ಚಂಡೀಗಢ್ (ಪಂಜಾಬ್): ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಆಮ್ ಆದ್ಮಿ ಪಕ್ಷದಿಂದ ಭಗವಂತ್ ಮಾನ್ ಬುಧವಾರ (ಮಾ.16) ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಮಾನ್ ಸಚಿವ ಸಂಪುಟದಲ್ಲಿ 16 ಜನರಿಗೆ ಸ್ಥಾನ ಸಿಗಲಿದ್ದು, ಸಚಿವರು ಮುಂದಿನ ದಿನಗಳಲ್ಲಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.
ಪಂಜಾಬ್ ವಿಧಾನಸಭೆಯ 117 ಸ್ಥಾನಗಳ ಪೈಕಿ 92 ಸ್ಥಾನಗಳನ್ನು ಆಪ್ ಗೆದ್ದು ಅಧಿಕಾರಕ್ಕೆ ಬಂದಿದೆ. ಬುಧವಾರ ನಿಯೋಜಿತ ಮುಖ್ಯಮಂತ್ರಿ ಭಗವಂತ್ ಮಾನ್ ಏಕಾಂಗಿಯಾಗಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರ ಭಗತ್ ಸಿಂಗ್ ಅವರ ಹುಟ್ಟೂರಾದ ಖತ್ಕರ್ಕಲನ್ ಗ್ರಾಮದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಸಚಿವ ಸಂಪುಟ ಸಹ ರಚನೆಯಾಗಲಿದ್ದು, 16 ಮಂದಿ ಶಾಸಕರು ಸಚಿವರಾಗಿ ಪದಗ್ರಹಣ ಮಾಡಲಿದ್ದಾರೆ. ತಮ್ಮ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭಕ್ಕೆ ಆಪ್ನ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಖುದ್ದು ಭಗವಂತ್ ಮಾನ್ ಆಹ್ವಾನ ನೀಡಲಿದ್ದಾರೆ. ಸಚಿವ ಸಂಪುಟದ ಆಯ್ಕೆ ಬಗ್ಗೆ ಮಾನ್ ಅವರಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದು ಹೇಳಲಾಗಿದೆ.
-
#WATCH Aam Aadmi Party national convener Arvind Kejriwal and Punjab CM designate Bhagwant Mann hold victory roadshow in Amritsar pic.twitter.com/KqiseFyZHR
— ANI (@ANI) March 13, 2022 " class="align-text-top noRightClick twitterSection" data="
">#WATCH Aam Aadmi Party national convener Arvind Kejriwal and Punjab CM designate Bhagwant Mann hold victory roadshow in Amritsar pic.twitter.com/KqiseFyZHR
— ANI (@ANI) March 13, 2022#WATCH Aam Aadmi Party national convener Arvind Kejriwal and Punjab CM designate Bhagwant Mann hold victory roadshow in Amritsar pic.twitter.com/KqiseFyZHR
— ANI (@ANI) March 13, 2022
ಭರ್ಜರಿ ರೋಡ್ ಶೋ: ಪಂಜಾಬ್ನಲ್ಲಿ ಪ್ರಚಂಡ ಬಹುಮತ ಬಂದ ಹಿನ್ನೆಲೆಯಲ್ಲಿ ರವಿವಾರ ಆಪ್ ನಾಯಕರು ವಿಜಯೋತ್ಸವದ ರೋಡ್ ಶೋ ನಡೆಸಿದರು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಪಂಜಾಬ್ನ ನಿಯೋಜಿತ ಮುಖ್ಯಮಂತ್ರಿ ಭಗವಂತ್ ಮನ್ ಭರ್ಜರಿ ರೋಡ್ ಶೋನಲ್ಲಿ ಭಾಗವಹಿಸಿದ್ದರು.
ಇದಕ್ಕೂ ಮುನ್ನ ಅಮೃತಸರ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರನ್ನು ಭಗವಂತ್ ಮನ್ ಬರಮಾಡಿಕೊಂಡರು. ಬಳಿಕ ಆಪ್ ನಾಯಕರು ಪ್ರಸಿದ್ಧ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
-
#WATCH Punjab CM designate Bhagwant Mann and AAP national convener Arvind Kejriwal visit Golden Temple in Amritsar#Punjab pic.twitter.com/OyYlg9YB15
— ANI (@ANI) March 13, 2022 " class="align-text-top noRightClick twitterSection" data="
">#WATCH Punjab CM designate Bhagwant Mann and AAP national convener Arvind Kejriwal visit Golden Temple in Amritsar#Punjab pic.twitter.com/OyYlg9YB15
— ANI (@ANI) March 13, 2022#WATCH Punjab CM designate Bhagwant Mann and AAP national convener Arvind Kejriwal visit Golden Temple in Amritsar#Punjab pic.twitter.com/OyYlg9YB15
— ANI (@ANI) March 13, 2022
ನಂತರ ಜಲಿಯನ್ ವಾಲಾಭಾಗ್ ಸ್ಮಾರಕ ಸ್ಥಳಕ್ಕೆ ತೆರಳಿ ಅಲ್ಲಿ ಗೌರವ ಸಮರ್ಪಿಸಿದರು. ಅಲ್ಲದೇ, ದುರ್ಗಿಯಾನಾ ದೇವಸ್ಥಾನಕ್ಕೂ ಆಪ್ ನಾಯಕರು ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಅಮೃತಸರ್ದಲ್ಲಿ ತೆರೆದ ವಾಹನದಲ್ಲಿ ಕೇಜ್ರಿವಾಲ್, ಭಗವಂತ್ ಮಾನ್ ರೋಡ್ ಶೋ ನಡೆಸಿ, ಪಂಜಾಬ್ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಇದನ್ನೂ ಓದಿ: ಭಗತ್ ಸಿಂಗ್ ಹುಟ್ಟೂರಿನಲ್ಲಿ ಸಿಎಂ ಆಗಿ ಅಧಿಕಾರ ಸ್ವೀಕರಿಸುವೆ: ಆಪ್ನ ಭಗವಂತ್ ಮನ್ ಘೋಷಣೆ