ETV Bharat / bharat

ಪ್ರತಿಪಕ್ಷ ಸಂಸದರ ಐಫೋನ್​ ಹ್ಯಾಕ್ ಯತ್ನ ಆರೋಪ: ಆ್ಯಪಲ್​ ಸಂಸ್ಥೆ ಹೇಳಿದ್ದೇನು?

author img

By ETV Bharat Karnataka Team

Published : Oct 31, 2023, 4:57 PM IST

Updated : Oct 31, 2023, 7:48 PM IST

Cant attribute threat notifications to any specific state sponsored attacker: Apple on Opposition MPs  claims
ಸರ್ಕಾರಿ ಪ್ರಾಯೋಜಿತ ದಾಳಿಕೋರರಿಂದ ಪ್ರತಿಪಕ್ಷಗಳ ಸಂಸದರ ಐಫೋನ್​ಗಳ ಹ್ಯಾಕ್ ಯತ್ನ ಆರೋಪ: ಆ್ಯಪಲ್​ ಸಂಸ್ಥೆ ಹೇಳಿದ್ದೇನು?

ತಮ್ಮ ಐಫೋನ್​ಗಳ ಹ್ಯಾಕ್ ಯತ್ನ ನಡೆದಿದೆ​ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಕಾಂಗ್ರೆಸ್ ಸಂಸದ ಶಶಿ ತರೂರ್ ಸೇರಿದಂತೆ ಪ್ರತಿಪಕ್ಷಗಳ ನಾಯಕರ ಆರೋಪಗಳಿಗೆ ಆ್ಯಪಲ್​ ಸಂಸ್ಥೆ ಸ್ಪಷ್ಟನೆ ನೀಡಿದೆ.

ನವದೆಹಲಿ: ತಮ್ಮ ಐಫೋನ್​ಗಳ​ ಹ್ಯಾಕ್​ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಕಾಂಗ್ರೆಸ್​, ಟಿಎಂಸಿ ಸೇರಿದಂತೆ ಇತರ ಪ್ರತಿಪಕ್ಷಗಳ ಸಂಸದರು ಹಾಗೂ ನಾಯಕರ ಆರೋಪ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ ಐಫೋನ್ ತಯಾರಕ ಆ್ಯಪಲ್​ ಪ್ರತಿಕ್ರಿಯಿಸಿದೆ. ''ಯಾವುದೇ ನಿರ್ದಿಷ್ಟ ರಾಜ್ಯ ಪ್ರಾಯೋಜಿತ ದಾಳಿಕೋರರ ಬಗ್ಗೆ ಎಚ್ಚರಿಕೆಯ ಸೂಚನೆಯನ್ನು ಆ್ಯಪಲ್​ ನೀಡುವುದಿಲ್ಲ'' ಎಂದು ಹೇಳಿದೆ.

  • Can't attribute threat notifications to any specific state-sponsored attacker: Apple on Opposition MPs' claims of receiving hacking warnings

    — Press Trust of India (@PTI_News) October 31, 2023 " class="align-text-top noRightClick twitterSection" data=" ">

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತು ಉದ್ಧವ್​ ಠಾಕ್ರೆ ಬಣದ ಶಿವಸೇನೆಯ ರಾಜ್ಯಸಭೆ ಸದಸ್ಯೆ ಪ್ರಿಯಾಂಕಾ ಚತುರ್ವೇದಿ, ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಸೇರಿ ಇತರರು ಇಂದು ಬೆಳಿಗ್ಗೆ ರಾಜ್ಯ ಪ್ರಾಯೋಜಿತ ದಾಳಿಕೋರರು ತಮ್ಮ ಐಫೋನ್​ಗಳ ಹ್ಯಾಕ್ ಮಾಡಲು ಯತ್ನಿಸಿದ್ದಾರೆ​ ಎಂದು ಆರೋಪಿಸಿ, ಆ್ಯಪಲ್​ ಸಂಸ್ಥೆಯಿಂದ ಸ್ವೀಕರಿಸಿದ ಎಚ್ಚರಿಕೆ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

  • Attackers well-funded, sophisticated; detecting attacks often imperfect and incomplete: Apple on Opposition MPs' allegations

    — Press Trust of India (@PTI_News) October 31, 2023 " class="align-text-top noRightClick twitterSection" data=" ">

ಈ ಕುರಿತು ಆ್ಯಪಲ್​ ಹೇಳಿಕೆ ಬಿಡುಗಡೆ ಮಾಡಿ, ''ನಿರ್ದಿಷ್ಟ ರಾಜ್ಯ ಪ್ರಾಯೋಜಿತ ದಾಳಿಕೋರರ ಬಗ್ಗೆ ಆ್ಯಪಲ್​ ಎಚ್ಚರಿಕೆಯ ಸೂಚನೆ ನೀಡುವುದಿಲ್ಲ'' ಎಂದು ತಿಳಿಸಿದೆ.

ಅದಾನಿ ಪ್ರಕರಣದ ಹಿನ್ನೆಲೆಯಲ್ಲಿ ಗೂಢಾಚಾರಿಕೆ- ರಾಹುಲ್​ ಗಾಂಧಿ ಆರೋಪ: ಮತ್ತೊಂದೆಡೆ, ಸಂಸದರು ಹಾಗೂ ನಾಯಕರಿಗೆ ಆ್ಯಪಲ್​ ಎಚ್ಚರಿಕೆ ಸಂದೇಶ ರವಾನಿಸಿದ ವಿಷಯ ಬೆಳಕಿಗೆ ಬಂದ ಬೆನ್ನಲ್ಲೇ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಪತ್ರಿಕಾಗೋಷ್ಠಿ ನಡೆಸಿದರು. ''ಉದ್ಯಮಿ ಅದಾನಿ ವಿಷಯವನ್ನು ಮುಟ್ಟಿದ ಕೂಡಲೇ ಪ್ರತಿಪಕ್ಷಗಳ ನಾಯಕರ ಮೇಲೆ ತನಿಖಾ ಸಂಸ್ಥೆಗಳಿಂದ ಗೂಢಾಚಾರಿಕೆ ನಡೆಯುತ್ತಿದೆ'' ಎಂದು ಆರೋಪಿಸಿದರು.

  • VIDEO | Congress leader Rahul Gandhi shows a 'warning message' from Apple, claims party leaders like K C Venugopal, Pawan Khera, several other opposition leaders received it. pic.twitter.com/6MduB2O0g5

    — Press Trust of India (@PTI_News) October 31, 2023 " class="align-text-top noRightClick twitterSection" data=" ">

''ನಾವು ಹೆದರುವುದಿಲ್ಲ. ನೀವು ಎಷ್ಟು ಬೇಕಾದರೂ (ಫೋನ್​) ಟ್ಯಾಪಿಂಗ್ ಮಾಡಬಹುದು. ನನ್ನ ಫೋನ್ ಬೇಕಾದರೆ, ನಿಮಗೆ ಕೊಡುತ್ತೇನೆ. ಈ ಹಿಂದೆ ನಂ.1 ಪ್ರಧಾನಿ ಮೋದಿ, ನಂ.2 ಅದಾನಿ ಹಾಗೂ ನಂ.3 ಅಮಿತ್​ ಶಾ ಎಂದು ನಾನು ಭಾವಿಸಿದ್ದೆ. ಆದರೆ, ಅದು ಹಾಗಲ್ಲ. ನಂ.1 ಅದಾನಿ, ನಂ.2 ಪ್ರಧಾನಿ ಮೋದಿ ಮತ್ತು ನಂ.3 ಅಮಿತ್​ ಶಾ ಆಗಿದ್ದಾರೆ. ನರೇಂದ್ರ ಮೋದಿಯವರ ಆತ್ಮ ಅದಾನಿ ಬಳಿ ಇದೆ. ಸತ್ಯವೆಂದರೆ ಅಧಿಕಾರ ಬೇರೆಯವರ ಕೈಯಲ್ಲಿದೆ. ಅದಾನಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಾವು ಅವರನ್ನು ಸುತ್ತುವರೆದಿದ್ದೇವೆ'' ಎಂದರು.

  • In light of such information and widespread speculation, we have also asked Apple to join the investigation with real, accurate information on the alleged state sponsored attacks. (5/5)

    — Ashwini Vaishnaw (@AshwiniVaishnaw) October 31, 2023 " class="align-text-top noRightClick twitterSection" data=" ">

ತನಿಖೆಗೆ ಒಳಪಡಲು ಆ್ಯಪಲ್​ಗೆ ಸೂಚನೆ-ಐಟಿ ಸಚಿವ: ಇದೇ ವಿಷಯವಾಗಿ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಪ್ರತಿಕ್ರಿಯಿಸಿ, ''ಭಾರತ ಸರ್ಕಾರ ಎಲ್ಲ ನಾಗರಿಕರ ಗೌಪ್ಯತೆ ಮತ್ತು ಭದ್ರತೆಯನ್ನು ರಕ್ಷಿಸುವ ತನ್ನ ಪಾತ್ರವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ.ಆಪಾದಿತ ದಾಳಿಗಳ ಕುರಿತು ನೈಜ, ನಿಖರ ಮಾಹಿತಿಯೊಂದಿಗೆ ತನಿಖೆಗೆ ಆ್ಯಪಲ್​ ಸಂಸ್ಥೆಗೆ ಸೂಚಿಸಿದ್ದೇವೆ'' ಎಂದು 'ಎಕ್ಸ್​'ನಲ್ಲಿ ಪೋಸ್ಟ್​ ಮಾಡಿದ್ಧಾರೆ.

ಇದನ್ನೂ ಓದಿ: 'ನಮ್ಮ ಐಫೋನ್‌ಗಳ ಮೇಲೆ ರಾಜ್ಯ ಪ್ರಾಯೋಜಿತ ದಾಳಿಯ ಎಚ್ಚರಿಕೆ ಸಂದೇಶ ಸ್ವೀಕರಿಸಿದ್ದೇವೆ'; ಪ್ರತಿಪಕ್ಷ ನಾಯಕರ ಹೇಳಿಕೆ

Last Updated :Oct 31, 2023, 7:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.