ETV Bharat / bharat

'ಸಾಹಿಲ್ ಖಾನ್​ ಬಗ್ಗೆ ನನಗೆ ಗೊತ್ತಿತ್ತು, ಮಗಳಿಗೆ ದೂರವಿರಲು ಹೇಳಿದ್ದೆ, ಆದರೆ ಆಕೆ...': ಸಾಕ್ಷಿ ತಂದೆ

author img

By

Published : Jun 1, 2023, 10:57 AM IST

ದೇಶವನ್ನೇ ಬೆಚ್ಚಿ ಬೀಳಿಸಿದ ದೆಹಲಿಯ ಅಮಾನವೀಯ ಕೊಲೆ ಪ್ರಕರಣದ ಕೆಲವು ಅಂಶಗಳು ಹೊರಬಿದ್ದಿವೆ.

Sakshi father knew about Sahil  told her to stay away from him  delhi murder case  ದೇಶವೇ ಬೆಚ್ಚಿ ಬೀಳಿಸಿದ ದೆಹಲಿಯ ಕೊಲೆ ಪ್ರಕರಣ  ಸಾಹಿಲ್​ ಬಗ್ಗೆ ನನಗೆ ಗೊತ್ತು  ಮಗಳಿಗೆ ಅವನಿಂದ ದೂರವಿರಲು ಹೇಳಿದ್ದೆ  ಎಫ್​ಐಆರ್​ ಕಾಪಿ ಮಾಧ್ಯಮಕ್ಕೆ ಲಭ್ಯ  ದೆಹಲಿಯ ಶಹಬಾದ್ ಡೈರಿ ಪ್ರದೇಶ  ಆಕೆಯ ಪ್ರಿಯಕರ ಮೊಹಮ್ಮದ್ ಸಾಹಿಲ್ ಖಾನ್  ಸಾಹಿಲ್ ಖಾನ್ ಬರ್ಬರವಾಗಿ ಹತ್ಯೆಗೈದ ಪ್ರಕರಣ  ಸಾಕ್ಷಿ ಕಳೆದ ವರ್ಷದಿಂದ ಸಾಹಿಲ್ ಜೊತೆ ಸ್ನೇಹ
ನನ್ನ ಮಗಳಿಗೆ ಅವನಿಂದ ದೂರವಿರಲು ಹೇಳಿದ್ದೆ

ನವದೆಹಲಿ: ದೆಹಲಿಯ ಶಹಬಾದ್ ಡೈರಿ ಪ್ರದೇಶದಲ್ಲಿ 16 ವರ್ಷದ ಬಾಲಕಿ ಸಾಕ್ಷಿಯನ್ನು ಕಿಡಿಗೇಡಿ ಪ್ರೇಮಿ ಮೊಹಮ್ಮದ್ ಸಾಹಿಲ್ ಖಾನ್ ಎಂಬಾತ ಇತ್ತೀಚೆಗೆ ಅತ್ಯಂತ ಬರ್ಬರವಾಗಿ ಹತ್ಯೆಗೈದಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಅವರ ಸ್ನೇಹ ಸಂಬಂಧದ ಬಗ್ಗೆ ಆಕೆಯ ತಂದೆಗೆ ತಿಳಿದಿತ್ತು ಎಂಬ ಅಂಶ ಉಲ್ಲೇಖವಾಗಿದೆ.

ಎಫ್‌ಐಆರ್ ಪ್ರಕಾರ, ಸಾಕ್ಷಿ ತಂದೆ ಜನಕ್ ರಾಜ್ (35) ಹೇಳುವಂತೆ, "ನಮ್ಮ ಮಗಳು ಆತನ ಬಗ್ಗೆ ಆಗಾಗ್ಗೆ ಮಾತನಾಡುತ್ತಿದ್ದಳು. ಅವಳ ವಯಸ್ಸಿಗೆ ಇದು ಸೂಕ್ತವಲ್ಲ ಎಂದು ನಾವು ಅವಳಿಗೆ ಪದೇ ಪದೇ ಹೇಳಿದ್ದೆವು. ಆದರೆ, ಈ ವಿಷಯ ತೆಗೆದಾಗಲೆಲ್ಲ ಆಕೆ ಕೋಪಗೊಂಡು ಸ್ನೇಹಿತೆ ನೀತು ಮನೆಗೆ ಹೋಗುತ್ತಿದ್ದಳು. ಸಾಕ್ಷಿ ಕಳೆದ 10 ದಿನಗಳಿಂದ ನೀತು ಜೊತೆಯಲ್ಲೇ ಇದ್ದಳು. ಮೇ 29- 30ರ ರಾತ್ರಿ ನೀತು ನಮ್ಮ ಮನೆಗೆ ಓಡಿ ಬಂದು ಸಾಕ್ಷಿಯ ಸ್ನೇಹಿತ ಸಾಹಿಲ್ ಖಾನ್ ನಿಮ್ಮ ಮಗಳಿಗೆ ಚಾಕುವಿನಿಂದ ಇರಿದಿದ್ದಾನೆ ಎಂದು ತಿಳಿಸಿದಳು" ಎಂದು ವಿವರಿಸಿದ್ದಾರೆ.

ಇನ್ನು, ಬುಧವಾರ ಮುಂಜಾನೆ ಪೊಲೀಸರು ಕೊಲೆ ದೃಶ್ಯ ಮರುಸೃಷ್ಟಿಸಲು ಆರೋಪಿಯನ್ನು ಅಪರಾಧ ನಡೆದ ಸ್ಥಳಕ್ಕೆ ಕರೆದೊಯ್ದಿದ್ದರು. ಮೂಲಗಳ ಪ್ರಕಾರ, ತನಿಖಾಧಿಕಾರಿಗಳು ಸಾಹಿಲ್‌ ಖಾನ್‌ಗೆ ಮನೋವಿಶ್ಲೇಷಣೆ ಪರೀಕ್ಷೆ ಅಥವಾ ಸೈಕೋ ಮೌಲ್ಯಮಾಪನ ಪರೀಕ್ಷೆ ನಡೆಸಲು ಪರಿಗಣಿಸಬಹುದು ಎಂದು ವರದಿಯಾಗಿದೆ. ಮನೋವಿಶ್ಲೇಷಣೆಯ ಪರೀಕ್ಷೆಯ ಸಮಯದಲ್ಲಿ ಸಾಹಿಲ್‌ ಕುಟುಂಬ, ಸ್ನೇಹಿತರು ಮತ್ತು ಜೀವನಶೈಲಿಯ ಬಗ್ಗೆ ಪ್ರಶ್ನಿಸಲಾಗುತ್ತದೆ. ಈ ಪರೀಕ್ಷೆಯು ಸುಮಾರು ಮೂರು ಗಂಟೆಗಳ ಕಾಲ ನಡೆಯುವ ನಿರೀಕ್ಷೆಯಿದೆ. ಕೊಲೆಗಾರನ ಮಾನಸಿಕ ಸ್ಥಿತಿಮಿತಿಯ ಒಳನೋಟವನ್ನು ಪಡೆಯಲು ಪೊಲೀಸರಿಗೆ ಸಹಾಯ ಮಾಡುವ ಉದ್ದೇಶವನ್ನು ಇದು ಹೊಂದಿದೆ. ಅನುಭವಿ ಮನೋವೈದ್ಯರು ಪರೀಕ್ಷೆ ನಡೆಸುತ್ತಾರೆ ಎಂದು ಮೂಲಗಳು ತಿಳಿಸಿವೆ.

ಸಾಕ್ಷಿ ತನ್ನನ್ನು ನಿರ್ಲಕ್ಷಿಸಲು ಆರಂಭಿಸಿದ ನಂತರ ವಿಪರೀತ ಕೋಪದಿಂದ ಹೇಯ ಕೃತ್ಯ ಎಸಗಿರುವುದಾಗಿ 20ರ ಹರೆಯದ ದುರುಳ ಸಾಹಿಲ್ ತನಿಖಾಧಿಕಾರಿಗಳ ಮುಂದೆ ಬಹಿರಂಗಪಡಿಸಿದ್ದಾನೆ. ಅಪರಾಧಕ್ಕೆ ಬಳಸಿದ ಚಾಕುವನ್ನು ಪೊದೆಗೆ ಎಸೆದಿರುವುದಾಗಿ ಆತ ಹೇಳಿದ್ದಾನೆ. ಆದರೆ, ಇನ್ನೂ ಪತ್ತೆಯಾಗಿಲ್ಲ. ತನಿಖೆಯಲ್ಲಿ ತೊಡಗಿರುವ ಅಧಿಕಾರಿಯೊಬ್ಬರು ಸಾಹಿಲ್ ಹೇಳಿಕೆಗಳು ಅಸಮಂಜಸವಾಗಿವೆ ಎಂದು ಹೇಳಿದ್ದಾರೆ.

ಪ್ರಾಥಮಿಕ ವಿಚಾರಣೆಯ ವೇಳೆ, ಸಾಹಿಲ್ ಖಾನ್‌​ ಅಪರಾಧದ ದಿನದಿಂದ ಸುಮಾರು 15 ದಿನಗಳ ಮೊದಲು ಹರಿದ್ವಾರದಿಂದ ಚಾಕು ಖರೀದಿಸಿದ್ದ ಎಂದು ತಿಳಿದುಬಂದಿದೆ. ಬಾಲಕಿ ಸಾಕ್ಷಿ ತನ್ನ ಮಾಜಿ ಗೆಳೆಯ ಪ್ರವೀಣ್​ ಎಂಬಾತನನ್ನು ಭೇಟಿ ಮಾಡುತ್ತಿದ್ದಳು. ಅವರಿಬ್ಬರು ಕೆಲ ವರ್ಷಗಳ ಹಿಂದೆಯೇ ಬೇರೆ ಆಗಿದ್ದರೂ ಸಹ ಸಂಪರ್ಕದಲ್ಲಿದ್ದರು. ನನ್ನನ್ನು ನಿರ್ಲಕ್ಷಿಸಿದ್ದರಿಂದ ಉದ್ರೇಕಗೊಂಡು ಈ ರೀತಿ ಮಾಡಿದ್ದೇನೆ. ಅಷ್ಟೇ ಅಲ್ಲ ಸಾಕ್ಷಿ ಮತ್ತು ಆಕೆಯ ಸ್ನೇಹಿತೆ ಭಾವನಾ ಗೆಳೆಯ ಜಬ್ರು ಎಂದು ಕರೆಯಲ್ಪಡುವ ಅಜಯ್ ಈ ಹಿಂದೆ ನನಗೆ ಅವಳಿಂದ ದೂರವಿರುವಂತೆ ಎಚ್ಚರಿಕೆ ನೀಡಿದ್ದನು ಎಂದು ಸಾಹಿಲ್​ ವಿಚಾರಣೆಯಲ್ಲಿ ವೇಳೆ ತಿಳಿಸಿದ್ದಾನೆ ಎಂದು ತನಿಖಾಧಿಕಾರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸಾಹಿಲ್‌ ಖಾನ್ ಕೊನೆಯ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹುಕ್ಕಾ ಪಾರ್ಟಿ! ಗಾಯಕ ಮೂಸೆ ವಾಲಾ ಹಾಡುಗಳಿಗೆ ನೃತ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.