ETV Bharat / bharat

'ರಕ್ಷಿಸಿದ ಪ್ರತಿಮೆಗಳು ನಾಶವಾದರೆ ನಾವು ತಾಲಿಬಾನ್​ ಆಗುತ್ತೇವೆ': ಗೋಡ್ಸೆ ವಿವಾದಕ್ಕೆ ಉದ್ಯಮಿ ಆನಂದ್​ ಮಹೀಂದ್ರ ಟ್ವೀಟ್​

author img

By

Published : May 17, 2019, 8:07 PM IST

Updated : May 17, 2019, 8:12 PM IST

ಚಿತ್ರ ಕೃಪೆ: ಟ್ವಿಟ್ಟರ್​​

ಗೋಡ್ಸೆ ವಿವಾದದ ಬಗ್ಗೆ ಉದ್ಯಮಿ ಮಹೀಂದ್ರ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರ ಅವರು ಪ್ರಸ್ತುತ ಸನ್ನಿವೇಶವನ್ನು ನಾಜೂಕಾಗಿ ವಿವರಿಸಿ ಟ್ವೀಟ್​ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

ನವದೆಹಲಿ: ಸಾರ್ವತ್ರಿಕ ಚುನಾವಣೆ ಅಂತಿಮ ಹಂತ ತಲುಪುವ ವೇಳೆಗೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಕುರಿತು ವರಿಷ್ಠ ರಾಜಕಾರಣಿಗಳಿಂದ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ.

ಈ ಬಗ್ಗೆ ಉದ್ಯಮಿ ಮಹೀಂದ್ರ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರ ಅವರು ಪ್ರಸ್ತುತ ಸನ್ನಿವೇಶವನ್ನು ನಾಜೂಕಾಗಿ ವಿವರಿಸಿ ಟ್ವೀಟ್​ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

ನಟ/ ರಾಜಕಾರಣಿ ಕಮಲ್ ಹಾಸನ್​ ಅವರು ಈಚೆಗೆ,' ಸ್ವತಂತ್ರ ಭಾರತದ ಮೊದಲ ಹಿಂದೂ ಉಗ್ರ, ಗಾಂಧಿ ಹತ್ಯೆಯ ಹಂತಕ ನಾಥೂರಾಮ್ ಗೋಡ್ಸೆ' ಎಂದು ಟೀಕಿಸಿದ್ದರು. ಪ್ರತಿಯಾಗಿ ಬಿಜೆಪಿಯ ಭೋಪಾಲ್ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್​ ಅವರು 'ಗೋಡ್ಸೆ ಒಬ್ಬ ದೇಶಭಕ್ತ' ಎಂದು ಬಣ್ಣಿಸಿ ವಿವಾದಕ್ಕೀಡಾಗಿದ್ದರು.

  • For 75 yrs,India’s been the land of the Mahatma;a beacon when the world lost its morality.We used to be pitied for being poor but we were always rich since Bapu inspired billions globally.Some things must remain sacred.Or we become the Taliban,destroying statues that sustain us

    — anand mahindra (@anandmahindra) May 17, 2019 " class="align-text-top noRightClick twitterSection" data=" ">

''75 ವರ್ಷಗಳ ತನಕ ಭಾರತವು ಮಹಾತ್ಮ ಅವರ ಭೂಮಿಯಾಗಿದೆ. ಇಡೀ ಪ್ರಪಂಚ ತನ್ನ ನೈತಿಕತೆಯನ್ನು ಕಳೆಕೊಂಡಾಗ ಅವರು ಭರವಸೆಯ ಬೆಳಕಾಗಿ ಮೂಡಿದ್ದರು. ಬಡವರಾಗಿದ್ದಕ್ಕೆ ನಮ್ಮ ಬಗ್ಗೆ ಕನಿಕರ ಪಡಲಾಗುತ್ತಿತ್ತು. ಆದರೆ, ವಿಶ್ವದಾದ್ಯಂತ ಕೋಟ್ಯಾಂತರ ಜನರಿಗೆ ಸ್ಫೂರ್ತಿಯಾದ ಬಾಪು ಅವರು ಇದ್ದಿದ್ದರಿಂದ ನಾವು ಶ್ರೀಮಂತರಾಗಿದ್ದೇವೆ. ಕೆಲ ವಿಚಾರಗಳು ಯಾವಾಗಲೂ ಪವಿತ್ರವಾಗಿರಬೇಕು. ಇಲ್ಲದೇ ಹೋದರೆ ನಮ್ಮನ್ನು ರಕ್ಷಿಸುತ್ತಿದ್ದ ಪ್ರತಿಮೆಗಳನ್ನು ನಾಶಗೊಳಿಸತ್ತಾ... ನಾವು ತಾಲಿಬಾನ್​ ಆಗಿ ಬಿಡುತ್ತೇವೆ'' ಎಂದು ಮಾರ್ಮಿಕವಾಗಿ ಟ್ವೀಟ್​ ಮಾಡಿದ್ದಾರೆ.

Intro:Body:Conclusion:
Last Updated :May 17, 2019, 8:12 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.