ETV Bharat / bharat

ಕಿಡ್ನಾಪ್​ ಕೇಸ್​​ ಕೊನೆಗೂ ಸುಖಾಂತ್ಯ: ಆರು ವರ್ಷದ ನಂತರ ಪೋಷಕರ ಮಡಿಲು ಸೇರಿದ ಬಾಲಕಿ!

author img

By

Published : Oct 6, 2021, 3:38 PM IST

ಸುಮಾರು ಆರು ವರ್ಷಗಳ ಹಿಂದೆ ಬಾಲಕಿ ಅಪಹರಣವಾಗಿದ್ದ ಪ್ರಕರಣ ಇದೀಗ ಸುಖ್ಯಾಂತ ಕಂಡಿದ್ದು, ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Girl Kidnap case Visakhapatnam
Girl Kidnap case Visakhapatnam

ವಿಶಾಖಪಟ್ಟಣಂ(ಆಂಧ್ರಪ್ರದೇಶ): ಸುಮಾರು ಆರು ವರ್ಷಗಳ ಹಿಂದೆ ಬಾಲಕಿ ಅಪಹರಣ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದ್ದು, ಇದೀಗ ಬಾಲಕಿ ಪೋಷಕರ ಮಡಿಲು ಸೇರಿದೆ. ವಿಶಾಖಪಟ್ಟಣಂ ಜಿಲ್ಲೆಯ ಚೋಡಾವರಂ ಪಟ್ಟಣದ ಖಾಸಗಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡ್ತಿದ್ದ ವಿದ್ಯಾರ್ಥಿನಿಯನ್ನ 2015ರ ಜೂನ್​ 26ರಂದು ಅದೇ ಶಾಲೆಯ ಶಿಕ್ಷಕ ಕೊಯ್ಯನ ತಿರುಪತಿರಾವ್​ ಅಪಹರಣ ಮಾಡಿದ್ದನು.

ವಿಶಾಖಪಟ್ಟಣಂದಿಂದ ದೆಹಲಿಗೆ ತೆರಳಿ ಅಲ್ಲಿಂದ ರಾಜಸ್ಥಾನಕ್ಕೆ ತೆರಳಿದ್ದರು. ಇದಾದ ಬಳಿಕ ಹರಿಯಾಣಕ್ಕೆ ಪ್ರವಾಸ ಕೈಗೊಂಡು ತದನಂತರ ತೆಲಂಗಾಣದ ನಿಜಾಮಾಬಾದ್​​ಗೆ ಬಂದಿದ್ದರು. ಇದಾದ ಬಳಿಕ ಸದ್ಯ ರಾಜಸ್ಥಾನದ ಜೋಗಿಘಟ್ಟದಲ್ಲಿ ವಾಸವಾಗಿದ್ದರು.

ಹೈಕೋರ್ಟ್​ ಮೆಟ್ಟಿಲೇರಿದ್ದ ಪ್ರಕರಣ

ಬಾಲಕಿ ಅಪಹರಣಗೊಂಡಾಗಿನಿಂದಲೂ ಪೋಷಕರು ಅನೇಕ ಪ್ರಯತ್ನ ಮಾಡಿದ್ದರು. ಪೊಲೀಸರು ಪ್ರಕರಣದ ಬಗ್ಗೆ ಹೆಚ್ಚಿನ ಆಸಕ್ತಿ ತೋರದ ಕಾರಣ 2017ರಲ್ಲಿ ತಂದೆ ಮೇಲಧಿಕಾರಿಗಳಿಗೆ ದೂರು ನೀಡಿದ್ದರು. ಹೀಗಾಗಿ ಪ್ರಕರಣ ಸಿಬಿಸಿಐಡಿಗೆ ಹಸ್ತಾಂತರಗೊಂಡಿತ್ತು. ಆದರೆ, ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಯುತ್ತಿಲ್ಲ ಎಂದು ಬಾಲಕಿ ತಂದೆ ಹೈಕೋರ್ಟ್​ ಮೆಟ್ಟಿಲೇರಿದ್ದರು.

ಅಪಹರಣಕಾರ ಪತ್ತೆಯಾಗಿದ್ದು ಹೇಗೆ?

ಬಾಲಕಿ ಅಪಹರಣ ಮಾಡಿದ್ದ ತಿರುಪತಿರಾವ್​, ರಾಜಸ್ಥಾನದ ಆಳ್ವಾರ್​ ಜಿಲ್ಲೆಯ ಜೋಗಿಘಟ್ಟದದಲ್ಲಿ ವಾಸವಾಗಿದ್ದನು. ಜೀವನೋಪಾಯಕ್ಕಾಗಿ ಈ ಪಾಠ ಮಾಡುತ್ತಿದ್ದನು. ಇವರಿಗೆ ಈಗಾಗಲೇ ಐದು ಹಾಗೂ ಮೂರು ವರ್ಷದ ಗಂಡು ಮಕ್ಕಳಿದ್ದಾರೆ.

ಇದರ ಮಧ್ಯೆ ತಿರುಪತಿರಾವ್​ ಬ್ಯಾಂಕ್​ ಸಾಲಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದ್ದನು. ಈ ವೇಳೆ ಪ್ಯಾನ್​​ ಕಾರ್ಡ್​ ನೀಡಿದ್ದರಿಂದ ಆತನ ವಿಳಾಸ ಪತ್ತೆ ಹಚ್ಚಲಾಗಿದೆ. ರಾಜಸ್ಥಾನಕ್ಕೆ ತೆರಳಿರುವ ವಿಶೇಷ ಪೊಲೀಸ್ ತಂಡ ಅಲ್ಲಿನ ಸ್ಥಳೀಯ ಪೊಲೀಸರ ಸಹಾಯದೊಂದಿಗೆ ಆತನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿರಿ: ಔಷಧ ತಯಾರಿಕ ಕಂಪನಿ ಮೇಲೆ IT ದಾಳಿ.. ಮುಂದುವರಿದ ಶೋಧಕಾರ್ಯ

ಅಪಹರಣಕ್ಕೆ ಕಾರಣ ಏನೆಂಬುದು ಗೊತ್ತಾಗಿಲ್ಲ

ಬಾಲಕಿಯನ್ನ ಯಾವ ಕಾರಣಕ್ಕಾಗಿ ಆತ ಅಪಹರಣ ಮಾಡಿದ್ದಾನೆಂಬ ಮಾಹಿತಿ ಇಲ್ಲಿಯವರೆಗೆ ಲಭ್ಯವಾಗಿಲ್ಲ. ಆದರೆ, ಸುಮಾರು 6 ವರ್ಷಗಳ ನಂತರ ಅಪಹರಣವಾಗಿದ್ದ ಬಾಲಕಿ ಪೋಷಕರ ಮಡಿಲು ಸೇರಿದ್ದು, ಕುಟುಂಬಸ್ಥರಲ್ಲಿ ಖುಷಿ ಮನೆ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.