ಕರ್ನಾಟಕ

karnataka

ಬಿಜೆಪಿಯದ್ದು ವಿಜಯ ಸಂಕಲ್ಪ ಯಾತ್ರೆಯಲ್ಲ, ಕ್ಷಮಾಪಣಾ ಯಾತ್ರೆ: ರಣದೀಪ್​ ಸುರ್ಜೇವಾಲಾ

By

Published : Mar 2, 2023, 2:16 PM IST

ರಣದೀಪ್​ ಸುರ್ಜೇವಾಲಾ

ಚಾಮರಾಜನಗರ: ಬಿಜೆಪಿ ರಾಜ್ಯದಲ್ಲಿ ಆರಂಭಿಸಿರುವುದು ವಿಜಯ ಸಂಕಲ್ಪ ಯಾತ್ರೆಯಲ್ಲ, ಅದು ರಾಜ್ಯದ ಜನರಿಗೆ ಕೇಳುತ್ತಿರುವ ಕ್ಷಮಾಪಣಾ ಯಾತ್ರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂಣದೀಪ್​ ಸಿಂಗ್​ ಸುರ್ಜೇವಾಲಾ ಟೀಕಿಸಿದರು. ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಭ್ರಷ್ಟಾಚಾರ ಮಿತಿ ಮೀರಿದ್ದು, ಬ್ರಾಂಡ್ ಕರ್ನಾಟಕ ಎಂಬುದನ್ನೇ ಹಾಳು ಮಾಡಿದ್ದಾರೆ. ಉದ್ಯೋಗ ನೇಮಕಾತಿಯಲ್ಲಿ ಹಗರಣ ಮಾಡಿ 40% ಕಮಿಷನ್ ಪಡೆದು ಈಗ ಹತಾಶೆ ಮನೋಭಾವದಿಂದ ಯಾತ್ರೆ ಆರಂಭಿಸಿದ್ದಾರೆ. ಇದು ಸಂಕಲ್ಪ ಯಾತ್ರೆಯಲ್ಲ, ಕ್ಷಮಾಪಣಾ ಯಾತ್ರೆ ಎಂದು ಕಿಡಿಕಾರಿದರು. ಜೊತೆಗೆ ಕಾಂಗ್ರೆಸ್​ನ ಭರವಸೆಗಳು ಜನರ ಮನ ಮುಟ್ಟುತ್ತಿವೆ ಎಂದು ಸುರ್ಜೇವಾಲಾ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ವಿಜಯ ಸಂಕಲ್ಪ ಯಾತ್ರೆಗೆ ಹಸಿರು ನಿಶಾನೆ ತೋರಿಸಿದ ಜೆ.ಪಿ ನಡ್ಡಾ

ABOUT THE AUTHOR

...view details