ETV Bharat / bharat

ವರ್ಷದ 355 ದಿನ ಸೆರೆಯಲ್ಲಿರುವ ಗಣಪನಿಗೆ 10 ದಿನ ವಿಜೃಂಭಣೆಯ ಪೂಜೆ

author img

By

Published : Sep 2, 2022, 8:07 PM IST

355 days imprisonment and 10 days Pooja for Ganapa
ವರ್ಷದ 355 ದಿನ ಸೆರೆಯಲ್ಲಿರುವ ಗಣಪನಿಗೆ 10 ದಿನ ವಿಜೃಂಭಣೆಯ ಪೂಜೆ

ಇಲ್ಲಿ ಪೂಜಿಸಲ್ಪಡುವ ಗಣಪ 150 ವರ್ಷಗಳಷ್ಟು ಹಳೇಯದು. ಅದಲ್ಲದೇ ಇದು ಅಮೃತಶಿಲೆಯಿಂದ ತಯಾರಾದ ಮೂರ್ತಿ. 10 ದಿನಗಳ ಕಾಲ ಪೊಲೀಸ್ ಠಾಣೆಯಿಂದ ಮಾರುಕಟ್ಟೆಗೆ ಗಣೇಶನ ಮೂರ್ತಿಯನ್ನು ತಂದು ವಿಜೃಂಭಣೆಯಿಂದ ಪೂಜೆ ಸಲ್ಲಿಸಿದ ಬಳಿಕ ಮತ್ತೆ ಠಾಣೆಗೆ ಒಪ್ಪಿಸಲಾಗುತ್ತದೆ.

ನಳಂದ(ಬಿಹಾರ): ವರ್ಷದ 355 ದಿನಗಳ ಕಾಲ ನಳಂದಾದ ಸಿಲಾವೋ ಪೊಲೀಸ್​ ಠಾಣೆಯಲ್ಲಿ ಬಂಧಿಯಾಗಿರುವ ಗಣಪನನ್ನು ಗಣೇಶ ಚತುರ್ಥಿಗೆ 10 ದಿನಗಳ ಕಾಲ ಹೊರಗಡೆ ತಂದು ಪೂಜಾ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪೂಜೆ ಮಾಡಲಾಗುತ್ತದೆ. ಹೊರಗಡೆ ತಂದ ಗಣಪನಿಗೆ ಕೈದಿಗಳೆಲ್ಲ ಸೇರಿ ಪೂಜೆ ಮಾಡುತ್ತಾರೆ. ಕಳ್ಳರ ಕೈಯಿಂದ ತಪ್ಪಿಸಲು ಪೂಜೆ ಮುಗಿಸಿ ಮತ್ತದೇ ಠಾಣೆಯ ದೇವಾಲಯದಲ್ಲಿ ಗಣಪನನ್ನು ತೆಗೆದುಕೊಂಡು ಹೋಗಿ ಬಂಧನದಲ್ಲಿಡಲಾಗುತ್ತದೆ.

ವರ್ಷದ 355 ದಿನ ಸೆರೆಯಲ್ಲಿರುವ ಗಣಪನಿಗೆ 10 ದಿನ ವಿಜೃಂಭಣೆಯ ಪೂಜೆ

ಗಣಪತಿಯನ್ನು ಸೆರೆಯಲ್ಲಿಟ್ಟಿದ್ದೇಕೆ?: ಇಲ್ಲಿ ಪೂಜಿಸಲ್ಪಡುವ ಗಣಪ 150 ವರ್ಷಗಳಷ್ಟು ಹಳೇಯದು. ಅದಲ್ಲದೆ ಇದು ಅಮೃತಶಿಲೆಯಿಂದ ತಯಾರಾದ ಮೂರ್ತಿ. ಮೊದಲು ಮಣ್ಣಿನ ಮೂರ್ತಿ ಇತ್ತು ಎಂದು ಕೇಳಿದ್ದೆ. ಈಗ ಇರುವ ಅಮೃತಶಿಲೆಯ ಮೂರ್ತಿ ಮೇಲೆ ಕಳ್ಳರ ಕಣ್ಣು ಇದೆ. ಒಂದು ಬಾರಿ ಮೂರ್ತಿಯನ್ನು ಕಳ್ಳರು ಕದ್ದೊಯ್ದಿದ್ದರು. ಆದರೆ, ಜನರ ಕಣ್ಣಿಗೆ ಸಿಕ್ಕಿಬಿದ್ದು, ಮೂರ್ತಿಯನ್ನು ಕಾಪಾಡಲಾಯಿತು. ನಂತರದಲ್ಲಿ ಮೂರ್ತಿಯನ್ನು ಪೊಲೀಸ್​ ಠಾಣೆ ಆವರಣದ ದೇವಸ್ಥಾನದಲ್ಲಿ ಸುರಕ್ಷಿತವಾಗಿ ಇಡಬೇಕು ಎಂದು ಸ್ಥಳೀಯರು ನಿರ್ಧರಿಸಿ, ಅಲ್ಲೇ ಇರಿಸಿದ್ದರು. ಅದೇ ಸಂಪ್ರದಾಯ ಇಂದಿನವರೆಗೂ ನಡೆದುಕೊಂಡು ಬರುತ್ತಿದೆ ಎಂದು ಅರ್ಚಕ ಬಾಲ ಗೋವಿಂದ್​ ರಾಮ್​ ಹೇಳಿದರು.

ಭಾಡೋ ಶುಕ್ಲ ಪಕ್ಷದಂದು ನಾವು ವಿಗ್ರಹವನ್ನು ಹೊರತರುತ್ತೇವೆ. 10 ದಿನಗಳ ನಂತರ, ಅದನ್ನು ಮತ್ತೆ ಪೊಲೀಸ್ ಠಾಣೆ ಆವರಣದಲ್ಲಿ ಇಡುತ್ತೇವೆ. ಪೂಜಾ ಸಮಿತಿ ಜನರು ಪೂಜಾಮಂಟಪದಲ್ಲಿ ಇರಿಸಿ ಶಾಸ್ತ್ರೋಕ್ತವಾಗಿ ಪೂಜೆ ಮಾಡುತ್ತಾರೆ. 150 ವರ್ಷಗಳಿಂದ ಪ್ರತಿ ವರ್ಷ ಗಣಪತಿಗೆ ಪೂಜೆ ಸಲ್ಲಿಸಲಾಗುತ್ತಿದೆ. ಕೇವಲ 10 ದಿನಗಳ ಕಾಲ ಪೊಲೀಸ್ ಠಾಣೆಯಿಂದ ಮಾರುಕಟ್ಟೆಗೆ ಗಣೇಶನ ಮೂರ್ತಿಯನ್ನು ತಂದು ವಿಜೃಂಭಣೆಯಿಂದ ಪೂಜೆ ಸಲ್ಲಿಸಿದ ಬಳಿಕ ಮತ್ತೆ ಠಾಣೆಗೆ ಒಪ್ಪಿಸಲಾಗುತ್ತದೆ.

ಇದನ್ನೂ ಓದಿ: ಮುಂಬೈನಲ್ಲಿ ಗಣೇಶ ನಿಮಜ್ಜನಕ್ಕೆ ಕೃತಕ ಕೊಳಗಳು: ಒಂದೇ ದಿನ 55 ಸಾವಿರ ಮೂರ್ತಿ ನಿಮಜ್ಜನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.