ETV Bharat / bharat

ಗಂಡನ ಮನೆಯವರ ವರದಕ್ಷಿಣೆ ಕಿರುಕುಳ.. ನವವಿವಾಹಿತೆ ಆತ್ಮಹತ್ಯೆಗೆ ಶರಣು..

author img

By

Published : Sep 27, 2021, 9:24 PM IST

ಸೆಪ್ಟೆಂಬರ್​ 25ರಂದು ಸಂಜೆ ಅಂಬಿಕಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವರದಕ್ಷಿಣೆ ಕಿರುಕುಳಕ್ಕಾಗಿ ಪತಿ ರಾಜಿರೆಡ್ಡಿ ಹಾಗೂ ಚಿಕ್ಕಮ್ಮನ ವಿರುದ್ಧ ದೂರು ದಾಖಲು ಮಾಡಲಾಗಿದೆ..

MARRIED WOMAN COMMITTED SUICIDE
MARRIED WOMAN COMMITTED SUICIDE

ಸಂಗಾರೆಡ್ಡಿ(ತೆಲಂಗಾಣ) : ಕಳೆದ 10 ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನವವಿವಾಹಿತೆಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಸಂಗಾರೆಡ್ಡಿ ಜಿಲ್ಲೆಯ ಪಟಾಂಚೇರಿಯಲ್ಲಿ ಈ ಘಟನೆ ನಡೆದಿದೆ. ಕಳೆದ 10 ತಿಂಗಳ ಹಿಂದೆ ಅಂಬಿಕಾ ಎಂಬ ಯುವತಿ ರಾಜಿರೆಡ್ಡಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು. ಈ ವೇಳೆ 15 ತೊಲ ಚಿನ್ನ, 6 ಲಕ್ಷ ರೂ. ನಗದು ನೀಡಲಾಗಿತ್ತು.

ಜೊತೆಗೆ ಮದುವೆಗೋಸ್ಕರ ಬರೋಬ್ಬರಿ 10 ಲಕ್ಷ ರೂ. ಖರ್ಚು ಮಾಡಲಾಗಿತ್ತು. ಆದರೆ, ಮದುವೆಯಾದ ಕೆಲ ದಿನಗಳ ನಂತರ ಗಂಡ ಹಾಗೂ ಚಿಕ್ಕಮ್ಮ ಕಿರುಕುಳ ನೀಡಲು ಶುರು ಮಾಡಿದ್ದಾರೆ.

ಇದನ್ನೂ ಓದಿರಿ: ಯುವ ವೈದ್ಯರನ್ನ ಫುಟ್ಬಾಲ್​​ ರೀತಿ ನಡೆಸಿಕೊಳ್ಳಬೇಡಿ : ಕೇಂದ್ರಕ್ಕೆ ಸುಪ್ರೀಂಕೋರ್ಟ್‌ ಚಾಟಿ

ಹೆಚ್ಚುವರಿ ವರದಕ್ಷಿಣೆ ತೆಗೆದುಕೊಂಡು ಬರುವಂತೆ ಕಿರುಕುಳ ನೀಡಿದ್ದಾರೆ. ಇದರ ಬಗ್ಗೆ ಅಂಬಿಕಾ ತನ್ನ ಹೆತ್ತವರಿಗೆ ತಿಳಿಸಿದ್ದಾಳೆ. ಹೀಗಾಗಿ, ಕೆಲ ದಿನಗಳ ಹಿಂದೆ ಅಂಬಿಕಾ ತನ್ನ ಮಗಳಿಗೆ 50 ಸಾವಿರ ರೂ. ನಗದು ನೀಡಿದ್ದಾಳೆ. ಇಷ್ಟಾದರೂ ಗಂಡನ ಮನೆಯವರ ಕಿರುಕುಳ ನಿಂತಿಲ್ಲ.

ಹೀಗಾಗಿ, ಸೆಪ್ಟೆಂಬರ್​ 25ರಂದು ಸಂಜೆ ಅಂಬಿಕಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವರದಕ್ಷಿಣೆ ಕಿರುಕುಳಕ್ಕಾಗಿ ಪತಿ ರಾಜಿರೆಡ್ಡಿ ಹಾಗೂ ಚಿಕ್ಕಮ್ಮನ ವಿರುದ್ಧ ದೂರು ದಾಖಲು ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.