೀಚೆಗೆ ಎನ್​ಸಿಪಿ ಮುಖಂಡ, ಮಹಾರಾಷ್ಟ್ರ ಸಚಿವ ನವಾಬ್​ ಮಲಿಕ್​ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.

ಇದೇ ವಿಚಾರವಾಗಿ ಶರದ್​ ಪವರ್​ ಅವರಿಗೆ ಭೂಗತ ಪಾತಕಿ ದಾವೂದ್​​ ಇಬ್ರಾಹಿಂನೊಂದಿಗೆ ನಂಟಿದೆ. ಹೀಗಾಗಿ ಬಂಧನಕ್ಕೊಳಾಗಿರುವ ನವಾಬ್​ ಮಲಿಕ್ ಅವರ ರಾಜೀನಾಮೆ ಪಡೆಯುತ್ತಿಲ್ಲ ಎಂದು ಕೇಂದ್ರ ಸಚಿವ ರಾಣೆ ಅವರ ಪುತ್ರರಾದ ಬಿಜೆಪಿ ಶಾಸಕ ನಿತೇಶ್​ ರಾಣೆ ಮತ್ತು ನಿಲೇಶ್​ ರಾಣೆ ಹೇಳಿಕೆ ನೀಡಿದ್ದರು.

ಈ ಬಗ್ಗೆ ಎನ್​ಸಿಪಿ ಮುಖಂಡ ಸೂರಜ್​ ಚವ್ಹಾಣ ದೂರಿನ ಮೇರೆಗೆ ರಾಣೆ ಪುತ್ರರ ವಿರುದ್ಧ ಮೊಕದ್ದಮೆ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಪಂಜಾಬ್​ನಲ್ಲಿ 'ಆಪ್'​ ಭರ್ಜರಿ ರೋಡ್​ ಶೋ.. 'ಸಿಎಂ' ಮಾನ್​ ಅಧಿಕಾರ ಸ್ವೀಕಾರಕ್ಕೆ ಮುಹೂರ್ತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.