ETV Bharat / bharat

ಚೀನಾ ನಮ್ಮ ಭೂಮಿ ಆಕ್ರಮಿಸಿರುವುದು ಲಡಾಖ್‌ನ ಪ್ರತಿಯೊಬ್ಬರಿಗೂ ಗೊತ್ತಿದೆ: ರಾಹುಲ್ ಗಾಂಧಿ

author img

By ETV Bharat Karnataka Team

Published : Aug 25, 2023, 6:16 PM IST

Congress MP Rahul Gandhi address a public rally in Ladakh's Kargil
Congress MP Rahul Gandhi address a public rally in Ladakh's Kargil

ಲಡಾಖ್ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಸಾರ್ವಜನಿಕರೊಂದಿಗೆ ಕೆಲಕಾಲ ಸಂವಾದ ನಡೆಸಿದರು.

ಕಾರ್ಗಿಲ್ (ಲಡಾಖ್): "ಲಡಾಖ್‌ನಲ್ಲಿರುವ ಜನರ ‘ರಾಜಕೀಯ ಧ್ವನಿ’ಯನ್ನು ಹತ್ತಿಕ್ಕಲಾಗುತ್ತಿದೆ. ಹಾಗಾಗಿ ಸಂಸತ್ತಿನ ಮುಂಬರುವ ಅಧಿವೇಶನದಲ್ಲಿ ಇಲ್ಲಿನ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸುವೆ" ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇಂದು (ಶುಕ್ರವಾರ) ಭರವಸೆ ನೀಡಿದ್ದಾರೆ. ಕಳೆದ ಒಂಬತ್ತು ದಿನಗಳಿಂದ ಶಿಖರ ಪ್ರದೇಶ ಲಡಾಖ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಕೊನೆಯ ದಿನವಾದ ಇಂದು ಕಾರ್ಗಿಲ್‌ನ ಬೀಮಾತಂಗ್‌ನಲ್ಲಿ ನಡೆದ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು. "ಲಡಾಖ್ ಒಂದೇ ಧರ್ಮೀಯರಿರುವ ಜಾಗವಲ್ಲ, ವಿವಿಧ ಧರ್ಮ ಮತ್ತು ಜಾತಿಗಳ ಜನರಿರುವ ಜಾಗ" ಎಂದು ಲಾಡಾಖ್​ನ ವೈಶಿಷ್ಟ್ಯವನ್ನು ಹೊಗಳಿದರು.

  • #WATCH | Congress MP Rahul Gandhi in Kargil, Ladakh, "A few months ago, we walked from Kanyakumari to Kashmir, it was called 'Bharat Jodo Yatra. The aim was to stand against hatred & violence spread by BJP-RSS in the country...The message that came out of the Yatra was-'nafrat ke… pic.twitter.com/ES8fM0ouFQ

    — ANI (@ANI) August 25, 2023 " class="align-text-top noRightClick twitterSection" data=" ">

"ನಾನು ಲಡಾಖ್‌ನ ಮೂಲೆಮೂಲೆಗೆ ಹೋಗಿ ಯುವಕರು, ತಾಯಂದಿರು, ಸಹೋದರಿಯರು ಮತ್ತು ಬಡವರ ಜೊತೆ ಮಾತನಾಡಿದ್ದೇನೆ. ನಾನು ನಿಮ್ಮ 'ಮನ್ ಕಿ ಬಾತ್' ಕೇಳಬಯಸುತ್ತೇನೆ" ಎಂದು ಪ್ರಧಾನಿ ಮೋದಿ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

ಮುಂದುವರೆದು, "...ಲಡಾಖ್ ಒಂದು ಆಯಕಟ್ಟಿನ ಸ್ಥಳ. ಚೀನಾ ದೇಶ ಭಾರತದ ಸಾವಿರಾರು ಕಿಲೋಮೀಟರ್ ಭೂಮಿಯನ್ನು ಕಿತ್ತುಕೊಂಡಿದೆ. ಆದರೆ, ಲಡಾಖ್‌ನ ಒಂದಿಂಚೂ ಕೂಡ ಚೀನಾ ವಶಪಡಿಸಿಕೊಂಡಿಲ್ಲ ಎಂದು ಪ್ರತಿಪಕ್ಷದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿರುವುದು ಬೇಸರದ ಸಂಗತಿ. ಅವರ ಈ ಹೇಳಿಕೆ ಶುದ್ಧ ಸುಳ್ಳಿನಿಂದ ಕೂಡಿದೆ. ಆದರೆ, ಸತ್ಯ ಲಡಾಖ್‌ನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ಗೊತ್ತಿದೆ. ಇಲ್ಲಿನ ಜನರಿಗೆ ಉದ್ಯೋಗದ ಭರವಸೆ ನೀಡಿದ್ದರು. ಅದೂ ಕೂಡ ಸುಳ್ಳಾಗಿದೆ. ಹಾಗಾಗಿ ನಾನು ಲಡಾಖ್‌ನ ಪ್ರಮುಖ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತೇನೆ" ಎಂದು ಹೇಳಿದರು. ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್​ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

  • #WATCH | Congress MP Rahul Gandhi in Kargil, Ladakh says, "...Ladakh is a strategic location...One thing is very clear China has taken away India's land...It is sad that the PM in the opposition meeting said that not even an inch of Ladakh has been taken by China. This is a… pic.twitter.com/4oKeDZZAEv

    — ANI (@ANI) August 25, 2023 " class="align-text-top noRightClick twitterSection" data=" ">

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ದೇಶದಲ್ಲಿ ಹಿಂಸಾಚಾರ ಹರಡುವುದರಲ್ಲಿ ಮಗ್ನರಾಗಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕೈಗೊಂಡಿದ್ದ 'ಭಾರತ್ ಜೋಡೋ ಯಾತ್ರೆ' ಲಡಾಖ್‌ಗೆ ಬರಬೇಕಿತ್ತು. ಆದರೆ, ನಂತರ ಹವಾಮಾನ ವೈಪರೀತ್ಯವನ್ನು ಉಲ್ಲೇಖಿಸಿ ಅನುಮತಿ ನಿರಾಕರಿಸಲಾಗಿತ್ತು ಎಂದು ಅವರು ಇದೇ ವೇಳೆ ಹೇಳಿದರು.

  • लद्दाख के कोने-कोने में गया और युवाओं से, माताओं-बहनों से, ग़रीब लोगों से बात की।

    दूसरे नेता हैं जो सिर्फ़ अपने मन की बात करते हैं, मैं आपके मन की बात सुनना चाहता हूं।

    चीन ने हिंदुस्तान की हज़ारों कि.मी. ज़मीन छीन ली है। प्रधानमंत्री इस बात को नकार कर झूठ बोल रहे हैं, ये लद्दाख… pic.twitter.com/D6qo3WAmbM

    — Rahul Gandhi (@RahulGandhi) August 25, 2023 " class="align-text-top noRightClick twitterSection" data=" ">

ಚೀನಾ ದೇಶ ಭಾರತದ ಸಾವಿರಾರು ಕಿಲೋಮೀಟರ್ ಜಾಗವನ್ನು ಆಕ್ರಮಿಸಿಕೊಂಡಿದೆ ಎಂಬ ರಾಹುಲ್​ ಗಾಂಧಿ ಆರೋಪವನ್ನು ಬಿಜೆಪಿ ತಳ್ಳಿಹಾಕಿದೆ. ರಾಹುಲ್​ ಗಾಂಧಿ ಪದೇ ಪದೇ ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರಿಗೆ ಚೀನಾದ ಮೇಲೆ ಏಕೆ ಇಷ್ಟೊಂದು ಪ್ರೀತಿ ಇದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಇದು ರಾಜೀವ್ ಗಾಂಧಿ ಫೌಂಡೇಶನ್ ಪಡೆದ ನೆರವಿನ ಪರವಾಗಿದೆಯೇ ಎಂದು ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಪ್ರಶ್ನೆ ಮಾಡಿದ್ದಾರೆ. (ಪಿಟಿಐ)

ಇದನ್ನೂ ಓದಿ: ಲಡಾಖ್ ಪ್ರವಾಸದಲ್ಲಿ ರಾಹುಲ್ ಗಾಂಧಿ; ಕಾರ್ಗಿಲ್‌ನಲ್ಲಿ ಜನರೊಂದಿಗೆ ಸಂವಾದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.