ತಿರುಪತಿ (ಆಂಧ್ರಪ್ರದೇಶ): ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲ್ಲ, ಇಂದು ತಿರುಪತಿ ತಿರುಮಲ ದೇವಸ್ಥಾನಕ್ಕೆ 2 ಕೋಟಿ ರೂಪಾಯಿ ದೇಣಿಗೆಯಾಗಿ ನೀಡಿದ್ದಾರೆ.
ವೈಕುಂಠ ಏಕಾದಶಿ ನಿಮಿತ್ತ ಈ ದೇಣಿಗೆಯನ್ನು ನೀಡಿದ್ದಾರೆ. ಕೃಷ್ಣ ಎಲ್ಲ ಮತ್ತು ಪತ್ನಿ ಸುಚಿತ್ರ ತಿರುಪತಿ ದೇವಸ್ಥಾನದ (ಟಿಟಿಡಿ) ಅಧ್ಯಕ್ಷ ವೈ.ವಿ ಸುಬ್ಬಾ ರೆಡ್ಡಿ ಅವರಿಗೆ ಎರಡು ಕೋಟಿ ರೂಪಾಯಿಗಳ ಚೆಕ್ ಹಸ್ತಾಂತರಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಹಣವನ್ನು ದೇವಸ್ಥಾನದ ಅನ್ನಪ್ರಸಾದಕ್ಕೆ ಬಳಸಿಕೊಳ್ಳುವಂತೆ ಟಿಟಿಡಿಗೆ ಮನವಿ ಮಾಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಬವೈಕುಂಠ ಏಕಾದಶಿ: ತಿರುಪತಿ ವೆಂಕಟೇಶ್ವರನ ದರ್ಶನ ಪಡೆದ ಸಿಜೆಐ ಎನ್ವಿ ರಮಣ
ವೈಕುಂಠ ಏಕಾದಶಿಯ ಈ ಶುಭದಿನದಂದು ಕೃಷ್ಣ ಎಲ್ಲ ದಂಪತಿ ತಿರುಮಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯ ಆಡಳಿತ ಮಂಡಳಿ ಇತರ ವಸ್ತುಗಳ ಜೊತೆಗೆ ಪವಿತ್ರ ರೇಷ್ಮೆ ಬಟ್ಟೆಯನ್ನು ಅವರಿಗೆ ನೀಡಿತು.