ETV Bharat / bharat

ಪ್ರಧಾನಿ ಮೋದಿ ವಿರುದ್ಧ ಆರೋಪ, ಈ ಬಾರಿ ರಾಹುಲ್​ ಗಾಂಧಿ ವಿರುದ್ಧ ಕ್ರಮ; ಪ್ರಹ್ಲಾದ್​​ ಜೋಶಿ

author img

By

Published : Feb 13, 2023, 3:24 PM IST

ಪ್ರಧಾನಿ ಮೋದಿ ವಿರುದ್ಧ ಆರೋಪ, ಈ ಬಾರಿ ರಾಹುಲ್​ ಗಾಂಧಿ ವಿರುದ್ಧ ಕ್ರಮ; ಪ್ರಲ್ಹಾದ್​ ಜೋಶಿ
ಪ್ರಧಾನಿ ಮೋದಿ ವಿರುದ್ಧ ಆರೋಪ, ಈ ಬಾರಿ ರಾಹುಲ್​ ಗಾಂಧಿ ವಿರುದ್ಧ ಕ್ರಮ; ಪ್ರಲ್ಹಾದ್​ ಜೋಶಿ

ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಬಳಿಕ ಮಾತನಾಡಿದ ರಾಹುಲ್​ ಗಾಂಧಿ, ಹಿಡನ್​ ಬರ್ಗ್​ ವರದಿ ಉಲ್ಲೇಖಿಸಿ ನರೇಂದ್ರ ಮೋದಿ ವಿರುದ್ಧ ಆರೋಪ ಮಾಡಿದ್ದರು.

ನವದೆಹಲಿ: ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅಸಂಸದೀಯ ಪದ ಬಳಕೆ ಮಾಡಿದ ಹಿನ್ನಲೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಗೆ ನೋಟಿಸ್​ ಜಾರಿ ಮಾಡಲಾಗಿತ್ತು. ಈ ಬಾರಿ ಅವರ ವಿರುದ್ಧ ಕ್ರಮಕ್ಕೆ ಮುಂದಾಗಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಜೋಶಿ ಅವರು, ಪ್ರಧಾನ ಮಂತ್ರಿ ವಿರುದ್ಧ ಆಧಾರ ರಹಿತ ಆರೋಪ ಮಾಡಿದ ಹಿನ್ನೆಲೆ ನಶಿಕಾಂತ್​​ ದುವೆ ಅವರು ರಾಹುಲ್​ ಗಾಂಧಿಗೆ ನೋಟಿಸ್​ ಜಾರಿ ಮಾಡಿದ್ದಾರೆ. ಅವರು ಸಂಸತ್ತಿನಲ್ಲಿ ಏನು ಹೇಳಿದ್ದಾರೋ ಅದಕ್ಕೆ ಸಾಕ್ಷಿ ಒದಗಿಸಬೇಕು. ಆದರೆ, ಇದುವರೆಗೆ ಯಾವುದೇ ಸಾಕ್ಷಿಯನ್ನು ಅವರು ಒದಗಿಸಿಲ್ಲ. ನಾವು ಈ ದೇಶದ ಜನರಿಗೆ ಉತ್ತರಿಸಬೇಕಾಗಿದೆ. ಈ ಹಿನ್ನಲೆ ಈ ಬಾರಿ ನೋಟಿಸ್​ ಜಾರಿಯಾಗಿದ್ದು , ಕ್ರಮಕ್ಕೆ ಮುಂದಾಗುತ್ತೇವೆ ಎಂದಿದ್ದಾರೆ.

ದುಬೆ ಕಳುಹಿಸಿರುವ ಪತ್ರದಲ್ಲಿ ಏನಿದೆ?: ಫೆಬ್ರವರಿ 8ರಂದು ದುಬೆ ಅವರು ಲೋಕಸಭಾ ಸ್ಪೀಕರ್​ ಓಂ ಬಿರ್ಲಾ ಅವರಿಗೆ ಪತ್ರ ಕಳುಹಿಸಿದ್ದರು. ಈ ಪತ್ರದಲ್ಲಿ ಕಾಂಗ್ರೆಸ್​ ಸಂಸದರು ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಪ್ರಧಾನಿ ಹಾಗೂ ಸದನಕ್ಕೆ ಅವಹೇಳನಕಾರಿ, ಅಸಭ್ಯ, ಅಸಂಸದೀಯ, ಘನತೆಯಿಲ್ಲದಂತೆ ವರ್ತಿಸುತ್ತಿದ್ದಾರೆ. ಸದನದಲ್ಲಿ ಹೇಳಿಕೆ ನೀಡಿದ ರಾಹುಲ್​ ಗಾಂಧಿ ಇದಕ್ಕೆ ಪೂರಕವಾದ ಯಾವುದೇ ಸಾಕ್ಷಿಯನ್ನು ಒದಗಿಸಿಲ್ಲ. ಅವರ ಹೇಳಿಕೆಯನ್ನು ಬೆಂಬಲಸುವ ಯಾವುದೇ ದಾಖಲಾತಿಗಳು ಕೂಡ ಇಲ್ಲ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕಾಂಗ್ರೆಸ್​ ಸಂಸದರು ಸರಿಯಾದ ಪುರಾವೆ ಇಲ್ಲದೇ ಸದನವನ್ನು ತಪ್ಪು ದಾರಿಗೆ ಎಳೆಯುವುದರ ಜೊತೆಗೆ ಅವರು ಪ್ರಧಾನಿ ಅವರ ವರ್ಚಸ್ಸಿಗೆ ಧಕ್ಕೆ ತರುವ ಯತ್ನ ನಡೆಸುತ್ತಿದ್ದಾರೆ. ಅವರ ಈ ವರ್ತನೆ ಸದನ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಸದನದ ಅವಹೇಳನ ನಡೆಸುತ್ತಿರುವ ಹಿನ್ನಲೆ ರಾಹುಲ್ ಗಾಂಧಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ದುಬೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

ರಾಹುಲ್​ ಗಾಂಧಿ ಮಾಡಿದ್ದ ಆರೋಪ ಏನು?: ಫೆ 7ರಂದು ಹಿಂಡನ್​ ಬರ್ಗ್​​ ವರದಿ ಉಲ್ಲೇಖಿಸಿ ಸದನದಲ್ಲಿ ಮಾತನಾಡಿದ ರಾಹುಲ್​ ಗಾಂಧಿ, ಅದಾನಿ ಸಮೂಹ ಸಂಸ್ಥೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉತ್ತಮ ಸಂಬಂಧ ಇದೆ. ಕೆಲವು ಬಿಲೇನಯರ್​ ಕೈಗಾರಿಕೋದ್ಯಮಿಗಳ ಓಲೈಕೆಗಾಗಿ ಕೆಲವು ವಲಯಗಳಲ್ಲಿ ನಿಯಮಗಳನ್ನು ಬದಲಾಯಿಸಲಾಗಿದೆ ಎಂದು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ವೇಳೆ ಆರೋಪಿಸಿದ್ದರು.

ಗೌತಮ್​ ಅದಾನಿ ಜೊತೆಗೆ ಪ್ರಧಾನಿ ಮೋದಿ ಅವರ ಸ್ನೇಹ ಅವರು ಗುಜರಾತ್​ ಮುಖ್ಯಮಂತ್ರಿಯಾದಗಲೇ ಇತ್ತು. 2014ರಲ್ಲಿ ರಿಯಲ್​ ಮ್ಯಾಜಿಕ್​ ಶುರುವಾಯಿತು. ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 609ನೇ ಸ್ಥಾನದಲ್ಲಿದ್ದ ಅದಾನಿ ಬಳಿಕ ಎರಡನೇ ಸ್ಥಾನ ತಲುಪಿದರು. ಪ್ರಧಾನಿ ಮೋದಿ ಅವರಿಗೆ ಭುಜಕೊಟ್ಟು ಭುಜ ಒದಗಿಸಿ ಒಬ್ಬ ವ್ಯಕ್ತಿ ನಿಂತಿದ್ದ. ಪ್ರಧಾನಿ ಬಲು ನಿಷ್ಟೆಯಿಂದ ಆ ವ್ಯಕ್ತಿ ಇದ್ದ. 2014ರಲ್ಲಿ ಪ್ರಧಾನಿ ರಾಷ್ಟ್ರ ರಾಜಧಾನಿ ತಲುಪಿದ ಬಳಿಕ ನಿಜವಾದ ಮ್ಯಾಜಿಕ್​ ಶುರುವಾಯಿತು ಎಂದು ಮೋದಿ ವಿರುದ್ಧ ಆರೋಪ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ರಾಹುಲ್​ ಗಾಂಧಿ ಹೇಳಿಕೆ ವಿರೋಧಿಸಿ ಸಂಸತ್ತಿನ ಕೆಳಮನೆ ಮತ್ತು ಮೇಲ್ಮನೆ​ಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು. ಈ ಕುರಿತು ಮಾತನಾಡಿದ ಬಿಜೆಪಿ ನಾಯಕ ರವಿ ಶಂಕರ್​ ಪ್ರಸಾದ್​, ಇದು ಹುರುಳಿಲ್ಲದ ಆರೋಪ ಮತ್ತು ಇಡೀ ಕಾಂಗ್ರೆಸ್​ ವ್ಯವಸ್ಥೆ ನಿಂತಿರುವುದೇ ಡೀಲ್​ ಮತ್ತು ಕಮಿಷನ್​ ಮೇಲೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ದೆಹಲಿ - ಮುಂಬೈ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಿದ ಪ್ರಧಾನಿ: ಕಾಂಗ್ರೆಸ್ ಸೈನಿಕರ ಶೌರ್ಯ ಕಡೆಗಣಿಸಿದೆ ಎಂದ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.