ETV Bharat / bharat

ಲಖಿಂಪುರ್​ ಹಿಂಸಾಚಾರ: ಮೃತ ಕುಟುಂಬಕ್ಕೆ ಪಂಜಾಬ್​, ಛತ್ತೀಸ್​ಗಢ​ ಸರ್ಕಾರದಿಂದ 50 ಲಕ್ಷ ರೂ. ಪರಿಹಾರ

author img

By

Published : Oct 6, 2021, 4:22 PM IST

Lakhimpur violence
Lakhimpur violence

ಲಖಿಂಪುರ್ ಹಿಂಸಾಚಾರದಲ್ಲಿ ಸಾವನ್ನಪ್ಪಿರುವ ಮೃತರ ಕುಟುಂಬಕ್ಕೆ ಇದೀಗ ಪಂಜಾಬ್​, ಛತ್ತೀಸ್​ಗಢ ಸರ್ಕಾರ ತಲಾ 50 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿವೆ.

ಲಖನೌ(ಉತ್ತರ ಪ್ರದೇಶ): ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಉತ್ತರ ಪ್ರದೇಶದ ಲಖಿಂಪುರ್​ದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಹಿಂಸಾಚಾರ ಉಂಟಾಗಿ ರೈತರು ಸೇರಿದಂತೆ ಅನೇಕರು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಇದೀಗ ಮೃತ ರೈತರ ಕುಟುಂಬಸ್ಥರಿಗೆ ಛತ್ತೀಸ್​​ಗಢ ಹಾಗೂ ಪಂಜಾಬ್​ ಸರ್ಕಾರ ಪರಿಹಾರ ಘೋಷಣೆ ಮಾಡಿವೆ.

ಛತ್ತೀಸ್​ಗಢ ಹಾಗೂ ಪಂಜಾಬ್​ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಹಿಂಸಾಚಾರದ ವೇಳೆ ಸಾವಿಗೀಡಾಗಿರುವ ನಾಲ್ವರು ರೈತರು ಹಾಗೂ ಓರ್ವ ಪತ್ರಕರ್ತನ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಿವೆ.

ಲಖಿಂಪುರ್​ ಖೇರಿಯ ಹಿಂಸಾಚಾರ: ಉತ್ತರಪ್ರದೇಶದ ಲಖಿಂಪುರ್​ ಖೇರಿಯಲ್ಲಿ ನೂತನ ಕೃಷಿ ಕಾಯ್ಧೆಗಳ ವಿರುದ್ಧ ರೈತರು ಪ್ರತಿಭಟಿಸುತ್ತಿದ್ದರು. ಅಲ್ಲಿಗೆ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಅಜಯ್​ ಮಿಶ್ರಾ ಮತ್ತು ಉತ್ತರಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್​ ಮೌರ್ಯ ಭೇಟಿ ನೀಡಿದ್ದನ್ನ ವಿರೋಧಿಸಿ ರೈತರು ಲಖಿಂಪುರ್​ದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಅಲ್ಲದೇ, ರೈತರು ಉಪ ಮುಖ್ಯಮಂತ್ರಿಗೆ ಕಪ್ಪು ಬಾವುಟಗಳನ್ನು ತೋರಿಸಲು ಯೋಜಿಸಿದ್ದರು.

ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಎರಡು ಕಾರುಗಳು ಅವರ ಮೇಲೆ ಹರಿದು, ಕೆಲ ರೈತರು ಮೃತಪಟ್ಟಿದ್ದರು. ಈ ವೇಳೆ, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್​ ಮಿಶ್ರಾ ಒಂದು ಕಾರಿನಲ್ಲಿದ್ದರು ಎಂದು ಆರೋಪಿಸಲಾಗಿದೆ. ಪರಿಣಾಮ ಹೋರಾಟಗಾರರು ಬಿಜೆಪಿ ಕಾರ್ಯಕರ್ತರ ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿ ವಾಹನಗಳನ್ನು ಉರುಳಿಸಿದರು. ಈ ವೇಳೆ, ನಾಲ್ವರು ರೈತರು ಸೇರಿದಂತೆ ಒಟ್ಟು 8 ಮಂದಿ ಮೃತಪಟ್ಟಿದ್ದರು.

ಇದನ್ನೂ ಓದಿರಿ: ಕಿಡ್ನಾಪ್​ ಕೇಸ್​​ ಕೊನೆಗೂ ಸುಖಾಂತ್ಯ: ಆರು ವರ್ಷದ ನಂತರ ಪೋಷಕರ ಮಡಿಲು ಸೇರಿದ ಬಾಲಕಿ!

ಈ ಘಟನೆಗೆ ಈಗಾಗಲೇ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್​​ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನೆಯಲ್ಲಿ ಭಾಗಿಯಾಗಲು ಮುಂದಾಗಿದ್ದ ಪ್ರಿಯಾಂಕಾ ಗಾಂಧಿ ಹಾಗೂ ನವಜೋತ್ ಸಿಂಗ್ ಸಿಧುಗೆ ಈಗಾಗಲೇ ಬಂಧನ ಮಾಡಿ, ಗೃಹಬಂಧನದಲ್ಲಿಡಲಾಗಿದೆ.

  • #WATCH | Congress leader Rahul Gandhi asks police officials at Lucknow airport "under which rule are you deciding how I'll go? Just tell me the rule."

    Gandhi is leading a Congress delegation to violence-hit Lakhimpur Kheri pic.twitter.com/X0HeOzQB5e

    — ANI (@ANI) October 6, 2021 " class="align-text-top noRightClick twitterSection" data=" ">

ಹಿಂಸಾಚಾರ ಸ್ಥಳಕ್ಕೆ ರಾಹುಲ್ ಗಾಂಧಿ ಭೇಟಿ

ಲಖಿಂಪುರ್ ಹಿಂಸಾಚಾರ ನಡೆದ ಸ್ಥಳಕ್ಕೆ ಭೇಟಿ ನೀಡಲು ರಾಹುಲ್​ ಗಾಂಧಿ ಮುಂದಾಗಿದ್ದು, ಅವರನ್ನ ಲಖನೌ ಏರ್​ಪೋರ್ಟ್​ನಲ್ಲಿ ತಡೆಯಲಾಗಿತ್ತು. ಆದರೆ, ಇದೀಗ ಅನುಮತಿ ನೀಡಿರುವ ಕಾರಣ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ, ಅವರು ಗೃಹಬಂಧನದಲ್ಲಿರುವ ಪ್ರಿಯಾಂಕಾ ಗಾಂಧಿ ಭೇಟಿಯಾಗಲಿದ್ದಾರೆಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.