ETV Bharat / bharat

ರಕ್ಷಣೆಗೆ ಮಾತ್ರ ರಫೇಲ್, ದಾಳಿ ಮಾಡಲು ಅಲ್ಲ: ರಾಜನಾಥ್ ಸಿಂಗ್

author img

By

Published : Oct 9, 2019, 7:57 AM IST

ಒಂದು ದಿನ ನಾನು ಇಂತಾ ಸೂಪರ್​ ಸಾನಿಕ್ ವಿಮಾನದಲ್ಲಿ ಹಾರಾಟ ನಡೆಸುತ್ತೇನೆ ಎಂದು ಅಂದುಕೊಂಡಿರಲಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್

ಫ್ರಾನ್ಸ್: ಹಲವು ವಿವಾದದ ನಡುವೆ ರಫೇಲ್​ ಯುದ್ಧ ವಿಮಾನ ಭಾರತೀಯ ವಾಯುಪಡೆ ಬತ್ತಳಿಕೆಗೆ ಸೇರಿಕೊಂಡಿದೆ. ಮೊದಲ ಯುದ್ಧ ವಿಮಾನವನ್ನ ಫ್ರಾನ್ಸ್​ನ ಡಸಾಲ್ಟ್‌ ಸಂಸ್ಥೆ ಭಾರತಕ್ಕೆ ಹಸ್ತಾಂತರಿಸಿದೆ.

ರಾಜನಾಥ್ ಸಿಂಗ್, ರಕ್ಷಣಾ ಸಚಿ

ಮೊದಲ ರಫೇಲ್ ಯುದ್ಧ ವಿಮಾನದಲ್ಲಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಹಾರಾಟ ನಡೆಸಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಇದೊಂದು ಐತಿಹಾಸಿಕ ದಿನವಾಗಿದೆ. ರಫೇಲ್ ಯುದ್ಧ ವಿಮಾನವು ಭಾರತೀಯ ವಾಯುಪಡೆಯ ಬಲವನ್ನ ಹೆಚ್ಚಿಸಲಿದೆ ಎಂದಿದ್ದಾರೆ.

ರಫೇಲ್​ನಿಂದ ನಮ್ಮ ವಾಯು ಪಡೆಯ ಶಕ್ತಿ ಹೆಚ್ಚಾಗಿದೆ. ಆದರೆ ಈ ಶಕ್ತಿ ಇತರರ ಮೇಲೆ ದಾಳಿ ಮಾಡಲು ನಮ್ಮನ್ನ ರಕ್ಷಣೆ ಮಾಡಿಕೊಳ್ಳಲು. ಇದರ ಸಂಪೂರ್ಣ ಕ್ರೆಡಿಟ್ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಸಲ್ಲುತ್ತದೆ ಎಂದಿದ್ದಾರೆ. ಇನ್ನು ರಫೇಲ್​ ವಿಮಾನದಲ್ಲಿ ಹಾರಾಟ ನಡೆಸಿದ ರಾಜನಾಥ್ ಸಿಂಗ್, ಇಂದೊಂದು ತುಂಬಾ ಆರಾಮದಾಯಕ ಯುದ್ಧ ವಿಮಾನವಾಗಿದೆ. ಒಂದು ದಿನ ನಾನು ಇಂತಾ ಸೂಪರ್​ ಸಾನಿಕ್ ವಿಮಾನದಲ್ಲಿ ಹಾರಾಟ ನಡೆಸುತ್ತೇನೆ ಎಂದು ಅಂದುಕೊಂಡಿರಲಿಲ್ಲ ಎಂದಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.