ETV Bharat / bharat

ತೆಲುಗು ರಾಜ್ಯಗಳಲ್ಲಿ ರಸ್ತೆ ಅಪಘಾತಗಳು: 8 ಜನ ಸಾವು, ಹಲವರಿಗೆ ಗಾಯ

author img

By

Published : Jun 1, 2023, 11:46 AM IST

road accidents in Telugu states  road accidents in Andhra Pradesh  road accidents in Telangana  ತೆಲುಗು ರಾಜ್ಯಗಳಲ್ಲಿ ರಸ್ತೆ ಅಪಘಾತಗಳು  8 ಜನ ಸಾವು  ದ ಮೂರು ಪ್ರತ್ಯೇಕ ರಸ್ತೆ ಅಪಘಾತ  ಆಂಧ್ರಪ್ರದೇಶ ಮತ್ತು ತೆಲಂಗಾಣ  ರಾಜ್ಯದ ರಸ್ತೆಗಳು ರಕ್ತಸಿಕ್ತ  ವಾಹನ ಸವಾರರು ರಸ್ತೆಗೆ ಬರಲು ಹೆದರುತ್ತಿದ್ದಾರೆ
ತೆಲುಗು ರಾಜ್ಯಗಳಲ್ಲಿ ರಸ್ತೆ ಅಪಘಾತಗಳು

ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಗುರುವಾರ ಸಂಭವಿಸಿದ ಮೂರು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ.

ಹೈದರಾಬಾದ್ (ತೆಲಂಗಾಣ): ತೆಲುಗು ರಾಜ್ಯದ ರಸ್ತೆಗಳು ಹದಗೆಡುತ್ತಿವೆ. ವಾಹನ ಸವಾರರು ರಸ್ತೆಗೆ ಬರಲು ಹೆದರುತ್ತಿದ್ದಾರೆ. ಸಾವು ಯಾವ ದಾರಿ, ಸ್ವರೂಪದಲ್ಲಿ ಬರುವುದೋ ಎಂದು ಚಿಂತಿಸುತ್ತಿದ್ದಾರೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಸಂಭವಿಸಿದ ಪ್ರತ್ಯೇಕ ಮೂರು ಅಪಘಾತಗಳಲ್ಲಿ ಒಟ್ಟು ಎಂಟು ಜನರು ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ.

ಖಮ್ಮಂನಲ್ಲಿ 2 ಅಪಘಾತ, ಐವರು ಸಾವು: ತೆಲಂಗಾಣದ ಖಮ್ಮಂ ಜಿಲ್ಲೆಯ ಕೋಣಿಜಾರ್‌ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕೊಣಿಜರ್ಲ ಕಡೆಯಿಂದ ವೈರಾ ಕಡೆಗೆ ಹೋಗುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಚಿಂತಕಣಿ ತಾಲೂಕಿನ ಪ್ರದ್ದೂರಿನಿಂದ ವೈರಾ ಕಡೆಗೆ ಹೋಗುತ್ತಿದ್ದ ಲಾರಿ ಏಕಾಏಕಿ ಬ್ರೇಕ್ ಹಾಕಿದೆ. ಇದನ್ನು ಗಮನಿಸಿ ಹಿಂಬದಿಯಲ್ಲಿದ್ದ ಕಾರು ತಕ್ಷಣವೇ ವಾಹನದ ಬ್ರೇಕ್​ ಹಾಕಿದ್ದಾರೆ. ಆದರೆ ಕಾರಿನ ಹಿಂದೆಯೇ ಬಂದ ಇನ್ನೊಂದು ಲಾರಿ ಚಾಲಕ ಇದನ್ನು ಗಮನಿಸಲಿಲ್ಲ. ಲಾರಿಯನ್ನು ಅತಿವೇಗದಲ್ಲಿ ಚಲಾಯಿಸಿಕೊಂಡು ಹೋಗಿ ಮುಂದೆ ನಿಂತಿದ್ದ ಕಾರಿಗೆ ಬಲವಾಗಿ ಡಿಕ್ಕಿ ಹೊಡೆದಿದ್ದಾನೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಾರಿ-ಲಾರಿ ಮುಖಾಮುಖಿ ಡಿಕ್ಕಿ: ಖಮ್ಮಂ ಜಿಲ್ಲೆಯಲ್ಲಿ ಮತ್ತೊಂದು ಘಟನೆ ನಡೆದಿದೆ. ಪೆನುಬಳ್ಳಿ ತಾಲೂಕಿನ ವಿ.ಎಂ.ಬಂಜಾರ್ ಎಂಬಲ್ಲಿ ಎರಡು ಲಾರಿಗಳು ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಲಾರಿಗಳ ಚಾಲಕರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಎರಡು ಲಾರಿಗಳ ಮುಖಾಮುಖಿ ಡಿಕ್ಕಿ ಹೊಡೆದು ಕ್ಯಾಬಿನ್‌ಗಳು ನಜ್ಜುಗುಜ್ಜಾಗಿದ್ದು, ಚಾಲಕರಿಬ್ಬರು ಕ್ಯಾಬಿನ್‌ನಲ್ಲೇ ಸಿಲುಕಿದ್ದರು ಕಿರುಚಿಕೊಂಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಎರಡು ಗಂಟೆಗಳ ಬಳಿಕ ಕ್ರೇನ್ ಸಹಾಯದಿಂದ ಚಾಲಕರನ್ನು ಹೊರ ತೆಗೆದರು. ಅಷ್ಟೊತ್ತಿಗಾಗಲೇ ಇಬ್ಬರು ಚಾಲಕರು ಸಾವನ್ನಪ್ಪಿದ್ದರು. ಒಬ್ಬರು ಬಿಹಾರ ಮೂಲದ ಧರ್ಮೇಂದ್ರ ಕುಮಾರ್ ಯಾದವ್ (35) ಮತ್ತು ಇನ್ನೊಬ್ಬರ ವಿವರ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹಗಳನ್ನು ಪೆನುಬಳ್ಳಿ ಆಸ್ಪತ್ರೆಗೆ ರವಾನಿಸಲಾಗಿದೆ. ಅವಘಡದಿಂದಾಗಿ ಎರಡು ಗಂಟೆಗಳ ಕಾಲ ಭಾರಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ರಸ್ತೆಯಲ್ಲಿ ಅಪಘಾತಕ್ಕೀಡಾದ ಲಾರಿಗಳನ್ನು ಪಕ್ಕಕ್ಕೆ ಎಳೆದು ವಾಹನಗಳ ಸಂಚಾರವನ್ನು ಪೊಲೀಸರು ಸುಗಮಗೊಳಿಸಿದರು.

ತಿರುಪತಿಯಲ್ಲಿ ರಸ್ತೆ ಅಪಘಾತ: ತಿರುಪತಿ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಜರುಗಿದೆ. ಎರ್ಪೇಡು ತಾಲೂಕಿನ ಮೇರ್‌ಪಾಕಚೆರುವು ಎಂಬಲ್ಲಿ ಆರ್‌ಟಿಸಿ ಬಸ್‌ಗೆ ಕಾರು ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಪತಿ, ಪತ್ನಿ ಹಾಗೂ ಮಗು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡರು. ಗಾಯಾಳುಗಳನ್ನು ಚಿಕಿತ್ಸೆಗಾಗಿ ತಿರುಪತಿಯ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರನ್ನು ಮಹಬೂಬಾಬಾದ್ ಜಿಲ್ಲೆಯ ದಿವಾನ್‌ಪಲ್ಲೆ ನಿವಾಸಿಗಳು ಎಂದು ಪೊಲೀಸರು ಗುರುತಿಸಿದ್ದಾರೆ.

ಇದನ್ನೂ ಓದಿ: 'ಸಾಹಿಲ್ ಖಾನ್​ ಬಗ್ಗೆ ನನಗೆ ಗೊತ್ತಿತ್ತು, ಮಗಳಿಗೆ ದೂರವಿರಲು ಹೇಳಿದ್ದೆ, ಆದರೆ ಆಕೆ...': ಸಾಕ್ಷಿ ತಂದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.