ETV Bharat / assembly-elections

ಸೋಮಣ್ಣ vs ಸಿದ್ದರಾಮಯ್ಯ; ಆರ್‌.ಅಶೋಕ್‌ vs ಡಿ.ಕೆ.ಶಿವಕುಮಾರ್: ಬಿಜೆಪಿ ಮೆಗಾ ರಣತಂತ್ರ!

author img

By

Published : Apr 11, 2023, 10:26 PM IST

Updated : Apr 11, 2023, 10:49 PM IST

ಚಾಮರಾಜನಗರ ಮತ್ತು ವರುಣಾದಲ್ಲಿ ಎರಡೂ ಕಡೆ ಸೋಮಣ್ಣ ಸ್ಪರ್ಧಿಸುತ್ತಿದ್ದಾರೆ. ಇನ್ನೊಂದೆಡೆ, ಕನಕಪುರದಿಂದ ಆರ್.ಅಶೋಕ್‌ಗೆ ಬಿಜೆಪಿ ಟಿಕೆಟ್ ನೀಡಿದೆ.

Etv Bharat
ವಿ.ಸೋಮಣ್ಣ ಹಾಗೂ ಆರ್ ಅಶೋಕ್

ಬೆಂಗಳೂರು: ಚಾಮರಾಜನಗರ ಮತ್ತು ವರುಣಾ ಎರಡೂ ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಚಿವ ವಿ.ಸೋಮಣ್ಣ ಅವರಿಗೆ ಬಿಜೆಪಿ ಟಿಕೆಟ್ ಪ್ರಕಟಿಸಿದೆ. ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸೋಮಣ್ಣ ಸ್ಪರ್ಧಿಸಲಿದ್ದಾರೆ. ಸಚಿವ ಆರ್.ಅಶೋಕ್ ಅವರಿಗೆ​ ಪದ್ಮನಾಭನಗರ ಮತ್ತು ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್​​ ಹಂಚಿಕೆ ಮಾಡಲಾಗಿದೆ.

ಕನಕಪುರದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕಟ್ಟಿ ಹಾಕಲು ಅಶೋಕ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. ಈ ಮೂಲಕ ಕೈ ಪಕ್ಷದ ಇಬ್ಬರು‌ ಘಟಾನುಘಟಿ ನಾಯಕರನ್ನು ಅವರ ಕ್ಷೇತ್ರದಲ್ಲೇ ಮಣಿಸಲು ಬಿಜೆಪಿ ಭಾರಿ ರಣತಂತ್ರ ರೂಪಿಸಿದೆ. ಇನ್ನು, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್​ ಹಾಗೂ ಶಿವಮೊಗ್ಗ ನಗರ ಕ್ಷೇತ್ರವನ್ನು ಬಾಕಿ ಉಳಿಸಿಕೊಳ್ಳಲಾಗಿದೆ.

ಸೋಮಣ್ಣಗೆ ಡಬಲ್ ಹೊಣೆಗಾರಿಕೆ: ತೀವ್ರ ಕುತೂಹಲ, ಜಿದ್ದಾಜಿದ್ದಿನಿಂದ ಕೂಡಿದ್ದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕೊನೆಗೂ ಇಂದು ಬಿಡುಗಡೆಯಾಗಿದ್ದು, ಚಾಮರಾಜನಗರ ಮತ್ತು ವರುಣದಲ್ಲಿ ವಿ.ಸೋಮಣ್ಣ ಬಿಜೆಪಿ ಕಲಿಯಾಗಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಈ ಎರಡೂ ಕ್ಷೇತ್ರಗಳಲ್ಲಿ ಲಿಂಗಾಯತರ ಪ್ರಾಬಲ್ಯವಿದ್ದರೂ ಕಾಂಗ್ರೆಸ್ ಭದ್ರವಾಗಿ ನೆಲೆಯೂರಿದೆ. ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಿಸಲೇ ಬೇಕೆಂದು ಪಣ ತೊಟ್ಟಿರುವ ಕೇಸರಿಪಡೆಗೆ ವಿ.ಸೋಮಣ್ಣ ಸಾರಥಿಯಾಗಿದ್ದು ಎರಡು ಟಿಕೆಟ್​ಗಳನ್ನು ಕೊಡುವ ಮೂಲಕ ವಸತಿ ಸಚಿವಗೆ ಸೋಮಣ್ಣಗೆ ಡಬಲ್ ಹೊಣೆವಹಿಸಿದೆ.

ಪುತ್ರ ಹಾಗು ತಮಗೂ ಸೇರಿ ಎರಡು ಟಿಕೆಟ್​ಗಳನ್ನು ವಿ.ಸೋಮಣ್ಣ ಕೇಳಿದ್ದರು. ಆದರೆ, ಹೈಕಮಾಂಡ್ ಏನೋ‌ 2 ಟಿಕೆಟ್ ಕೊಟ್ಟಿದೆ. ಆದರೆ, ಸೋಮಣ್ಣ ಅವರೇ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಬೇಕಾದ ಅನಿವಾರ್ಯತೆ ಮತ್ತು ತಮ್ಮ ವರ್ಚಸ್ಸನ್ನು ತೋರಬೇಕಾದ ಕಾಲ ಎದುರಾಗಿದೆ. ಲಿಂಗಾಯತ ಸಮುದಾಯದ ನಾಯಕನಾಗಿರುವ ವಿ.ಸೋಮಣ್ಣ ಕಾಂಗ್ರೆಸ್​ನ ಮಾಸ್ ಲೀಡರ್ ಸಿದ್ದರಾಮಯ್ಯ ಅವರನ್ನು ಮಣಿಸುವ ಜೊತೆಗೆ ಕಳೆದ ಮೂರು ಸಾಲಿನಿಂದ ಕೈ ವಶದಲ್ಲಿರುವ ಚಾಮರಾಜನಗರದಲ್ಲಿ ಕಮಲ‌ ಅರಳಿಸುವ ಡಬಲ್ ಟಾರ್ಗೆಟ್ ಕೊಟ್ಟಿದೆ ಮೋದಿ ಟೀಂ.

ಸಾಂಪ್ರದಾಯಿಕ ಎದುರಾಳಿಗೆ ಟಿಕೆಟ್: ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದಲ್ಲಿ ಆರಂಭದಿಂದಲೂ ಎರಡು ಕುಟುಂಬಗಳ‌ ನಡುವೆಯೇ ಫೈಟ್ ನಡೆಯುತ್ತಿದ್ದು, ಇದು ಈ ಬಾರಿಯೂ ಮುಂದುವರೆಯಲಿದೆ. ಕಾಂಗ್ರೆಸ್​ನಿಂದ ಆರ್.ನರೇಂದ್ರ ಕಣಕ್ಕಿಳಿಯಲಿದ್ದು ಬಿಜೆಪಿಯಿಂದ ಡಾ.ಪ್ರೀತಂ ನಾಗಪ್ಪರನ್ನು ಕಣಕ್ಕಿಳಿಸಲು ಬಿಜೆಪಿ ಗ್ರೀನ್ ಸಿಗ್ನಲ್ ಕೊಟ್ಟಿದೆ. ನಿರೀಕ್ಷೆಯಂತೆ ಕೊಳ್ಳೇಗಾಲದಲ್ಲಿ ಹಾಲಿ ಶಾಸಕ ಎನ್.ಮಹೇಶ್ ಮತ್ತು‌ ಗುಂಡ್ಲುಪೇಟೆಯಲ್ಲಿ ಹಾಲಿ ಶಾಸಕ‌ ನಿರಂಜನಕುಮಾರ್ ಕಮಲ ಕಲಿಗಳಾಗಿ ರಣರಂಗಕ್ಕೆ ಇಳಿಯಲಿದ್ದಾರೆ.

ಇದನ್ನೂ ಓದಿ: ಬೇರೆ ಪಕ್ಷದವರು ನನ್ನೊಂದಿಗೆ ಮಾತಾಡಿಲ್ಲ; ನಾನು ಸ್ಪರ್ಧೆ ಮಾಡೋದು ಖಚಿತ- ಶೆಟ್ಟರ್

Last Updated :Apr 11, 2023, 10:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.