ತುಳಜಾಪುರ್(ಮಹಾರಾಷ್ಟ್ರ): ಬಟ್ಟೆ ಒಣ ಹಾಕುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ ಮಗ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ತುಳಜಾಪುರದ ಖಡ್ಕಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ಸಚಿನ್ ಶ್ಯಾಮ್ ಭಂಡಾರೆ(35), ಜೈ ಸಚಿನ್ ಭಂಡಾರೆ(11) ಮೃತರು. ಶ್ಯಾಮ್ ಭಂಡಾರೆ ಮಗ ಸಚಿನ್ ಭಂಡಾರೆ ಮನೆ ಮೇಲೆ ಬಟ್ಟೆ ಒಣ ಹಾಕುವ ವೇಳೆ ಮನೆಯ ಮುಂದೆ ಹಾದು ಹೋಗಿದ್ದ ಹೈಟೆನ್ಶನ್ ವೈರ್ ಬಟ್ಟೆಗೆ ತಗುಲಿ, ಸಚಿನ್ಗೆ ವಿದ್ಯುತ್ ಶಾಕ್ ಹೊಡೆದಿದ್ದು ಕೂಗಾಡಿದ್ದಾರೆ.
ಮನೆಯಲ್ಲಿದ್ದ ತಂದೆ ಶ್ಯಾಮ್ ಮೇಲೆ ಬಂದು ನೋಡಿದಾಗ ಮಗನಿಗೆ ವಿದ್ಯುತ್ ತಗುಲಿರುವುದು ಗೊತ್ತಾಗಿದೆ. ಕೂಡಲೇ ಮಗನನ್ನು ರಕ್ಷಿಸಲು ಶ್ಯಾಮ್ ಮುಂದಾದಾಗ ಅವರಿಗೂ ವಿದ್ಯುತ್ ಪ್ರವಹಿಸಿದೆ. ಘಟನೆಯಲ್ಲಿ ಸಚಿನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು, ಅಸ್ವಸ್ಥರಾಗಿದ್ದ ಶ್ಯಾಮ್ ಅವರನ್ನು ಕೂಡಲೇ ಸೊಲ್ಲಾಪುರದ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರು ಚಿಕಿತ್ಸೆ ಫಲಕಾರಿಯಾಗದೆ ಶ್ಯಾಮ್ ಭಂಡಾರೆ ಸಾವನ್ನಪ್ಪಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ಬಳಿಕ ಗ್ರಾಮದಲ್ಲೇ ಅಂತ್ಯಕ್ರಿಯೆ ಮಾಡುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: ಉಳ್ಳಾಲ: ಮಾವಿನ ಹಣ್ಣು ಕೀಳಲು ಮರ ಹತ್ತಿದ ಯುವಕ ವಿದ್ಯುತ್ ತಂತಿ ತಗುಲಿ ಸಾವು!